ಕೊಪ್ಪ (ಮಂಡ್ಯ): ಹೋಬಳಿಯ ನಾಗದೊಡ್ಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಬಾಳೆತೋಟ ನಾಶವಾಗಿದೆ.
ಬಿ.ನಾಗರಾಜು ಎಂಬುವರಿಗೆ ಸೇರಿದ ತೋಟ ಇದಾಗಿದ್ದು, ಕಟಾವಿಗೆ ಬಂದಿದ್ದ ಬಾಳೆಗೊನೆಗಳು ನೆಲಕಚ್ಚಿವೆ. 1,000ಕ್ಕೂ ಹೆಚ್ಚು ಬಾಳೆ ಸಸಿಗಳು ಹಾಳಾಗಿವೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ತೋಟವೂ ನಾಶವಾಗಿದೆ.
‘ಬಾಳೆ ಬೆಳೆಯಲು ₹1 ಲಕ್ಷ ಸಾಲ ಮಾಡಿದ್ದೇನೆ. ಫಸಲು ಕೈಗೆ ಸಿಗುವ ಹೊತ್ತಿನಲ್ಲಿ ಬೆಳೆ ಹಾಳಾಗಿದೆ’ ಎಂದು ನಾಗರಾಜು ಪರಿಹಾರಕ್ಕೆ ಆಗ್ರಹಿಸಿದ್ದಾರೆ.