‘ಬಿಇಯಲ್ಲಿ ಮೊದಲ ರ್ಯಾಂಕ್ ಬಂದಿದ್ದರೂ, ನಾನು ಎಇ ಹುದ್ದೆಗೆ ಅರ್ಹವಾಗಿರಲಿಲ್ಲ. ಕೇವಲ ಕಂಪ್ಯೂಟರ್ ಸಾಕ್ಷರತೆ ಕೋರ್ಸ್ನ ಪ್ರಮಾಣಪತ್ರ ನೀಡದ ಕಾರಣಕ್ಕೆ ಅವಕಾಶ ನಿರಾಕರಿಸಿದ್ದರು. ಪ್ರಜಾವಾಣಿಯಲ್ಲಿ ಬಂದ ವರದಿಯ ಆಧಾರದ ಮೇಲೆ ಜಲಮಂಡಳಿಯನ್ನು ಪ್ರಶ್ನಿಸಿದ್ದವು. ಇದೇ ವರದಿ ಆಧರಿಸಿ, ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗ ನಮಗೆ ನ್ಯಾಯ ಸಿಕ್ಕಿದೆ’ ಎಂದು ಅಭ್ಯರ್ಥಿಯೊಬ್ಬರು ಸಂತಸ ಹಂಚಿಕೊಂಡರು.