ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಭ್ಯರ್ಥಿಗಳಾದ ಎಸ್.ಮಮತೇಶ್ ಗೌಡ, ಬಿ.ಗಜೇಂದ್ರ, ಸೋಮನಾಥ್ ಹಿರೇಮಠ, ಎಚ್.ಯು.ರಘುವೀರ್, ಯಶವಂತಗೌಡ, ಸಿ.ಎಸ್.ನಾಗೇಶ್ಗೌಡ, ಸಿ.ಎಸ್. ನಾರಾಯಣ, ಯಶವಂತ್ ದೀಪ್, ಜಿ.ಸಿ. ರಾಘವೇಂದ್ರ ಹಾಗೂ ಮಧ್ಯವರ್ತಿಗಳಾದ ಕೇಶವಮೂರ್ತಿ, ಶಶಿಧರ್, ಶರತ್ ಸೇರಿ ಹಲವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶ ಆನಂದ್ ಚವ್ಹಾಣ್, ಎಲ್ಲರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.