ಬೆಂಗಳೂರಿನ ಶುಭಾ ಧನಂಜಯ ತಂಡದಿಂದ ಕಥಕ್, ಕಲಬುರಗಿಯ ಶುಭಾಂಗಿ ಸುಧೀಂದ್ರ ತಂಡದಿಂದ ಮಹಾರಾಷ್ಟ್ರದ ಗೊಂದಾಲ್ ನೃತ್ಯ, ಬೆಂಗಳೂರಿನ ವೀಣಾಮೂರ್ತಿ ವಿಜಯ್ ತಂಡದಿಂದ ಕೂಚಿಪುಡಿ ನೃತ್ಯ, ಬೆಂಗಳೂರಿನ ಸ್ನೇಹಾ ಕಪ್ಪಣ್ಣ ಅವರ ಭ್ರಮರಿ ನೃತ್ಯ ರೆಪರ್ಟರಿ ವತಿಯಿಂದ ಪಟದ ಕುಣಿತ, ತುಮಕೂರಿನ ಬಾಲಾ ವಿಶ್ವನಾಥ್ ತಂಡದಿಂದ ಭರತನಾಟ್ಯಕ್ಕೆ ವಚನವನ್ನು ಅಳವಡಿಸಿದ 'ವಚನಾಂಜಲಿ', ಬೆಂಗಳೂರಿನ ವೀಣಾ ಭಟ್ ತಂಡದಿಂದ ಅಸ್ಸಾಂನ ಬಿಹು ನೃತ್ಯ, ರಾಧಿಕಾ ಮಕರಂ ಅವರ ತಂಡದಿಂದ ಒಡಿಸ್ಸೀ ನೃತ್ಯ, ಶಿವಮೊಗ್ಗದ ಸಹನಾ ಚೇತನ್ ತಂಡದಿಂದ 'ಶಿವ ಸುಂದರ ಭಾರತದ ಪುಣ್ಯ ನೆಲ' ನೃತ್ಯ ಹಾಗೂ ಬೆಂಗಳೂರಿನ ಲಿಂಗಣ್ಣ ಅವರ ನೇತೃತ್ವದ. ಕರ್ನಾಟಕ ಜಾನಪದ ಬೀಸು ಕಂಸಾಳೆ ಸಂಘದಿಂದ ಬೀಸು ಕಂಸಾಳೆ ನೃತ್ಯವು ಪ್ರದರ್ಶನಗೊಳ್ಳಲಿವೆ.