ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇದಾರನಾಥ ಬಳಿ ಸಿಲುಕಿದ ಚಿತ್ರದುರ್ಗದ ಯಾತ್ರಿಕರು

Published 15 ಆಗಸ್ಟ್ 2023, 6:49 IST
Last Updated 15 ಆಗಸ್ಟ್ 2023, 6:49 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೇದಾರನಾಥಕ್ಕೆ ತೆರಳಿದ್ದ ಜಿಲ್ಲೆಯ ಮಹಿಳಾ ಯಾತ್ರಿಕರು ವಿಪರೀತ ಮಳೆ ಹಾಗೂ ಗುಡ್ಡ ಕುಸಿತದಿಂದ ಅಪಾಯಕ್ಕೆ ಸಿಲುಕಿದ್ದಾರೆ.

ಬಿಜೆಪಿ ಮುಖಂಡರಾದ ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇತರರು ವಾರದ ಹಿಂದೆ ಯಾತ್ರೆಗೆ ತೆರಳಿದ್ದರು. ಕೇದಾರನಾಥದಿಂದ 30 ಕಿ.ಮೀ ದೂರದಲ್ಲಿ ಇರುವಾಗ ಗುಡ್ಡ ಕುಸಿತ ಉಂಟಾಗಿದೆ. ಕೇದಾರನಾಥಕ್ಕೆ ತೆರಳಲು ಸಾಧ್ಯವಾಗದೇ ಹಾಗೂ ಮರಳಲು ಅವಕಾಶ ಇಲ್ಲದೇ ಪರಿತಪ್ಪಿಸುತ್ರಿದ್ದಾರೆ.

'ಯಾತ್ರಿಕರು ಕೇದಾರನಾಥದಲ್ಲಿ ಸಿಲುಕಿದ್ದು ಗಮನಕ್ಕೆ ಬಂದಿದೆ. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ಮಾತನಾಡಲಾಗಿದ್ದು, ಮರಳಿ ಕರೆತರುವ ವ್ಯವಸ್ಥೆ ಮಾಡಲಾಗುತ್ತಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾಧ್ಯಮ ಪ್ರತಿನಿಧಿಗಳಿಗರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT