<p><strong>ಬೆಂಗಳೂರು:</strong> 'ಆರ್ಕ್ಟಿಕ್' ಪ್ರದೇಶದಲ್ಲಿ ಆರಂಭವಾಗಿರುವ ಚಳಿಗಾಲದ ಸಂಶೋಧನಾ ಅಭಿಯಾನದಲ್ಲಿ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ (ಆರ್ಆರ್ಐ) ವಿಜ್ಞಾನಿಗಳ ಮೊದಲ ತಂಡ ಭಾಗವಹಿಸಿದೆ. ವಿಶ್ವದ ಉಗಮದ ಕುರುಹುಗಳನ್ನು ಪತ್ತೆ ಮಾಡುವುದರಿಂದ ಹಿಡಿದು, ಆಧುನಿಕ ಕಾಲದ ಹವಾಮಾನ ಬದಲಾವಣೆ ಪರಿಣಾಮಗಳೂ ಸೇರಿ ಹಲವು ವಿಷಯಗಳ ಬಗ್ಗೆ ಈ ತಂಡ ಸಂಶೋಧನೆ ಕೈಗೊಳ್ಳಲಿದೆ.</p>.<p>ಭೂಮಿಯ ಉತ್ತರ ಧ್ರುವ ಪ್ರದೇಶ ‘ಆರ್ಕ್ಟಿಕ್’ನಲ್ಲಿ ಭಾರತ ತನ್ನದೇ ಆದ ಸಂಶೋಧನಾ ಕೇಂದ್ರವನ್ನು ಹೊಂದಿದ್ದು, ಇದನ್ನು ಹಿಮಾದ್ರಿ ಎಂದು ಕರೆಯಲಾಗುತ್ತದೆ. 2008 ರಿಂದ ಇದು ಕಾರ್ಯ ನಿರ್ವಹಿಸುತ್ತಿದೆ.</p>.<p>ಈ ಬಾರಿ ಭಾರತೀಯ ತಂಡದ ನೇತೃತ್ವವನ್ನು ಆರ್ಆರ್ಐನ ಎಲೆಕ್ಟ್ರಾನಿಕ್ಸ್ ಎಂಜನಿಯರಿಂಗ್ ಗ್ರೂಪ್ ವಿಭಾಗದ ಗಿರೀಶ್ ಬಿ.ಎಸ್ ವಹಿಸಿದ್ದಾರೆ. ಖಗೋಳವಿಜ್ಞಾನ, ಹವಾಮಾನ ಬದಲಾವಣೆ, ವಾತಾವರಣ ವಿಜ್ಞಾನ ಸೇರಿ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.</p>.<p>ಭಾರತೀಯ ವಿಜ್ಞಾನಿಗಳು ಇದೇ ಮೊದಲ ಬಾರಿ ಆರ್ಕ್ಟಿಕ್ನ ಸ್ವಾಲ್ಬರ್ಡ್ನಲ್ಲಿ ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಿಂದ ಖಗೋಳ ವಿಜ್ಞಾನಿಗಳು ಖಗೋಳ ಮಾಪನ ಕಾರ್ಯವನ್ನು ಅತ್ಯಂತ ಕರಾರುವಾಕ್ಕಾಗಿ ನಡೆಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಡಿಮೆ ತರಂಗಾಂತರದ ದೂರದರ್ಶಕವನ್ನು ಸ್ಥಾಪಿಸುವ ಸಾಧ್ಯತೆಯೂ ಇದೆ ಎಂದು ಆರ್ಆರ್ಐ ತಿಳಿಸಿದೆ.</p>.<p>ಮೊದಲ ತಂಡ ತನ್ನ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದು, ಜನವರಿ 15 ರವರೆಗೆ ಕಾರ್ಯ ನಿರ್ವಹಿಸಲಿದೆ. ಈ ಕಾರ್ಯಕ್ಕೆ ಭೂವಿಜ್ಞಾನಗಳ ಸಚಿವಾಲಯ ಅನುದಾನ ನೀಡಿದ್ದು, ಗೋವಾದಲ್ಲಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ ನೋಡಲ್ ಏಜೆನ್ಸಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> 'ಆರ್ಕ್ಟಿಕ್' ಪ್ರದೇಶದಲ್ಲಿ ಆರಂಭವಾಗಿರುವ ಚಳಿಗಾಲದ ಸಂಶೋಧನಾ ಅಭಿಯಾನದಲ್ಲಿ ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ (ಆರ್ಆರ್ಐ) ವಿಜ್ಞಾನಿಗಳ ಮೊದಲ ತಂಡ ಭಾಗವಹಿಸಿದೆ. ವಿಶ್ವದ ಉಗಮದ ಕುರುಹುಗಳನ್ನು ಪತ್ತೆ ಮಾಡುವುದರಿಂದ ಹಿಡಿದು, ಆಧುನಿಕ ಕಾಲದ ಹವಾಮಾನ ಬದಲಾವಣೆ ಪರಿಣಾಮಗಳೂ ಸೇರಿ ಹಲವು ವಿಷಯಗಳ ಬಗ್ಗೆ ಈ ತಂಡ ಸಂಶೋಧನೆ ಕೈಗೊಳ್ಳಲಿದೆ.</p>.<p>ಭೂಮಿಯ ಉತ್ತರ ಧ್ರುವ ಪ್ರದೇಶ ‘ಆರ್ಕ್ಟಿಕ್’ನಲ್ಲಿ ಭಾರತ ತನ್ನದೇ ಆದ ಸಂಶೋಧನಾ ಕೇಂದ್ರವನ್ನು ಹೊಂದಿದ್ದು, ಇದನ್ನು ಹಿಮಾದ್ರಿ ಎಂದು ಕರೆಯಲಾಗುತ್ತದೆ. 2008 ರಿಂದ ಇದು ಕಾರ್ಯ ನಿರ್ವಹಿಸುತ್ತಿದೆ.</p>.<p>ಈ ಬಾರಿ ಭಾರತೀಯ ತಂಡದ ನೇತೃತ್ವವನ್ನು ಆರ್ಆರ್ಐನ ಎಲೆಕ್ಟ್ರಾನಿಕ್ಸ್ ಎಂಜನಿಯರಿಂಗ್ ಗ್ರೂಪ್ ವಿಭಾಗದ ಗಿರೀಶ್ ಬಿ.ಎಸ್ ವಹಿಸಿದ್ದಾರೆ. ಖಗೋಳವಿಜ್ಞಾನ, ಹವಾಮಾನ ಬದಲಾವಣೆ, ವಾತಾವರಣ ವಿಜ್ಞಾನ ಸೇರಿ ಹಲವು ವಿಷಯಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ.</p>.<p>ಭಾರತೀಯ ವಿಜ್ಞಾನಿಗಳು ಇದೇ ಮೊದಲ ಬಾರಿ ಆರ್ಕ್ಟಿಕ್ನ ಸ್ವಾಲ್ಬರ್ಡ್ನಲ್ಲಿ ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸಲಿದ್ದಾರೆ. ಈ ಅಧ್ಯಯನದಿಂದ ಖಗೋಳ ವಿಜ್ಞಾನಿಗಳು ಖಗೋಳ ಮಾಪನ ಕಾರ್ಯವನ್ನು ಅತ್ಯಂತ ಕರಾರುವಾಕ್ಕಾಗಿ ನಡೆಸಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ರೇಡಿಯೊ ತರಂಗಾಂತರಗಳ ವಾತಾವರಣದ ಗುಣಲಕ್ಷಣಗಳನ್ನು ಅಧ್ಯಯನ ನಡೆಸುವುದರಿಂದ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಕಡಿಮೆ ತರಂಗಾಂತರದ ದೂರದರ್ಶಕವನ್ನು ಸ್ಥಾಪಿಸುವ ಸಾಧ್ಯತೆಯೂ ಇದೆ ಎಂದು ಆರ್ಆರ್ಐ ತಿಳಿಸಿದೆ.</p>.<p>ಮೊದಲ ತಂಡ ತನ್ನ ಕಾರ್ಯವನ್ನು ಮಂಗಳವಾರ ಆರಂಭಿಸಿದ್ದು, ಜನವರಿ 15 ರವರೆಗೆ ಕಾರ್ಯ ನಿರ್ವಹಿಸಲಿದೆ. ಈ ಕಾರ್ಯಕ್ಕೆ ಭೂವಿಜ್ಞಾನಗಳ ಸಚಿವಾಲಯ ಅನುದಾನ ನೀಡಿದ್ದು, ಗೋವಾದಲ್ಲಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ ನೋಡಲ್ ಏಜೆನ್ಸಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>