<p><strong>ಬೆಂಗಳೂರು</strong>: ಡ್ರಗ್ಪ್ರಕರಣಗಳನ್ನು ಮತ್ತೆ ತೆರೆದು ತನಿಖೆಗೆ ಒಳಪಡಿಸಬೇಕು. ಶೀಘ್ರವೇ ಈ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್ ಹೊರಗೆ ಬರುತ್ತಾರೆ. ಅವರು ಸಿನಿಮಾ ನಿರ್ಮಾಪಕ, ವಿತರಕ, ರಾಜಕಾರಣಿಯೂ ಆಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿದರು.</p>.<p>ನವೆಂಬರ್ 1ರಂದು ನಶೆಯೆಂದರೆ ಎಂಬ ವಿಡಿಯೋ ಹಾಡು ಮತ್ತು ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಡ್ರಗ್ ಜಾಲಕ್ಕೆ ಒಳಗಾಗಿ ತೊಂದರೆಗೊಳಗಾದವರು, ಆ ಜಾಲದಿಂದ ಮುಕ್ತರಾದವರೂ ಇರಲಿದ್ದಾರೆ ಎಂದು ಹೇಳಿದರು.</p>.<p>ನಟಿಯರಷ್ಟೇ ಅಲ್ಲ. ನಟರೂ ಡ್ರಗ್ ತೆಗೆದುಕೊಂಡಿದ್ದಾರೆ. ಪಾರ್ಟಿ ಮೋಜಿಗೆ ಮಾಡಿದ್ದಾರೆ. ಆದರೆ, ಮರು ಮಾರಾಟ ಮಾಡಿಲ್ಲ. ತೆಗೆದುಕೊಂಡಿರುವುದೂ ತಪ್ಪೇ. ಆದರೆ, ನಟಿಯರು ಅದನ್ನು ಮರು ಮಾರಾಟ ಮಾಡಿ ದುಡ್ಡಿನಾಸೆಗೆ ಬಿದ್ದು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಸಂಬರಗಿ ಹೇಳಿದರು.</p>.<p>‘3300 ಕೇಸ್ಗಳನ್ನು ಸಿಸಿಬಿಯವರು ದಾಖಲಿಸಿದ್ದಾರೆ. 2020 ಮತ್ತು 2021ರಲ್ಲಿ ಇದರಲ್ಲಿ ಏರಿಕೆ ಆಗಿದೆ.ಮಕ್ಕಳು, ಯುವಕರ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ.ಅಂಥವರ ವಿರುದ್ಧ ಪೋಷಕರೇ ಖುದ್ದಾಗಿ ದೂರು ನೀಡಿರುವುದು ನಡೆದಿದೆ’ ಎಂದು ಹೇಳಿದರು.</p>.<p><strong>ಇದನ್ನೂ ಓದಿ...<a href="https://www.prajavani.net/karnataka-news/sandalwood-anchor-anushree-name-in-ccb-drug-case-charge-sheet-864972.html" target="_blank">ಡ್ರಗ್ಸ್ ಪ್ರಕರಣ: ಪೊಲೀಸರಿಂದ ಚಾರ್ಜ್ಶೀಟ್, ಅನುಶ್ರೀ ಹೆಸರು ಉಲ್ಲೇಖ</a></strong></p>.<p>ಡ್ರಗ್ ಸಂಬಂಧಿಸಿ ಯಾವ ಘಟನೆಗಳು ಸಾಕ್ಷಿಗಳಿಲ್ಲದೇ ಬಚಾವಾಗಿವೆ ಎಂಬುದನ್ನು ಬರೆದಿದ್ದೇನೆ. ಫಾರ್ಮ್ಹೌಸ್ ಕಥೆಯಿಂದ ಹಿಡಿದು, ಅಪ್ಪನನ್ನು ಅಪಹರಿಸಿದ ಪ್ರಕರಣದವರೆಗೂ ‘ಶುಗರ್ ಡ್ಯಾಡಿ’ಯಲ್ಲಿ ಬರೆದಿದ್ದೇನೆ.ಶುಗರ್ ಡ್ಯಾಡಿ ಯಾರು ಎಂಬುದನ್ನೂ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು.</p>.<p>ಶುಗರ್ಡ್ಯಾಡಿಯಲ್ಲಿ ಇದುವರೆಗೆ ಕಾಣದ ಅನೇಕ ಉಪಕಥೆಗಳು, ನಟರ ಕಥೆಗಳೂ ಇವೆ ಎಂದರು.</p>.<p>ಒಂದು ಚಿಕ್ಕ ವಯಸ್ಸಿನ ಯುವತಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯನ್ನು ಬಾಯ್ಫ್ರೆಂಡ್ ಆಗಿ ಇಟ್ಟುಕೊಂಡಿರುವುದೇ ಶುಗರ್ ಡ್ಯಾಡಿ ಎಂದು ಸಂಬರಗಿ ಹೇಳಿದರು.</p>.<p><strong>ಇದನ್ನೂ ಓದಿ...<a href="https://www.prajavani.net/entertainment/cinema/indrajit-lankesh-reaction-about-anushree-and-sandalwood-drugs-scandal-864969.html" target="_blank">ಡ್ರಗ್ಸ್ ಕೇಸ್ನಲ್ಲಿ ಅನುಶ್ರೀ: ಎಲ್ಲರನ್ನೇಕೆ ಪರೀಕ್ಷಿಸಿಲ್ಲ ಎಂದ ಇಂದ್ರಜಿತ್</a></strong></p>.<p>ಡಿಐಜಿ ಪ್ರವೀಣ್ ಸೂದ್ ಅವರು ಈ ಪ್ರಕರಣದ ಮರು ತನಿಖೆ ನಡೆಸಬೇಕು. ಈ ಮರುತನಿಖೆಯಿಂದ ಅನುಶ್ರೀ ಅವರು ಕಂಬಿಹಿಂದೆ ಹೋಗುವುದು ಖಚಿತ ಎಂದರು.</p>.<p>ನನ್ನನ್ನು ಸ್ತ್ರೀ ವಿರೋಧಿ ಎಂದು ಹೇಳಿರುವ ಅನುಶ್ರೀ ಅವರು ಕಣ್ಣೀರು ಹಾಕುತ್ತಾ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ₹12 ಕೋಟಿಯ ಮಂಗಳೂರಿನ ಮನೆ, ₹ 4 ಕೋಟಿಯ ಬೆಂಗಳೂರಿನ ಮನೆ ಅವರಿಗೆ ಟಿವಿ ಲೋಕದಿಂದ ಬಂದಿದ್ದರೆ ಅವರಿಗೆ ಅಭಿನಂದನೆ ಹೇಳುತ್ತೇನೆ. ಅವರ ಹಿಂದಿರುವ ಪ್ರಭಾವಿ ವ್ಯಕ್ತಿಯ ಬಗ್ಗೆಯೂ ಗೊತ್ತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p><strong>ಇದನ್ನೂ ಓದಿ...</strong> <a href="https://www.prajavani.net/karnataka-news/drug-case-no-question-of-leaving-anyone-says-home-minister-araga-jnanendra-864982.html" target="_blank"><strong>ಮಾದಕ ವಸ್ತು ಪ್ರಕರಣ: ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಆರಗ ಜ್ಞಾನೇಂದ್ರ</strong></a></p>.<p>ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆಮಂಗಳೂರಿನಲ್ಲಿ ಅಖಿಲ್ ನೌಶೀಲ್, ಕಿಶೋರ್ ಅಮನ್ ಶೆಟ್ಟಿ, ಮಹಮದ್ ಶಖೀಲ್, ಫ್ರಾಂಕ್ ಸಂಡೇ ಇಬಚು, ಶಮೀನ್ ಫರ್ನಾಂಡೀಸ್, ಶಾಮ್ ನವಾಜ್ ಇಷ್ಟು ಜನರ ಹೆಸರು ಪೊಲೀಸರ ಆರೋಪಪಟ್ಟಿಯಲ್ಲಿದೆ. ಆದರೆ, ತರುಣ್ ಹೆಸರಿಲ್ಲ. ಈತನ ಬಗ್ಗೆಯೂ ತನಿಖೆ ಆಗಬೇಕು ಎಂದರು.</p>.<p>ಕಿಶೋರ್ ಮತ್ತು ತರುಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆರೋಪಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಇದೇಕೆ ಹೀಗೆ? ಇಲ್ಲಿ ಒಬ್ಬ ನಿವೃತ್ತ ಐಪಿಎಸ್ ಅಧಿಕಾರಿಯ (ಗಾಂವ್ಕರ್) ಮಧ್ಯಸ್ಥಿಕೆಯಿಂದ ಈ ಪ್ರಕರಣ ತಿಳಿಯಾಗಿ ಹಳ್ಳ ಹಿಡಿದಿದೆ. ತರುಣ್ನನ್ನು ಈ ಪ್ರಕರಣದಿಂದ ಕೈಬಿಟ್ಟರೆ ಅನುಶ್ರೀ ಬಚಾವಾಗುತ್ತಾರೆ ಎಂಬ ಲೆಕ್ಕಾಚಾರ ಅಡಗಿದೆ ಎಂದು ಸಂಬರಗಿ ಹೇಳಿದರು.</p>.<p>ಕರ್ನಾಟಕ ಡ್ರಗ್ ಮುಕ್ತ ಎಂದು ಘೋಷಿಸುವುದೇ ಆದರೆ, ತರುಣ್ ಅವರ ಹೆಸರನ್ನು ಸೇರಿಸಬೇಕು. ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಡ್ರಗ್ಪ್ರಕರಣಗಳನ್ನು ಮತ್ತೆ ತೆರೆದು ತನಿಖೆಗೆ ಒಳಪಡಿಸಬೇಕು. ಶೀಘ್ರವೇ ಈ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್ ಹೊರಗೆ ಬರುತ್ತಾರೆ. ಅವರು ಸಿನಿಮಾ ನಿರ್ಮಾಪಕ, ವಿತರಕ, ರಾಜಕಾರಣಿಯೂ ಆಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೇಳಿದರು.</p>.<p>ನವೆಂಬರ್ 1ರಂದು ನಶೆಯೆಂದರೆ ಎಂಬ ವಿಡಿಯೋ ಹಾಡು ಮತ್ತು ‘ಶುಗರ್ ಡ್ಯಾಡಿ’ ಪುಸ್ತಕ ಬಿಡುಗಡೆ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಡ್ರಗ್ ಜಾಲಕ್ಕೆ ಒಳಗಾಗಿ ತೊಂದರೆಗೊಳಗಾದವರು, ಆ ಜಾಲದಿಂದ ಮುಕ್ತರಾದವರೂ ಇರಲಿದ್ದಾರೆ ಎಂದು ಹೇಳಿದರು.</p>.<p>ನಟಿಯರಷ್ಟೇ ಅಲ್ಲ. ನಟರೂ ಡ್ರಗ್ ತೆಗೆದುಕೊಂಡಿದ್ದಾರೆ. ಪಾರ್ಟಿ ಮೋಜಿಗೆ ಮಾಡಿದ್ದಾರೆ. ಆದರೆ, ಮರು ಮಾರಾಟ ಮಾಡಿಲ್ಲ. ತೆಗೆದುಕೊಂಡಿರುವುದೂ ತಪ್ಪೇ. ಆದರೆ, ನಟಿಯರು ಅದನ್ನು ಮರು ಮಾರಾಟ ಮಾಡಿ ದುಡ್ಡಿನಾಸೆಗೆ ಬಿದ್ದು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಸಂಬರಗಿ ಹೇಳಿದರು.</p>.<p>‘3300 ಕೇಸ್ಗಳನ್ನು ಸಿಸಿಬಿಯವರು ದಾಖಲಿಸಿದ್ದಾರೆ. 2020 ಮತ್ತು 2021ರಲ್ಲಿ ಇದರಲ್ಲಿ ಏರಿಕೆ ಆಗಿದೆ.ಮಕ್ಕಳು, ಯುವಕರ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ.ಅಂಥವರ ವಿರುದ್ಧ ಪೋಷಕರೇ ಖುದ್ದಾಗಿ ದೂರು ನೀಡಿರುವುದು ನಡೆದಿದೆ’ ಎಂದು ಹೇಳಿದರು.</p>.<p><strong>ಇದನ್ನೂ ಓದಿ...<a href="https://www.prajavani.net/karnataka-news/sandalwood-anchor-anushree-name-in-ccb-drug-case-charge-sheet-864972.html" target="_blank">ಡ್ರಗ್ಸ್ ಪ್ರಕರಣ: ಪೊಲೀಸರಿಂದ ಚಾರ್ಜ್ಶೀಟ್, ಅನುಶ್ರೀ ಹೆಸರು ಉಲ್ಲೇಖ</a></strong></p>.<p>ಡ್ರಗ್ ಸಂಬಂಧಿಸಿ ಯಾವ ಘಟನೆಗಳು ಸಾಕ್ಷಿಗಳಿಲ್ಲದೇ ಬಚಾವಾಗಿವೆ ಎಂಬುದನ್ನು ಬರೆದಿದ್ದೇನೆ. ಫಾರ್ಮ್ಹೌಸ್ ಕಥೆಯಿಂದ ಹಿಡಿದು, ಅಪ್ಪನನ್ನು ಅಪಹರಿಸಿದ ಪ್ರಕರಣದವರೆಗೂ ‘ಶುಗರ್ ಡ್ಯಾಡಿ’ಯಲ್ಲಿ ಬರೆದಿದ್ದೇನೆ.ಶುಗರ್ ಡ್ಯಾಡಿ ಯಾರು ಎಂಬುದನ್ನೂ ಪುಸ್ತಕದಲ್ಲಿ ಬರೆದಿದ್ದೇನೆ ಎಂದರು.</p>.<p>ಶುಗರ್ಡ್ಯಾಡಿಯಲ್ಲಿ ಇದುವರೆಗೆ ಕಾಣದ ಅನೇಕ ಉಪಕಥೆಗಳು, ನಟರ ಕಥೆಗಳೂ ಇವೆ ಎಂದರು.</p>.<p>ಒಂದು ಚಿಕ್ಕ ವಯಸ್ಸಿನ ಯುವತಿ ತನ್ನ ತಂದೆಯ ವಯಸ್ಸಿನ ವ್ಯಕ್ತಿಯನ್ನು ಬಾಯ್ಫ್ರೆಂಡ್ ಆಗಿ ಇಟ್ಟುಕೊಂಡಿರುವುದೇ ಶುಗರ್ ಡ್ಯಾಡಿ ಎಂದು ಸಂಬರಗಿ ಹೇಳಿದರು.</p>.<p><strong>ಇದನ್ನೂ ಓದಿ...<a href="https://www.prajavani.net/entertainment/cinema/indrajit-lankesh-reaction-about-anushree-and-sandalwood-drugs-scandal-864969.html" target="_blank">ಡ್ರಗ್ಸ್ ಕೇಸ್ನಲ್ಲಿ ಅನುಶ್ರೀ: ಎಲ್ಲರನ್ನೇಕೆ ಪರೀಕ್ಷಿಸಿಲ್ಲ ಎಂದ ಇಂದ್ರಜಿತ್</a></strong></p>.<p>ಡಿಐಜಿ ಪ್ರವೀಣ್ ಸೂದ್ ಅವರು ಈ ಪ್ರಕರಣದ ಮರು ತನಿಖೆ ನಡೆಸಬೇಕು. ಈ ಮರುತನಿಖೆಯಿಂದ ಅನುಶ್ರೀ ಅವರು ಕಂಬಿಹಿಂದೆ ಹೋಗುವುದು ಖಚಿತ ಎಂದರು.</p>.<p>ನನ್ನನ್ನು ಸ್ತ್ರೀ ವಿರೋಧಿ ಎಂದು ಹೇಳಿರುವ ಅನುಶ್ರೀ ಅವರು ಕಣ್ಣೀರು ಹಾಕುತ್ತಾ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ₹12 ಕೋಟಿಯ ಮಂಗಳೂರಿನ ಮನೆ, ₹ 4 ಕೋಟಿಯ ಬೆಂಗಳೂರಿನ ಮನೆ ಅವರಿಗೆ ಟಿವಿ ಲೋಕದಿಂದ ಬಂದಿದ್ದರೆ ಅವರಿಗೆ ಅಭಿನಂದನೆ ಹೇಳುತ್ತೇನೆ. ಅವರ ಹಿಂದಿರುವ ಪ್ರಭಾವಿ ವ್ಯಕ್ತಿಯ ಬಗ್ಗೆಯೂ ಗೊತ್ತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p><strong>ಇದನ್ನೂ ಓದಿ...</strong> <a href="https://www.prajavani.net/karnataka-news/drug-case-no-question-of-leaving-anyone-says-home-minister-araga-jnanendra-864982.html" target="_blank"><strong>ಮಾದಕ ವಸ್ತು ಪ್ರಕರಣ: ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಆರಗ ಜ್ಞಾನೇಂದ್ರ</strong></a></p>.<p>ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆಮಂಗಳೂರಿನಲ್ಲಿ ಅಖಿಲ್ ನೌಶೀಲ್, ಕಿಶೋರ್ ಅಮನ್ ಶೆಟ್ಟಿ, ಮಹಮದ್ ಶಖೀಲ್, ಫ್ರಾಂಕ್ ಸಂಡೇ ಇಬಚು, ಶಮೀನ್ ಫರ್ನಾಂಡೀಸ್, ಶಾಮ್ ನವಾಜ್ ಇಷ್ಟು ಜನರ ಹೆಸರು ಪೊಲೀಸರ ಆರೋಪಪಟ್ಟಿಯಲ್ಲಿದೆ. ಆದರೆ, ತರುಣ್ ಹೆಸರಿಲ್ಲ. ಈತನ ಬಗ್ಗೆಯೂ ತನಿಖೆ ಆಗಬೇಕು ಎಂದರು.</p>.<p>ಕಿಶೋರ್ ಮತ್ತು ತರುಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆರೋಪಪಟ್ಟಿಯಲ್ಲಿ ಅವರ ಹೆಸರು ಇಲ್ಲ. ಇದೇಕೆ ಹೀಗೆ? ಇಲ್ಲಿ ಒಬ್ಬ ನಿವೃತ್ತ ಐಪಿಎಸ್ ಅಧಿಕಾರಿಯ (ಗಾಂವ್ಕರ್) ಮಧ್ಯಸ್ಥಿಕೆಯಿಂದ ಈ ಪ್ರಕರಣ ತಿಳಿಯಾಗಿ ಹಳ್ಳ ಹಿಡಿದಿದೆ. ತರುಣ್ನನ್ನು ಈ ಪ್ರಕರಣದಿಂದ ಕೈಬಿಟ್ಟರೆ ಅನುಶ್ರೀ ಬಚಾವಾಗುತ್ತಾರೆ ಎಂಬ ಲೆಕ್ಕಾಚಾರ ಅಡಗಿದೆ ಎಂದು ಸಂಬರಗಿ ಹೇಳಿದರು.</p>.<p>ಕರ್ನಾಟಕ ಡ್ರಗ್ ಮುಕ್ತ ಎಂದು ಘೋಷಿಸುವುದೇ ಆದರೆ, ತರುಣ್ ಅವರ ಹೆಸರನ್ನು ಸೇರಿಸಬೇಕು. ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>