ವಾರಕ್ಕೊಮ್ಮೆ ಪ್ರಕಟವಾಗುತ್ತಾ ಜನಮೆಚ್ಚುಗೆ ಪಡೆದಿದ್ದ ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ 'ವಚನವಾಣಿ' ಈಗ ಕೇಳುಗರ ಬೇಡಿಕೆಯಿಂದ ಪ್ರತಿದಿನವೂ ಪ್ರಕಟವಾಗುತ್ತಿದೆ. ಇದನ್ನು ನಡೆಸಿಕೊಡುವವರು ಡಾ.ಬಸವರಾಜ ಸಾದರ್, ಡಾ.ಕುಮಾರ್ ಕಣವಿ, ಕವಿತಾ ಸಾದರ್ ಹಾಗೂಬಸವ ಕುಮಾರ್ ಅವರ ತಂಡ. ಇದೇ ವೇಳೆ, ಪ್ರತೀ ಶನಿವಾರ ಪ್ರಸಾರವಾಗುವ, ಪ್ರಚಲಿತ ವಿದ್ಯಮಾನಗಳ ಕುರಿತ ಮಾಹಿತಿಪೂರ್ಣ ಚರ್ಚಾ ಸರಣಿ 'ಹರಟೆ ಕಟ್ಟೆ'ಗೆ ಕೇಳುಗರ ಸಂಖ್ಯೆ ದುಪ್ಪಟ್ಟಾಗಿದೆ. ಅಂತೆಯೇ, ಪ್ರತಿ ಶುಕ್ರವಾರ ಮಕ್ಕಳ ಏಕಾಗ್ರತೆಗೆ ನೆರವಾಗುತ್ತಲೇ, ಕಥೆ ಕೇಳಿಸುವ 'ಕಥೆ ಕೇಳು ಮಗುವೇ' ಕಾರ್ಯಕ್ರಮವಂತೂ ಕೋವಿಡ್ ಕಾಲದಲ್ಲಿ ಮಕ್ಕಳ ಮನವರಳಿಸುವಲ್ಲಿ ನೆರವಾಗಿದೆ.