ನುಡಿಜಾತ್ರೆಯನ್ನು ಧಾರ್ಮಿಕ ಸಮಾವೇಶವನ್ನಾಗಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಒಕ್ಕೂಟವು, ‘ಮಠಮಾನ್ಯಗಳಲ್ಲಿ ಒಂದು ಧಾರ್ಮಿಕ ಸಂಪ್ರದಾಯವಾಗಿ ರೂಢಿಯಲ್ಲಿರುವ ಈ ಪದ್ಧತಿಯು, ಹಲವಾರು ಮತಧರ್ಮದವರು ಸಮಾನತೆಯ ಭಾವದಿಂದ ಭಾಗವಹಿಸುವ ಸಾಹಿತ್ಯ ಸಮ್ಮೇಳನದಲ್ಲಿ ಬೇಕಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಕುಂಭ ಮೆರವಣಿಗೆ ನಿಲ್ಲಿಸದಿದ್ದರೆ ಕುಂಭ ಕಸಿದು ಒಡೆಯುವಂಥ ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಸಿದೆ.