<p><strong>ಕಲಬುರ್ಗಿ:</strong> ‘ದೇಶದ 28 ರಾಜ್ಯಗಳ ವಿದ್ಯಾರ್ಥಿಗಳು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದತ್ತ ಮುಖಮಾಡಿದ್ದಾರೆ.ಅಗತ್ಯ ಮೂಲಸೌಲಭ್ಯ ಕಲ್ಪಿಸಿ, ಶೈಕ್ಷಣಿಕ ಗುಣಮಟ್ಟ ಸುಧಾರಿಸಿದ್ದೇ ಇದಕ್ಕೆ ಕಾರಣ. ದೇಶದ ಪ್ರಮುಖ ವಿವಿಗಳ ಸಾಲಿನಲ್ಲಿ ನಮ್ಮ ವಿವಿಯೂ ಸ್ಥಾನ ಪಡೆದಿದೆ ಎಂಬುದೇ ನನಗೆ ಹೆಮ್ಮೆ’</p>.<p>ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ಕುಲಪತಿ ಪ್ರೊ.ಎಸ್.ಎಂ. ಮಹೇಶ್ವರಯ್ಯ ಅವರು ಹೇಳಿದ ಮಾತಿದು.</p>.<p>ಮಹೇಶ್ವರಯ್ಯ ಅವರ ಅವಧಿ ಮುಗಿದಿದೆ. ಲಾಕ್ಡೌನ್ ಕಾರಣ ಕೇಂದ್ರ ಸರ್ಕಾರ ಅವರನ್ನು ಮುಂದಿನ ಆದೇಶದ ವರೆಗೆ ಕುಲಪತಿ ಹುದ್ದೆಯಲ್ಲಿ ಮುಂದುವರೆಸಿದೆ.</p>.<p><strong>ವಿವಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಅವರು ಹೇಳಿದ್ದಿಷ್ಟು...</strong></p>.<p>‘ನಾನು ಕುಲಪತಿಯಾಗಿ ಬಂದಾಗ ಕೆಲ ತಿಂಗಳ ಹಿಂದಷ್ಟೇ ವಿವಿ ಸ್ವಂತ ಕ್ಯಾಂಪಸ್ಗೆ ಸ್ಥಳಾಂತರಗೊಂಡಿತ್ತು. ಎರಡು ಹಾಸ್ಟೆಲ್ಗಳು ಮಾತ್ರ ಇದ್ದವು. ಕಲಬುರ್ಗಿ ನಗರದಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ದನ ಕಟ್ಟಲೂ ಯೋಗ್ಯವಲ್ಲದ ಒಂದು ಕಟ್ಟಡಕ್ಕೆ ₹80 ಸಾವಿರ ಬಾಡಿಗೆ ಪಾವತಿಸಲಾಗುತ್ತಿತ್ತು. ಸಾರಿಗೆ ಸಂಸ್ಥೆಯ 13 ಬಸ್ಗಳ ಸೇವೆ ಪಡೆದು ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿತ್ತು. ಸಾರಿಗೆ ವೆಚ್ಚವೇ ವಾರ್ಷಿಕ ₹2 ಕೋಟಿ ಪಾವತಿಸಬೇಕಿತ್ತು. ಕಟ್ಟಡಗಳ ನಿರ್ಮಾಣ, ಮೂಲಸೌಲಭ್ಯ ಕಲ್ಪಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು’.</p>.<p>‘ಗುತ್ತಿಗೆದಾರರ ಬೆನ್ನುಬಿದ್ದು, ಟಿನ್ ಶೆಡ್ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳೂ ಖುಷಿಯಿಂದ ಹೊಸ ಕ್ಯಾಂಪಸ್ಗೆ ಬಂದರು. ಸಾರಿಗೆ ವೆಚ್ಚ ಮತ್ತು ಖಾಸಗಿ ಕಟ್ಟಡ ಬಾಡಿಗೆ ₹3.50 ಕೋಟಿ ಉಳಿಸಿದೆ. ಕಟ್ಟಡ ನಿರ್ಮಾಣಕ್ಕೆ ನಿಗದಿಯಾಗಿದ್ದ ಹಣದಲ್ಲಿ₹82 ಕೋಟಿ ಉಳಿಸಿದ್ದೇನೆ. ಕಾಮಗಾರಿ ವಿಳಂಬಕ್ಕಾಗಿ ₹32 ಕೋಟಿ ದಂಡ ವಸೂಲಿ ಮಾಡಿದ್ದೇನೆ’.</p>.<p>‘ನೀರಿನ ಸಮಸ್ಯೆ ಬೆಂಬಿಡದೆ ಕಾಡಿತು. ನೀರು ಕೊಡಲಾಗದಿದ್ದರೆ ವಿವಿಯನ್ನು ಮುಚ್ಚಿ ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದ್ದೂ ಆಯಿತು. ಹೇಗೋ ನೀರಿನ ವ್ಯವಸ್ಥೆ ಮಾಡಿಕೊಂಡು ವಿವಿ ನಡೆಸಿದ್ದೂ ಆಯಿತು. ₹3 ಕೋಟಿ ವೆಚ್ಚಮಾಡಿ ಕ್ಯಾಂಪಸ್ನಲ್ಲಿಯೇ 25 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್ ನಿರ್ಮಿಸಿಕೊಂಡೆವು. ಈಗ 1950 ವಿದ್ಯಾರ್ಥಿಗಳು ಇದ್ದಾರೆ. ನೀರಿನ ಸಮಸ್ಯೆ ಇರದೇ ಹೋಗಿದ್ದರೆ 4 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬಹುದಾಗಿತ್ತು. ಯಾವುದೇ ಸರ್ಕಾರಗಳೂ ನಮ್ಮ ವಿವಿಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಿಲ್ಲ ಎಂಬ ನೋವು ನನಗಿದೆ’.</p>.<p>‘ನಮ್ಮ ವಿವಿಗೆ ‘ನ್ಯಾಕ್’ ‘ಬಿ ++’ ಮಾನ್ಯತೆ ನೀಡಿದೆ. ಮುಂದೆ ‘ಎ’ ಗ್ರೇಡ್ಗೆ ಹೋಗಲಿದೆ. ಇದು ನಮ್ಮ ಶೈಕ್ಷಣಿಕ ಶಾಧನೆ. ನಮ್ಮ ವಿವಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.ಐದು ವರ್ಷಗಳ ಹಿಂದೆ 3 ಸಾವಿರ ಅರ್ಜಿಗಳಷ್ಟೇ ಬಂದಿದ್ದವು. ಕಳೆದ ವರ್ಷ ನಮ್ಮಲ್ಲಿ ಪ್ರವೇಶ ಕೋರಿ 65 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು’.</p>.<p>‘50 ಜನ ಕಾಯಂ ಬೋಧಕರು, 100 ಜನ ಅತಿಥಿ ಉಪನ್ಯಾಸಕರು ಇದ್ದರು. ಅತ್ಯುತ್ತಮ ಬೋಧಕರು ಬೇಕು ಎಂಬ ಕಾರಣಕ್ಕೆ ನೇಮಕಾತಿ ಮಾಡಿಕೊಂಡಿದ್ದೇವೆ. ಆ ಪೈಕಿ 70 ಜನರಿಗೆ ನೇಮಕಾತಿ ಆದೇಶ ನೀಡಿದ್ದು, ಇನ್ನು 10 ಜನರಿಗೆ ಕೊಡಬೇಕಿದೆ. ಅರ್ಹರು ಸಿಗದ ಕಾರಣ ಇನ್ನೂ 50 ಹುದ್ದೆಗಳ ಭರ್ತಿ ಸಾಧ್ಯವಾಗಿಲ್ಲ’.</p>.<p>‘₹5 ಕೋಟಿಯ ಸಾಫ್ಟ್ವೇರ್ ಖರೀದಿಸಿ, ಅಂತರರಾಷ್ಟ್ರೀಯ ಗುಣಮಟ್ಟದ ಇ–ಗ್ರಂಥಾಲಯ ಸ್ಥಾಪಿಸಲಾಗಿದೆ. 6 ಸಭಾಂಗಣ ನಿರ್ಮಿಸಿದ್ದೇವೆ. ವಿಪ್ರೊ ಸಂಸ್ಥೆಯ ₹12 ಕೋಟಿ ನೆರವಿನಲ್ಲಿ ವಿವಿಯ ಇಡೀ ಕ್ಯಾಂಪಸ್ಗೆ ವೈಫೈ ವ್ಯವಸ್ಥೆ ಕಲ್ಪಿಸಿದ್ದೇವೆ. ₹23 ಕೋಟಿ ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ.ಈ ವರ್ಷ ಕೇಂದ್ರ ಸರ್ಕಾರ ₹132 ಕೋಟಿ ಅನುದಾನ ನೀಡಿದೆ. ಇದರಲ್ಲಿ ಅಗತ್ಯ ಉಪಕರಣಗಳ ಖರೀದಿಗೆ ₹45 ಕೋಟಿ ಮೀಸಲಿಡಸಲಾಗಿದೆ. ಕ್ಲಾಸ್ರೂಮ್ ನಿರ್ಮಾಣ, ₹54 ಕೋಟಿ ವೆಚ್ಚದಲ್ಲಿ ಎರಡು ಹಾಸ್ಟೆಲ್ನಿರ್ಮಾಣಗೊಳ್ಳಲಿವೆ’.</p>.<p>‘ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಿ ಘಟಿಕೋತ್ಸವ ಮಾಡಿದ್ದು, ಗೌರವ ಡಾಕ್ಟರೇಟ್ ನೀಡಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದ್ದು.ಹೈದರಾಬಾದ್ ಐಐಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಯ ಎಂಜಿನಿಯರಿಂಗ್ ವಿಭಾಗಕ್ಕೆ ಹೊಸರೂಪ ನೀಡಿದ ತೃಪ್ತಿ ಇದೆ’ ಎಂದು ಅವರು ಹೇಳಿದರು.</p>.<p><strong>35 ಸಾವಿರ ಮರ</strong><br />‘640 ಎಕರೆ ವಿಸ್ತಾರದ ಕ್ಯಾಂಪಸ್ನಲ್ಲಿ ₹1 ಕೋಟಿ ವೆಚ್ಚದಲ್ಲಿ ಕೆರೆ ಕಟ್ಟಿಸಿದ್ದೇನೆ. 35 ಸಾವಿರ ಮರಗಳನ್ನು ನೆಟ್ಟಿದ್ದು, ಅವುಗಳಿಗೆ ನಿರಂತರ ನೀರುಣಿಸಿಪೋಷಿಸುವ ವ್ಯವಸ್ಥೆ ಮಾಡಿದ್ದೇನೆ. ಇನ್ನು 10 ವರ್ಷ ಕಳೆದರೆ ಈ ಮರಗಳ ಬೇವಿನ ಬೀಜದಿಂದಲೇ ವಿವಿಗೆ ಲಕ್ಷಾಂತರ ಆದಾಯ ಬರಲಿದೆ’ ಎಂದು ಮಹೇಶ್ವರಯ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ‘ದೇಶದ 28 ರಾಜ್ಯಗಳ ವಿದ್ಯಾರ್ಥಿಗಳು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದತ್ತ ಮುಖಮಾಡಿದ್ದಾರೆ.ಅಗತ್ಯ ಮೂಲಸೌಲಭ್ಯ ಕಲ್ಪಿಸಿ, ಶೈಕ್ಷಣಿಕ ಗುಣಮಟ್ಟ ಸುಧಾರಿಸಿದ್ದೇ ಇದಕ್ಕೆ ಕಾರಣ. ದೇಶದ ಪ್ರಮುಖ ವಿವಿಗಳ ಸಾಲಿನಲ್ಲಿ ನಮ್ಮ ವಿವಿಯೂ ಸ್ಥಾನ ಪಡೆದಿದೆ ಎಂಬುದೇ ನನಗೆ ಹೆಮ್ಮೆ’</p>.<p>ಆಳಂದ ತಾಲ್ಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದ ಕುಲಪತಿ ಪ್ರೊ.ಎಸ್.ಎಂ. ಮಹೇಶ್ವರಯ್ಯ ಅವರು ಹೇಳಿದ ಮಾತಿದು.</p>.<p>ಮಹೇಶ್ವರಯ್ಯ ಅವರ ಅವಧಿ ಮುಗಿದಿದೆ. ಲಾಕ್ಡೌನ್ ಕಾರಣ ಕೇಂದ್ರ ಸರ್ಕಾರ ಅವರನ್ನು ಮುಂದಿನ ಆದೇಶದ ವರೆಗೆ ಕುಲಪತಿ ಹುದ್ದೆಯಲ್ಲಿ ಮುಂದುವರೆಸಿದೆ.</p>.<p><strong>ವಿವಿಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಅವರು ಹೇಳಿದ್ದಿಷ್ಟು...</strong></p>.<p>‘ನಾನು ಕುಲಪತಿಯಾಗಿ ಬಂದಾಗ ಕೆಲ ತಿಂಗಳ ಹಿಂದಷ್ಟೇ ವಿವಿ ಸ್ವಂತ ಕ್ಯಾಂಪಸ್ಗೆ ಸ್ಥಳಾಂತರಗೊಂಡಿತ್ತು. ಎರಡು ಹಾಸ್ಟೆಲ್ಗಳು ಮಾತ್ರ ಇದ್ದವು. ಕಲಬುರ್ಗಿ ನಗರದಲ್ಲಿ ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ದನ ಕಟ್ಟಲೂ ಯೋಗ್ಯವಲ್ಲದ ಒಂದು ಕಟ್ಟಡಕ್ಕೆ ₹80 ಸಾವಿರ ಬಾಡಿಗೆ ಪಾವತಿಸಲಾಗುತ್ತಿತ್ತು. ಸಾರಿಗೆ ಸಂಸ್ಥೆಯ 13 ಬಸ್ಗಳ ಸೇವೆ ಪಡೆದು ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿತ್ತು. ಸಾರಿಗೆ ವೆಚ್ಚವೇ ವಾರ್ಷಿಕ ₹2 ಕೋಟಿ ಪಾವತಿಸಬೇಕಿತ್ತು. ಕಟ್ಟಡಗಳ ನಿರ್ಮಾಣ, ಮೂಲಸೌಲಭ್ಯ ಕಲ್ಪಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು’.</p>.<p>‘ಗುತ್ತಿಗೆದಾರರ ಬೆನ್ನುಬಿದ್ದು, ಟಿನ್ ಶೆಡ್ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳೂ ಖುಷಿಯಿಂದ ಹೊಸ ಕ್ಯಾಂಪಸ್ಗೆ ಬಂದರು. ಸಾರಿಗೆ ವೆಚ್ಚ ಮತ್ತು ಖಾಸಗಿ ಕಟ್ಟಡ ಬಾಡಿಗೆ ₹3.50 ಕೋಟಿ ಉಳಿಸಿದೆ. ಕಟ್ಟಡ ನಿರ್ಮಾಣಕ್ಕೆ ನಿಗದಿಯಾಗಿದ್ದ ಹಣದಲ್ಲಿ₹82 ಕೋಟಿ ಉಳಿಸಿದ್ದೇನೆ. ಕಾಮಗಾರಿ ವಿಳಂಬಕ್ಕಾಗಿ ₹32 ಕೋಟಿ ದಂಡ ವಸೂಲಿ ಮಾಡಿದ್ದೇನೆ’.</p>.<p>‘ನೀರಿನ ಸಮಸ್ಯೆ ಬೆಂಬಿಡದೆ ಕಾಡಿತು. ನೀರು ಕೊಡಲಾಗದಿದ್ದರೆ ವಿವಿಯನ್ನು ಮುಚ್ಚಿ ಎಂದು ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದ್ದೂ ಆಯಿತು. ಹೇಗೋ ನೀರಿನ ವ್ಯವಸ್ಥೆ ಮಾಡಿಕೊಂಡು ವಿವಿ ನಡೆಸಿದ್ದೂ ಆಯಿತು. ₹3 ಕೋಟಿ ವೆಚ್ಚಮಾಡಿ ಕ್ಯಾಂಪಸ್ನಲ್ಲಿಯೇ 25 ಲಕ್ಷ ಲೀಟರ್ ಸಾಮರ್ಥ್ಯದ ನೆಲಮಟ್ಟದ ಟ್ಯಾಂಕ್ ನಿರ್ಮಿಸಿಕೊಂಡೆವು. ಈಗ 1950 ವಿದ್ಯಾರ್ಥಿಗಳು ಇದ್ದಾರೆ. ನೀರಿನ ಸಮಸ್ಯೆ ಇರದೇ ಹೋಗಿದ್ದರೆ 4 ಸಾವಿರ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬಹುದಾಗಿತ್ತು. ಯಾವುದೇ ಸರ್ಕಾರಗಳೂ ನಮ್ಮ ವಿವಿಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಿಲ್ಲ ಎಂಬ ನೋವು ನನಗಿದೆ’.</p>.<p>‘ನಮ್ಮ ವಿವಿಗೆ ‘ನ್ಯಾಕ್’ ‘ಬಿ ++’ ಮಾನ್ಯತೆ ನೀಡಿದೆ. ಮುಂದೆ ‘ಎ’ ಗ್ರೇಡ್ಗೆ ಹೋಗಲಿದೆ. ಇದು ನಮ್ಮ ಶೈಕ್ಷಣಿಕ ಶಾಧನೆ. ನಮ್ಮ ವಿವಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.ಐದು ವರ್ಷಗಳ ಹಿಂದೆ 3 ಸಾವಿರ ಅರ್ಜಿಗಳಷ್ಟೇ ಬಂದಿದ್ದವು. ಕಳೆದ ವರ್ಷ ನಮ್ಮಲ್ಲಿ ಪ್ರವೇಶ ಕೋರಿ 65 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು’.</p>.<p>‘50 ಜನ ಕಾಯಂ ಬೋಧಕರು, 100 ಜನ ಅತಿಥಿ ಉಪನ್ಯಾಸಕರು ಇದ್ದರು. ಅತ್ಯುತ್ತಮ ಬೋಧಕರು ಬೇಕು ಎಂಬ ಕಾರಣಕ್ಕೆ ನೇಮಕಾತಿ ಮಾಡಿಕೊಂಡಿದ್ದೇವೆ. ಆ ಪೈಕಿ 70 ಜನರಿಗೆ ನೇಮಕಾತಿ ಆದೇಶ ನೀಡಿದ್ದು, ಇನ್ನು 10 ಜನರಿಗೆ ಕೊಡಬೇಕಿದೆ. ಅರ್ಹರು ಸಿಗದ ಕಾರಣ ಇನ್ನೂ 50 ಹುದ್ದೆಗಳ ಭರ್ತಿ ಸಾಧ್ಯವಾಗಿಲ್ಲ’.</p>.<p>‘₹5 ಕೋಟಿಯ ಸಾಫ್ಟ್ವೇರ್ ಖರೀದಿಸಿ, ಅಂತರರಾಷ್ಟ್ರೀಯ ಗುಣಮಟ್ಟದ ಇ–ಗ್ರಂಥಾಲಯ ಸ್ಥಾಪಿಸಲಾಗಿದೆ. 6 ಸಭಾಂಗಣ ನಿರ್ಮಿಸಿದ್ದೇವೆ. ವಿಪ್ರೊ ಸಂಸ್ಥೆಯ ₹12 ಕೋಟಿ ನೆರವಿನಲ್ಲಿ ವಿವಿಯ ಇಡೀ ಕ್ಯಾಂಪಸ್ಗೆ ವೈಫೈ ವ್ಯವಸ್ಥೆ ಕಲ್ಪಿಸಿದ್ದೇವೆ. ₹23 ಕೋಟಿ ವೆಚ್ಚದಲ್ಲಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲಾಗಿದೆ.ಈ ವರ್ಷ ಕೇಂದ್ರ ಸರ್ಕಾರ ₹132 ಕೋಟಿ ಅನುದಾನ ನೀಡಿದೆ. ಇದರಲ್ಲಿ ಅಗತ್ಯ ಉಪಕರಣಗಳ ಖರೀದಿಗೆ ₹45 ಕೋಟಿ ಮೀಸಲಿಡಸಲಾಗಿದೆ. ಕ್ಲಾಸ್ರೂಮ್ ನಿರ್ಮಾಣ, ₹54 ಕೋಟಿ ವೆಚ್ಚದಲ್ಲಿ ಎರಡು ಹಾಸ್ಟೆಲ್ನಿರ್ಮಾಣಗೊಳ್ಳಲಿವೆ’.</p>.<p>‘ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಆಹ್ವಾನಿಸಿ ಘಟಿಕೋತ್ಸವ ಮಾಡಿದ್ದು, ಗೌರವ ಡಾಕ್ಟರೇಟ್ ನೀಡಿಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿದ್ದು.ಹೈದರಾಬಾದ್ ಐಐಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಯ ಎಂಜಿನಿಯರಿಂಗ್ ವಿಭಾಗಕ್ಕೆ ಹೊಸರೂಪ ನೀಡಿದ ತೃಪ್ತಿ ಇದೆ’ ಎಂದು ಅವರು ಹೇಳಿದರು.</p>.<p><strong>35 ಸಾವಿರ ಮರ</strong><br />‘640 ಎಕರೆ ವಿಸ್ತಾರದ ಕ್ಯಾಂಪಸ್ನಲ್ಲಿ ₹1 ಕೋಟಿ ವೆಚ್ಚದಲ್ಲಿ ಕೆರೆ ಕಟ್ಟಿಸಿದ್ದೇನೆ. 35 ಸಾವಿರ ಮರಗಳನ್ನು ನೆಟ್ಟಿದ್ದು, ಅವುಗಳಿಗೆ ನಿರಂತರ ನೀರುಣಿಸಿಪೋಷಿಸುವ ವ್ಯವಸ್ಥೆ ಮಾಡಿದ್ದೇನೆ. ಇನ್ನು 10 ವರ್ಷ ಕಳೆದರೆ ಈ ಮರಗಳ ಬೇವಿನ ಬೀಜದಿಂದಲೇ ವಿವಿಗೆ ಲಕ್ಷಾಂತರ ಆದಾಯ ಬರಲಿದೆ’ ಎಂದು ಮಹೇಶ್ವರಯ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>