ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿದವರಲ್ಲಿ ಡಾ.ಪಂ.ಭೀಮಸೇನ ಜೋಶಿ ಅಗ್ರಗಣ್ಯರು. ಶಾಸ್ತ್ರೀಯ ಸಂಗೀತದ ಜತೆಗೆ ದಾಸವಾಣಿ, ಸಂತವಾಣಿಯ ಭಕ್ತಿ ಸಂಗೀತದ ಪರಂಪರೆಗೆ ಅದ್ಭುತ ಕೊಡುಗೆ ನೀಡಿದವರು. ಅವರ ಜನ್ಮಶತಾಬ್ದಿಯ ಅಂಗವಾಗಿ ನಡೆಸುತ್ತಿರುವ ‘ಭೀಮಪಲಾಸ’ ಕಾರ್ಯಕ್ರಮ ಧಾರವಾಡದ ಕರ್ನಾಟಕ ಕಾಲೇಜು ಆವರಣದ ಸೃಜನಾ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದಲ್ಲಿ ಜುಲೈ 30 ಮತ್ತು 31ರಂದು ನಡೆಯಲಿದೆ.