<p><strong>ಹೂವಿನಹಡಗಲಿ:</strong> ತಾಲ್ಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಕಾಣಿಕೆ ಹುಂಡಿಗಳನ್ನು ಗುರುವಾರ ತೆರೆದು ನಗದು ಎಣಿಕೆ ಮಾಡಲಾಯಿತು.</p>.<p>ಈ ವೇಳೆ, ಕಾಣಿಕೆಯೊಂದಿಗೆ ಪತ್ರವೊಂದು ಪತ್ತೆಯಾಗಿದೆ. ‘ಪ್ರೀತಿಸಿದ ಹುಡುಗಿ ತನಗೆ ಸಿಗುವಂತೆ ದಯಪಾಲಿಸು ಮೈಲಾರಲಿಂಗ’ ಎಂದು ಯುವಕನೊಬ್ಬ ಚೀಟಿ ಬರೆದು ಕಾಣಿಕೆಯೊಂದಿಗೆ ಹುಂಡಿಯಲ್ಲಿ ಹಾಕಿರುವುದು ಪತ್ತೆಯಾಯಿತು. ಹುಂಡಿ ಎಣಿಕೆಯ ಸಂದರ್ಭದಲ್ಲಿ ಸಿಕ್ಕ ಪತ್ರವನ್ನು ನೋಡಿದಾಗ ಅದರಲ್ಲಿ ಮೇಲಿನ ಒಕ್ಕಣಿಕೆ ಇತ್ತು. ಇಷ್ಟಾರ್ಥ ಸಿದ್ಧಿಯ ಈ ವಿಚಿತ್ರ ಪತ್ರ ಕ್ಷಣಕಾಲ ಚರ್ಚೆಗೀಡಾಯಿತು.</p>.<p><strong>₹36,86,183 ಹಣ ಸಂಗ್ರಹ</strong></p>.<p>‘ಜಾತ್ರೆಗೂ ಮುನ್ನ ಅಳವಡಿಸಿದ್ದ ಮೂರು ಮುಖ್ಯ ಹುಂಡಿ, ಒಂಬತ್ತು ತಾತ್ಕಾಲಿಕ ಕಾಣಿಕೆ ಹುಂಡಿಗಳಲ್ಲಿ ಭಕ್ತರಿಂದ ₹36,86,183 ಸಂಗ್ರಹವಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ ರಾವ್ ತಿಳಿಸಿದರು.</p>.<p>‘ಈ ಬಾರಿಯೂ ಭಕ್ತರೊಬ್ಬರು ₹10 ಲಕ್ಷ ಹಣವನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ₹2,000 ಮುಖಬೆಲೆಯ ಐದು ಕಂತೆಗಳು ಎಣಿಕೆ ವೇಳೆ ಸಿಕ್ಕವು. ಸ್ವಾಮಿಗೆ ಅರ್ಪಿಸುವ ಕಾಣಿಕೆ ಕುರಿತು ಯಾವುದೇ ಪ್ರಚಾರ ಬಯಸದ ಆ ಭಕ್ತ, ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಬಾರಿ ₹10 ಲಕ್ಷ ಕಾಣಿಕೆಯನ್ನು ಹುಂಡಿಗೆ ಹಾಕುತ್ತಿದ್ದಾರೆ. ಸ್ವಾಮಿ ಅವರ ಇಷ್ಟಾರ್ಥ ನೆರವೇರಿಸಲಿ’ ಎಂದರು.</p>.<p>ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಮುಜರಾಯಿ ಇಲಾಖೆ ಅಧೀಕ್ಷಕ ಮಲ್ಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ, ಮುಖಂಡರಾದ ಮಾಲತೇಶ, ಜಗದೀಶಗೌಡ, ಮಂಜುನಾಥ ನಾಗಪ್ಪನವರ, ಕೆ.ಶಂಕರ ಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ:</strong> ತಾಲ್ಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಕಾಣಿಕೆ ಹುಂಡಿಗಳನ್ನು ಗುರುವಾರ ತೆರೆದು ನಗದು ಎಣಿಕೆ ಮಾಡಲಾಯಿತು.</p>.<p>ಈ ವೇಳೆ, ಕಾಣಿಕೆಯೊಂದಿಗೆ ಪತ್ರವೊಂದು ಪತ್ತೆಯಾಗಿದೆ. ‘ಪ್ರೀತಿಸಿದ ಹುಡುಗಿ ತನಗೆ ಸಿಗುವಂತೆ ದಯಪಾಲಿಸು ಮೈಲಾರಲಿಂಗ’ ಎಂದು ಯುವಕನೊಬ್ಬ ಚೀಟಿ ಬರೆದು ಕಾಣಿಕೆಯೊಂದಿಗೆ ಹುಂಡಿಯಲ್ಲಿ ಹಾಕಿರುವುದು ಪತ್ತೆಯಾಯಿತು. ಹುಂಡಿ ಎಣಿಕೆಯ ಸಂದರ್ಭದಲ್ಲಿ ಸಿಕ್ಕ ಪತ್ರವನ್ನು ನೋಡಿದಾಗ ಅದರಲ್ಲಿ ಮೇಲಿನ ಒಕ್ಕಣಿಕೆ ಇತ್ತು. ಇಷ್ಟಾರ್ಥ ಸಿದ್ಧಿಯ ಈ ವಿಚಿತ್ರ ಪತ್ರ ಕ್ಷಣಕಾಲ ಚರ್ಚೆಗೀಡಾಯಿತು.</p>.<p><strong>₹36,86,183 ಹಣ ಸಂಗ್ರಹ</strong></p>.<p>‘ಜಾತ್ರೆಗೂ ಮುನ್ನ ಅಳವಡಿಸಿದ್ದ ಮೂರು ಮುಖ್ಯ ಹುಂಡಿ, ಒಂಬತ್ತು ತಾತ್ಕಾಲಿಕ ಕಾಣಿಕೆ ಹುಂಡಿಗಳಲ್ಲಿ ಭಕ್ತರಿಂದ ₹36,86,183 ಸಂಗ್ರಹವಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶ ರಾವ್ ತಿಳಿಸಿದರು.</p>.<p>‘ಈ ಬಾರಿಯೂ ಭಕ್ತರೊಬ್ಬರು ₹10 ಲಕ್ಷ ಹಣವನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ. ₹2,000 ಮುಖಬೆಲೆಯ ಐದು ಕಂತೆಗಳು ಎಣಿಕೆ ವೇಳೆ ಸಿಕ್ಕವು. ಸ್ವಾಮಿಗೆ ಅರ್ಪಿಸುವ ಕಾಣಿಕೆ ಕುರಿತು ಯಾವುದೇ ಪ್ರಚಾರ ಬಯಸದ ಆ ಭಕ್ತ, ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಬಾರಿ ₹10 ಲಕ್ಷ ಕಾಣಿಕೆಯನ್ನು ಹುಂಡಿಗೆ ಹಾಕುತ್ತಿದ್ದಾರೆ. ಸ್ವಾಮಿ ಅವರ ಇಷ್ಟಾರ್ಥ ನೆರವೇರಿಸಲಿ’ ಎಂದರು.</p>.<p>ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಮುಜರಾಯಿ ಇಲಾಖೆ ಅಧೀಕ್ಷಕ ಮಲ್ಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾ, ಮುಖಂಡರಾದ ಮಾಲತೇಶ, ಜಗದೀಶಗೌಡ, ಮಂಜುನಾಥ ನಾಗಪ್ಪನವರ, ಕೆ.ಶಂಕರ ಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>