<p><strong>ಬೆಂಗಳೂರು:</strong> ಪ್ರಜಾವಾಣಿ ಮತ್ತು ವೀರಲೋಕ ಪುಸ್ತಕ ಸಂಸ್ಥೆಯು ಯುಗಾದಿ ನಾಟಕ ರಚನಾ ಸ್ಪರ್ಧೆ(2025)ಗೆ ಅರ್ಜಿಗಳನ್ನು ಆಹ್ವಾನಿಸಿದೆ. ನಾಟಕಗಳನ್ನು ಕಳುಹಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ.</p><p>ಮೊದಲನೇ ಬಹುಮಾನ ₹ 25,000, ಎರಡನೇ ಬಹುಮಾನ ₹ 15,000, ಮೂರನೇ ಬಹುಮಾನ ₹ 10,000 ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000 ನೀಡಲಾಗುವುದು. </p>.<p><strong>ಸ್ಪರ್ಧೆಯ ನಿಯಮಗಳು</strong></p><ul><li><p>ವಸ್ತುವಿನ ಆಯ್ಕೆಗೆ ಯಾವುದೇ ನಿರ್ಬಂಧಗಳಿಲ್ಲ.</p></li><li><p>ನಾಟಕವು ಕನ್ನಡ ಭಾಷೆಯಲ್ಲಿನ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ ಭಾಷೆಯ ಅನುವಾದವಾಗಿರಬಾರದು. ಈ ಮೊದಲು ಮಾಧ್ಯಮಗಳಲ್ಲಿ ಪ್ರಕಟ ಅಥವಾ ಪ್ರಸಾರವಾಗಿರಬಾರದು.</p></li><li><p>ರಚನೆ ಮೂರು ಅಂಕದ್ದಾಗಿರಬೇಕು.</p></li><li><p>ನಾಟಕೀಯತೆ ಪ್ರಧಾನ ಗುಣವಾಗಿರಬೇಕು.</p></li><li><p>ರಚನೆಯನ್ನು ಕಡ್ಡಾಯವಾಗಿ ಟೈಪ್ ಮಾಡಿ ಎರಡು ಪ್ರತಿಗಳನ್ನು ಕಳುಹಿಸಬೇಕು.</p></li><li><p>ಎ–4 ಅಳತೆಯಲ್ಲಿ 45 ರಿಂದ 50 ಪುಟಗಳ ಮಿತಿಯಲ್ಲಿರಬೇಕು. ಫಾಂಟ್ ಸೈಜ್ 12 ಇರಬೇಕು.</p></li><li><p>ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ–ಮೇಲ್ ವಿಳಾಸ ಒದಗಿಸಬೇಕು. ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣ ಭಾವಚಿತ್ರದೊಂದಿಗೆ ಕಿರು ಪರಿಚಯವನ್ನು ಕಳುಹಿಸಬೇಕು.</p></li><li><p>ಪ್ರವೇಶಗಳ ಲಕೋಟೆಯ ಮೇಲೆ ‘ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ’ಗಾಗಿ ಎಂದು ಸ್ಪಷ್ಟವಾಗಿ ಬರೆಯಬೇಕು.</p></li><li><p>ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.</p></li><li><p>ಸ್ಪರ್ಧೆಗೆ ಕಳುಹಿಸಿದ ರಚನೆಗಳನ್ನು ಹಿಂದಿರುಗಿಸುವುದಿಲ್ಲ.</p></li><li><p>ಬಹುಮಾನಿತ ನಾಟಕಗಳನ್ನು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಕಾಯ್ದಿರಿಸಿಕೊಂಡಿದೆ.</p></li><li><p>ಸಂಪಾದಕರ ತೀರ್ಮಾನವೇ ಅಂತಿಮ.</p></li></ul>.<p><strong>ಬಹುಮಾನ...</strong></p><p><strong>ಮೊದಲನೇ ಬಹುಮಾನ ₹ 25,000<br>ಎರಡನೇ ಬಹುಮಾನ ₹ 15,000<br>ಮೂರನೇ ಬಹುಮಾನ ₹ 10,000<br>ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000</strong></p>.<p><strong>ಪ್ರವೇಶಗಳು ತಲುಪಲು ಕೊನೆಯ ದಿನಾಂಕ: ಫೆಬ್ರುವರಿ 28, 2025</strong></p><p><strong>ವಿಳಾಸ:</strong> ಸಂಪಾದಕರು, ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ ವಿಭಾಗ<br>ಪ್ರಜಾವಾಣಿ, ನಂ.75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು–560001</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪ್ರಜಾವಾಣಿ ಮತ್ತು ವೀರಲೋಕ ಪುಸ್ತಕ ಸಂಸ್ಥೆಯು ಯುಗಾದಿ ನಾಟಕ ರಚನಾ ಸ್ಪರ್ಧೆ(2025)ಗೆ ಅರ್ಜಿಗಳನ್ನು ಆಹ್ವಾನಿಸಿದೆ. ನಾಟಕಗಳನ್ನು ಕಳುಹಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ.</p><p>ಮೊದಲನೇ ಬಹುಮಾನ ₹ 25,000, ಎರಡನೇ ಬಹುಮಾನ ₹ 15,000, ಮೂರನೇ ಬಹುಮಾನ ₹ 10,000 ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000 ನೀಡಲಾಗುವುದು. </p>.<p><strong>ಸ್ಪರ್ಧೆಯ ನಿಯಮಗಳು</strong></p><ul><li><p>ವಸ್ತುವಿನ ಆಯ್ಕೆಗೆ ಯಾವುದೇ ನಿರ್ಬಂಧಗಳಿಲ್ಲ.</p></li><li><p>ನಾಟಕವು ಕನ್ನಡ ಭಾಷೆಯಲ್ಲಿನ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ ಭಾಷೆಯ ಅನುವಾದವಾಗಿರಬಾರದು. ಈ ಮೊದಲು ಮಾಧ್ಯಮಗಳಲ್ಲಿ ಪ್ರಕಟ ಅಥವಾ ಪ್ರಸಾರವಾಗಿರಬಾರದು.</p></li><li><p>ರಚನೆ ಮೂರು ಅಂಕದ್ದಾಗಿರಬೇಕು.</p></li><li><p>ನಾಟಕೀಯತೆ ಪ್ರಧಾನ ಗುಣವಾಗಿರಬೇಕು.</p></li><li><p>ರಚನೆಯನ್ನು ಕಡ್ಡಾಯವಾಗಿ ಟೈಪ್ ಮಾಡಿ ಎರಡು ಪ್ರತಿಗಳನ್ನು ಕಳುಹಿಸಬೇಕು.</p></li><li><p>ಎ–4 ಅಳತೆಯಲ್ಲಿ 45 ರಿಂದ 50 ಪುಟಗಳ ಮಿತಿಯಲ್ಲಿರಬೇಕು. ಫಾಂಟ್ ಸೈಜ್ 12 ಇರಬೇಕು.</p></li><li><p>ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ–ಮೇಲ್ ವಿಳಾಸ ಒದಗಿಸಬೇಕು. ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣ ಭಾವಚಿತ್ರದೊಂದಿಗೆ ಕಿರು ಪರಿಚಯವನ್ನು ಕಳುಹಿಸಬೇಕು.</p></li><li><p>ಪ್ರವೇಶಗಳ ಲಕೋಟೆಯ ಮೇಲೆ ‘ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ’ಗಾಗಿ ಎಂದು ಸ್ಪಷ್ಟವಾಗಿ ಬರೆಯಬೇಕು.</p></li><li><p>ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.</p></li><li><p>ಸ್ಪರ್ಧೆಗೆ ಕಳುಹಿಸಿದ ರಚನೆಗಳನ್ನು ಹಿಂದಿರುಗಿಸುವುದಿಲ್ಲ.</p></li><li><p>ಬಹುಮಾನಿತ ನಾಟಕಗಳನ್ನು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಕಾಯ್ದಿರಿಸಿಕೊಂಡಿದೆ.</p></li><li><p>ಸಂಪಾದಕರ ತೀರ್ಮಾನವೇ ಅಂತಿಮ.</p></li></ul>.<p><strong>ಬಹುಮಾನ...</strong></p><p><strong>ಮೊದಲನೇ ಬಹುಮಾನ ₹ 25,000<br>ಎರಡನೇ ಬಹುಮಾನ ₹ 15,000<br>ಮೂರನೇ ಬಹುಮಾನ ₹ 10,000<br>ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000</strong></p>.<p><strong>ಪ್ರವೇಶಗಳು ತಲುಪಲು ಕೊನೆಯ ದಿನಾಂಕ: ಫೆಬ್ರುವರಿ 28, 2025</strong></p><p><strong>ವಿಳಾಸ:</strong> ಸಂಪಾದಕರು, ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ ವಿಭಾಗ<br>ಪ್ರಜಾವಾಣಿ, ನಂ.75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು–560001</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>