‘ಪೆನ್ ಡ್ರೈವ್ ಪ್ರಕರಣದ ಹಿಂದೆ ದೊಡ್ಡ ತಿಮಿಂಗಿಲ ಇದೆ’ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಕೇಳಿದಾಗ, ‘ತಿಮಿಂಗಿಲ ಯಾರು ಎಂಬುದನ್ನು ಕುಮಾರಸ್ವಾಮಿ ಹೇಳಲಿ. ಅವರಿಗೆ ಗೊತ್ತಿದ್ದರೆ ಹೇಳದಿರುವುದು ದೊಡ್ಡ ತಪ್ಪು. ಅವರು ಮೊದಲು ದಾಖಲೆ ಕೊಡಲಿ, ಆ ಬಳಿಕ ತನಿಖೆ ನಡೆಸುತ್ತೇವೆ’ ಎಂದು ಹೇಳಿದರು.