ಸಾಹಿತ್ಯ, ಶಿಕ್ಷಣ, ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕರ್ನಾಟಕದ ಎಂಟು ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮ ಪ್ರಶಸ್ತಿ’ಗಳಿಗೆ ಭಾಜನರಾಗಿದ್ದಾರೆ. ಸಾಧಕರ ಪರಿಚಯ ಇಲ್ಲಿದೆ.
ಅನಿರೀಕ್ಷಿತವಾಗಿ ಈ ಪ್ರಶಸ್ತಿ ಬಂದಿದೆ. ಎಲ್ಲರ ಬೆಂಬಲದಿಂದ ಅಂದುಕೊಂಡಿದ್ದನ್ನು ಸಾಕಾರ ಮಾಡಲು ಸಾಧ್ಯವಾಯಿತು. ಈ ಪ್ರಶಸ್ತಿಯು ಇನ್ನುಷ್ಟು ಕಾರ್ಯಸಾಧನೆ ಮಾಡಲು ಉತ್ತೇಜಿಸಲಿದೆ. ಬುಡಕಟ್ಟು ಸಮುದಾಯದವರಿಗೆ ಮನೆ ಉದ್ಯೋಗ ಒದಗಿಸಬೇಕೆಂಬ ಕನಸಿದೆ. ಸದ್ಯ ಆ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ. ನಮ್ಮ ಕನಸುಗಳಿಗೆ ವಿವಿಧ ಸಂಘ–ಸಂಸ್ಥೆಗಳು ನೆರವಾಗುತ್ತಿವೆ. ಇದರಿಂದ ಸಮಾಜಸೇವೆ ಸಾಧ್ಯವಾಗುತ್ತಿದೆ.
–ಎಸ್.ಜಿ. ಸುಶೀಲಮ್ಮ
ಸಾಮಾಜಿಕ ಸೇವೆ ನನ್ನ ಉಸಿರು. ‘ಪದ್ಮಶ್ರೀ’ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಇದನ್ನು ಕೆಎಲ್ಇ ಸಂಸ್ಥೆಯ ಇಡೀ ಸಮೂಹಕ್ಕೆ ಮತ್ತು ರೈತರಿಗೆ ಅರ್ಪಿಸುವೆ.
– ಪ್ರಭಾಕರ ಕೋರೆ, ರಾಜ್ಯಸಭೆಯ ಮಾಜಿ ಸದಸ್ಯ
ನಾಲ್ಕು ದಶಕಗಳ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಇದು ದೇಶದಾದ್ಯಂತ ಕುಸುಮರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲು ಸಹಕಾರಿ ಆಗಲಿದೆ ಎಂದು ಭಾವಿಸಿದ್ದೇನೆ
– ಡಾ.ಸುರೇಶ್ ಹನಗವಾಡಿ, ವೈದ್ಯ, ದಾವಣಗೆರೆ
ನನಗೆ ಪದ್ಮಶ್ರೀ ಬಂದಿದ್ದು ಕೇಳಿ ಖುಷಿಯಾಯಿತು. ಪ್ರಪಂಚದ ಜ್ಞಾನವನ್ನೆಲ್ಲ ಒಂದೆಡೆ ಸಂಗ್ರಹಿಸಿ ಸಾಮಾನ್ಯರಿಗೆ ತಲುಪಿಸುವ ಆಸೆ ಇತ್ತು. ಪುಸ್ತಕ ಓದುವ, ಸಂಗ್ರಹಿಸುವ ಹವ್ಯಾಸ ಜೀವಂತವಾಗಿ ಇಟ್ಟುಕೊಳ್ಳಬೇಕು.