‘2021ರ ಜನವರಿಯಿಂದ ಬಾಕಿ ಇರುವ ಭವಿಷ್ಯ ನಿಧಿ ಯನ್ನು ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ಗಂಭೀರ ಆಕ್ಷೇಪಗಳು ಎದುರಾಗಬಹುದು, ನಿಗಮಗಳ ಮೇಲೆ ಕಾನೂ ನಾತ್ಮಕ ಕ್ರಮಗಳು ಜರುಗಿಸಲು ಭವಿಷ್ಯ ನಿಧಿ ಕಾಯ್ದೆಯಲ್ಲಿ ಅವಕಾಶ ಇದೆ. ಆದ್ದರಿಂದ ಬಾಕಿ ಮೊತ್ತಕ್ಕೆ ₹800 ಕೋಟಿ ಪಾವತಿಸಬೇಕು’ ಎಂದು ನಾಲ್ಕು ಸಂಸ್ಥೆಗಳ ಪರವಾಗಿ ಸರ್ಕಾರಕ್ಕೆ ಕೆಎಸ್ಆರ್ಟಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೇ, ಎರಡು ತಿಂಗಳ ಇಂಧನ ವೆಚ್ಚಕ್ಕೆ ₹400 ಸೇರಿಸಿ ಒಟ್ಟಾರೆ ₹1,200 ಕೋಟಿ ಬಿಡುಗಡೆ ಮಾಡುವಂತೆ ಕೋರಿತ್ತು.