ರಾಜ್ಯದ ವಿವಿಧ ಕಡೆಯಂತೆ ಕರಾವಳಿಯಲ್ಲಿಯೂ ಚರ್ಚ್ಗಳ ಮೇಲೆ ದಾಳಿ ನಡೆದಿದೆ. ಬಲವಂತದ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಇಂತಹ ದಾಳಿ ನಡೆಸಿವೆ.. ಇಂತಹ ಘಟನೆಗಳನ್ನು ನೆಪವಾಗಿಟ್ಟುಕೊಂಡೇ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತರಲು ಮುಂದಾಗಿದ್ದು, ಇದು ಹಗೆತನಕ್ಕೆ ಕಾನೂನು ರೂಪ ನೀಡುವ ಯತ್ನ ಎಂದು ಆರೋಪಿಸುತ್ತಾರೆ ಕ್ರೈಸ್ತರು.