ತಮ್ಮ ಆಪ್ತರು, ಬೆಂಬಲಿಗರನ್ನು ಈ ನಾಯಕರೇ ರುದ್ರಗೌಡಗೆ ಪರಿಚಯ ಮಾಡಿಸಿ, ಕೆಲಸ ಮಾಡಿಕೊಡುವಂತೆ ಕೇಳಿದ್ದರು. ಜಿಲ್ಲೆಯಲ್ಲಿ ತಮಗೆ ಪರಿಚಯ ಇರುವ ಪೊಲೀಸ್ ಅಧಿಕಾರಿಗಳ ಮೂಲಕವೂ ಹೇಳಿಸಿದ್ದರು. ಹೀಗಾಗಿ, ಅಕ್ರಮದ ಸುಳಿ ಸುತ್ತಿಕೊಂಡು ತಮ್ಮ ಕುತ್ತಿಗೆಗೆ ಬಂದು ಬಿಟ್ಟೀತು ಎಂಬ ಭಯ ಅವರಲ್ಲಿ ಮೂಡಿದೆ ಎಂಬುದು ಮೂಲಗಳ ಮಾಹಿತಿ.