<p><strong>ಗುಳಗೊಂಡನಹಳ್ಳಿ (ಹಿರಿಯೂರು): </strong>ಬೀದರ್ ಜಿಲ್ಲೆಯ ರೈತರಿಂದ ಖರೀದಿ ಸಿದ್ದ ಟೊಮೆಟೊವನ್ನು ಲಾರಿಯಲ್ಲಿ ಒಯ್ಯು<br />ತ್ತಿದ್ದ ವರ್ತಕರೊಬ್ಬರು ದರ ಪಾತಾಳಕ್ಕೆ ಕುಸಿದ ಮಾಹಿತಿ ತಿಳಿದುಹಿರಿಯೂರು ಸಮೀಪ ಟೊಮೆಟೊವನ್ನು ರಸ್ತೆಗೆ ಚೆಲ್ಲಿದರು. ಇನ್ನೊಂದೆಡೆ ಗುಳಗೊಂಡನಹಳ್ಳಿ ರೈತರೊಬ್ಬರು ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೆಟೊವನ್ನು ರಸ್ತೆಗೆ ಸುರಿದರು.</p>.<p>ಬೆಂಗಳೂರಿಗೆ ಟೊಮೆಟೊ ಒಯ್ಯು ತ್ತಿದ್ದ ವ್ಯಾಪಾರಿ ಅವಿನಾಶ್ ದರ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ, ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಗುಳಗೊಂಡನಹಳ್ಳಿ ಬಳಿ 120 ಬಾಕ್ಸ್ಗಳಲ್ಲಿದ್ದ ಟೊಮೆಟೊವನ್ನು ರಸ್ತೆಗೆ ಸುರಿದಿದ್ದಾರೆ. ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.</p>.<p>‘ಬಾಕ್ಸ್ ಟೊಮೆಟೊಗೆ ₹50 ರಂತೆ ಖರೀದಿಸಿದ್ದೇನೆ. ಬೀದರ್ನಿಂದ ಬೆಂಗಳೂರಿಗೆ ಒಂದು ಬಾಕ್ಸ್ ಸಾಗಣೆಗೆ ₹100 ಬಾಡಿಗೆ ಕೊಡಬೇಕು. ಲಾರಿ ಬಾಡಿಗೆ ₹ 42 ಸಾವಿರ ಕೊಡಬೇಕಿದೆ. ಬೆಂಗಳೂರಿಗೆ ಒಯ್ದರೆ ಅರ್ಧ ಬಾಡಿಗೆಯೂ ಬರುವುದಿಲ್ಲ. ಹೀಗಾಗಿ ಇಲ್ಲಿಯೇ ಸುರಿದಿದ್ದೇನೆ’ ಎಂದು ಅವಿನಾಶ್ ಅಳಲು ತೋಡಿಕೊಂಡರು.</p>.<p>ಗುಳಗೊಂಡನಹಳ್ಳಿಯ ರೈತ ಗುರುಸ್ವಾಮಿ ಬೆಲೆ ಕುಸಿತದಿಂದ 3 ಕ್ವಿಂಟಲ್ ಟೊಮೆಟೊವನ್ನು ಬೀದರ್–ಶ್ರೀರಂಗಪಟ್ಟಣ ಹೆದ್ದಾರಿ ಬದಿಯಲ್ಲಿ ಸುರಿದಿದ್ದಾರೆ.</p>.<p>‘ಎರಡು ಎಕರೆಯಲ್ಲಿ ₹ 1.20 ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದೆ. ಹಿರಿಯೂರು ಮಾರುಕಟ್ಟೆಯಲ್ಲಿ 22 ಕೆ.ಜಿ. ತೂಕದ ಚೀಲಕ್ಕೆ ₹ 50– ₹ 60 ಇದೆ. ಒಂದು ಚೀಲ ಮಾರುಕಟ್ಟೆಗೆ ಸಾಗಿಸಲು ₹ 40 ಖರ್ಚಾಗುತ್ತದೆ. ಬೆಲೆ ಇಲ್ಲದೇ ರಸ್ತೆಗೆ ಸುರಿದಿದ್ದೇನೆ’ ಎಂದು ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳಗೊಂಡನಹಳ್ಳಿ (ಹಿರಿಯೂರು): </strong>ಬೀದರ್ ಜಿಲ್ಲೆಯ ರೈತರಿಂದ ಖರೀದಿ ಸಿದ್ದ ಟೊಮೆಟೊವನ್ನು ಲಾರಿಯಲ್ಲಿ ಒಯ್ಯು<br />ತ್ತಿದ್ದ ವರ್ತಕರೊಬ್ಬರು ದರ ಪಾತಾಳಕ್ಕೆ ಕುಸಿದ ಮಾಹಿತಿ ತಿಳಿದುಹಿರಿಯೂರು ಸಮೀಪ ಟೊಮೆಟೊವನ್ನು ರಸ್ತೆಗೆ ಚೆಲ್ಲಿದರು. ಇನ್ನೊಂದೆಡೆ ಗುಳಗೊಂಡನಹಳ್ಳಿ ರೈತರೊಬ್ಬರು ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೆಟೊವನ್ನು ರಸ್ತೆಗೆ ಸುರಿದರು.</p>.<p>ಬೆಂಗಳೂರಿಗೆ ಟೊಮೆಟೊ ಒಯ್ಯು ತ್ತಿದ್ದ ವ್ಯಾಪಾರಿ ಅವಿನಾಶ್ ದರ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ, ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಗುಳಗೊಂಡನಹಳ್ಳಿ ಬಳಿ 120 ಬಾಕ್ಸ್ಗಳಲ್ಲಿದ್ದ ಟೊಮೆಟೊವನ್ನು ರಸ್ತೆಗೆ ಸುರಿದಿದ್ದಾರೆ. ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.</p>.<p>‘ಬಾಕ್ಸ್ ಟೊಮೆಟೊಗೆ ₹50 ರಂತೆ ಖರೀದಿಸಿದ್ದೇನೆ. ಬೀದರ್ನಿಂದ ಬೆಂಗಳೂರಿಗೆ ಒಂದು ಬಾಕ್ಸ್ ಸಾಗಣೆಗೆ ₹100 ಬಾಡಿಗೆ ಕೊಡಬೇಕು. ಲಾರಿ ಬಾಡಿಗೆ ₹ 42 ಸಾವಿರ ಕೊಡಬೇಕಿದೆ. ಬೆಂಗಳೂರಿಗೆ ಒಯ್ದರೆ ಅರ್ಧ ಬಾಡಿಗೆಯೂ ಬರುವುದಿಲ್ಲ. ಹೀಗಾಗಿ ಇಲ್ಲಿಯೇ ಸುರಿದಿದ್ದೇನೆ’ ಎಂದು ಅವಿನಾಶ್ ಅಳಲು ತೋಡಿಕೊಂಡರು.</p>.<p>ಗುಳಗೊಂಡನಹಳ್ಳಿಯ ರೈತ ಗುರುಸ್ವಾಮಿ ಬೆಲೆ ಕುಸಿತದಿಂದ 3 ಕ್ವಿಂಟಲ್ ಟೊಮೆಟೊವನ್ನು ಬೀದರ್–ಶ್ರೀರಂಗಪಟ್ಟಣ ಹೆದ್ದಾರಿ ಬದಿಯಲ್ಲಿ ಸುರಿದಿದ್ದಾರೆ.</p>.<p>‘ಎರಡು ಎಕರೆಯಲ್ಲಿ ₹ 1.20 ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದೆ. ಹಿರಿಯೂರು ಮಾರುಕಟ್ಟೆಯಲ್ಲಿ 22 ಕೆ.ಜಿ. ತೂಕದ ಚೀಲಕ್ಕೆ ₹ 50– ₹ 60 ಇದೆ. ಒಂದು ಚೀಲ ಮಾರುಕಟ್ಟೆಗೆ ಸಾಗಿಸಲು ₹ 40 ಖರ್ಚಾಗುತ್ತದೆ. ಬೆಲೆ ಇಲ್ಲದೇ ರಸ್ತೆಗೆ ಸುರಿದಿದ್ದೇನೆ’ ಎಂದು ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>