ಚಿತ್ರದುರ್ಗ: ಕೇದಾರನಾಥಕ್ಕೆ ತೆರಳಿದ್ದ ಜಿಲ್ಲೆಯ ಮಹಿಳಾ ಯಾತ್ರಿಕರು ವಿಪರೀತ ಮಳೆ ಹಾಗೂ ಗುಡ್ಡ ಕುಸಿತದಿಂದ ಅಪಾಯಕ್ಕೆ ಸಿಲುಕಿದ್ದಾರೆ.
ಬಿಜೆಪಿ ಮುಖಂಡರಾದ ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇತರರು ವಾರದ ಹಿಂದೆ ಯಾತ್ರೆಗೆ ತೆರಳಿದ್ದರು. ಕೇದಾರನಾಥದಿಂದ 30 ಕಿ.ಮೀ ದೂರದಲ್ಲಿ ಇರುವಾಗ ಗುಡ್ಡ ಕುಸಿತ ಉಂಟಾಗಿದೆ. ಕೇದಾರನಾಥಕ್ಕೆ ತೆರಳಲು ಸಾಧ್ಯವಾಗದೇ ಹಾಗೂ ಮರಳಲು ಅವಕಾಶ ಇಲ್ಲದೇ ಪರಿತಪ್ಪಿಸುತ್ರಿದ್ದಾರೆ.