ಅಡುಗೆ ಮನೆ ಸೇರಬೇಕಾಗಿದ್ದ ಈರುಳ್ಳಿ ಈಗ ತಿಪ್ಪೆ ಪಾಲಾಗುತ್ತಿದೆ. ಜಾನುವಾರು ಸಗಣಿಯನ್ನು ಎಸೆಯುವಂತೆ ಈರುಳ್ಳಿಯನ್ನು ಬುಟ್ಟಿಯಲ್ಲಿ ತುಂಬಿ ಹೀಗೆ ತಿಪ್ಪೆಗೆ ಹಾಕಲಾಗುತ್ತಿದೆ. ಕೈಗೆ ಸಿಕ್ಕ ಫಸಲು ಮಾರಾಟ ಮಾಡಬೇಕಿದ್ದ ರೈತ ಈರುಳ್ಳಿ ಮೇಲೆ ಮುನಿಸಿಕೊಂಡಿದ್ದಾನೆ. ಆಗಾಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಈಗ ಬೆಳೆಗಾರರ ಬದುಕಿಗೇ ಕೊಳ್ಳಿ ಇಟ್ಟಿದೆ.