‘ಆರೆಸ್ಸೆಸ್ ಪತ್ರಿಕೆ ‘ಆರ್ಗನೈಸರ್’ನ 2006 ಜೂನ್ 18ರ ಸಂಚಿಕೆಯಲ್ಲಿ ‘ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮೀಸಲಾತಿ ಎನ್ನುವುದು ಸಮಾಜವನ್ನು ಹಿಂದಕ್ಕೆ ಚಲಿಸುವ ಹೆಜ್ಜೆ. ಪ್ರಾಥಮಿಕ ಶಿಕ್ಷಣ ನಮ್ಮ ಹಕ್ಕು. ಆದರೆ, ಉನ್ನತ ಶಿಕ್ಷಣ ನಮ್ಮ ಹಕ್ಕಲ್ಲ. ಅದು ನಮ್ಮ, ನಮ್ಮ ಸಾಧನೆ ಆಧಾರಿತವಾದದ್ದು. ಕಾಂಗ್ರೆಸ್ ನೇತೃತ್ವದ ಸರ್ಕಾರ ಅರ್ಹತೆ, ಯೋಗ್ಯತೆಗಷ್ಟೇ ಪ್ರವೇಶ ಇರುವ ಕಡೆಯ ಭದ್ರಕೋಟೆಯನ್ನು ಮೀಸಲಾತಿ ಕಲ್ಪಿಸುವ ಮೂಲಕ ಭೇದಿಸಿದೆ. ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ, ಐಐಎಂ, ಐಐಟಿ ಇತ್ಯಾದಿ ಶೈಕ್ಷಣಿಕ ಸಂಸ್ಥೆಗಳಿಗೆ ಅರ್ಹತೆಯನ್ನು ಕಡೆಗಣಿಸಿ, ಮೀಸಲಾತಿ ಕೋಟಾದಲ್ಲಿ ಪ್ರವೇಶ ಕಲ್ಪಿಸಿದೆ’ ಎಂದು ಭಾಗವತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು’ ಎಂದಿದ್ದಾರೆ.