<p><strong>ಬೆಂಗಳೂರು:</strong> ಹೊಸ ನರ್ಸಿಂಗ್ ಕಾಲೇಜುಗಳಿಗೆ ಸರ್ಕಾರ ಅನುಮತಿ ನೀಡಿರುವ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗುರುವಾರ ಸಿ.ಡಿ. ವಿಚಾರವೂ ಪ್ರತಿಧ್ವನಿಸಿತು.</p>.<p>ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವುದರ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಆಡಳಿತ ಪಕ್ಷದ ಸದಸ್ಯ ಎನ್.ರವಿಕುಮಾರ್ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ರವಿ ಕುಮಾರ್ ಹೆಸರನ್ನು ಉಲ್ಲೇಖಿಸಿದ ಜೆಡಿಎಸ್ನ ಮರಿತಿಬ್ಬೇಗೌಡ, ‘ಅವರ ಪರಿಸ್ಥಿತಿ ಸಿ.ಡಿ.ಯಂತಾಗಿದೆ’ ಎಂದು ಛೇಡಿಸಿದರು.</p>.<p>ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ತೇಜಸ್ವಿನಿ ಗೌಡ, ‘ಸಿ.ಡಿ. ವಿಚಾರ ಪದೇ ಪದೇ ಪ್ರಸ್ತಾಪಿಸಿದರೆ ನಮಗೆ ಹಿಂಸೆಯಾಗುತ್ತದೆ. ಮಹಿಳೆಯರು ಈ ಸದನದಲ್ಲಿ ಕುಳಿತುಕೊಳ್ಳ ಬೇಕೇ ಬೇಡವೇ’ ಎಂದು ಖಾರವಾಗಿ ಪ್ರಶ್ನಿಸಿದರು.</p>.<p>‘ಹಾಗಾದರೆ ದಿನವೂ ಸಿ.ಡಿ ಸುದ್ದಿ ನೋಡಬೇಕಾಗ ಸ್ಥಿತಿ ಎದುರಿಸುತ್ತಿರುವ ಜನರ ಪಾಡೇನು’ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಚುಚ್ಚಿದರು.</p>.<p>ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ‘ಸದನದಲ್ಲಿ ಸಿ.ಡಿ ವಿಚಾರಪದೇ ಪದೇ ಪ್ರಸ್ತಾಪವಾದಾಗ ಇಲ್ಲಿರುವ 10 ಮಹಿಳೆಯರಿಗೇ ಇಷ್ಟೊಂದು ಮುಜುಗರವಾಗುತ್ತದೆ. ಹಾಗಾದರೆ ರಾಜ್ಯದ ಮಹಿಳೆಯರ ಪರಿಸ್ಥಿತಿ ಹೇಗೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹೊಸ ನರ್ಸಿಂಗ್ ಕಾಲೇಜುಗಳಿಗೆ ಸರ್ಕಾರ ಅನುಮತಿ ನೀಡಿರುವ ಕುರಿತು ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗುರುವಾರ ಸಿ.ಡಿ. ವಿಚಾರವೂ ಪ್ರತಿಧ್ವನಿಸಿತು.</p>.<p>ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವುದರ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಆಡಳಿತ ಪಕ್ಷದ ಸದಸ್ಯ ಎನ್.ರವಿಕುಮಾರ್ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದರು. ರವಿ ಕುಮಾರ್ ಹೆಸರನ್ನು ಉಲ್ಲೇಖಿಸಿದ ಜೆಡಿಎಸ್ನ ಮರಿತಿಬ್ಬೇಗೌಡ, ‘ಅವರ ಪರಿಸ್ಥಿತಿ ಸಿ.ಡಿ.ಯಂತಾಗಿದೆ’ ಎಂದು ಛೇಡಿಸಿದರು.</p>.<p>ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿಯ ತೇಜಸ್ವಿನಿ ಗೌಡ, ‘ಸಿ.ಡಿ. ವಿಚಾರ ಪದೇ ಪದೇ ಪ್ರಸ್ತಾಪಿಸಿದರೆ ನಮಗೆ ಹಿಂಸೆಯಾಗುತ್ತದೆ. ಮಹಿಳೆಯರು ಈ ಸದನದಲ್ಲಿ ಕುಳಿತುಕೊಳ್ಳ ಬೇಕೇ ಬೇಡವೇ’ ಎಂದು ಖಾರವಾಗಿ ಪ್ರಶ್ನಿಸಿದರು.</p>.<p>‘ಹಾಗಾದರೆ ದಿನವೂ ಸಿ.ಡಿ ಸುದ್ದಿ ನೋಡಬೇಕಾಗ ಸ್ಥಿತಿ ಎದುರಿಸುತ್ತಿರುವ ಜನರ ಪಾಡೇನು’ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ ಚುಚ್ಚಿದರು.</p>.<p>ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್, ‘ಸದನದಲ್ಲಿ ಸಿ.ಡಿ ವಿಚಾರಪದೇ ಪದೇ ಪ್ರಸ್ತಾಪವಾದಾಗ ಇಲ್ಲಿರುವ 10 ಮಹಿಳೆಯರಿಗೇ ಇಷ್ಟೊಂದು ಮುಜುಗರವಾಗುತ್ತದೆ. ಹಾಗಾದರೆ ರಾಜ್ಯದ ಮಹಿಳೆಯರ ಪರಿಸ್ಥಿತಿ ಹೇಗೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>