‘ಸಿಂಧೂರಿ ಅವರನ್ನು ತರಾತುರಿಯಲ್ಲಿ, ರಾಜಕಾರಣಿಗಳ ಒತ್ತಡದಿಂದ ಸರ್ಕಾರ ವರ್ಗಾವಣೆ ಮಾಡಿದೆ. ಭೂಮಾಫಿಯಾವೇ ಇದಕ್ಕೆ ಕಾರಣ. ಭೂಮಾಫಿಯಾದ ಬಗ್ಗೆ ವರದಿ ನೀಡಲು ಸಮಯಾವಕಾಶವನ್ನೇ ನೀಡಲಿಲ್ಲ. ಮೈಸೂರಿನ ಜನತೆಗೆ ವಾಸ್ತವ ಗೊತ್ತಾಗಬೇಕು. ವಾಸ್ತವ ತಿಳಿದುಕೊಳ್ಳುವ ಹಕ್ಕು ನಮಗೆ ಇದೆ. ಭ್ರಷ್ಟಾಚಾರಕ್ಕೆ ತಿಲಾಂಜಲಿ ಇಡಲೇಬೇಕು. ಹೀಗಾಗಿ, ಸಿಂಧೂರಿ ಅವರ ನೇತೃತ್ವದಲ್ಲೇ ತನಿಖೆ ನಡೆಸಲಿ. ಈ ನಿಟ್ಟಿನಲ್ಲಿ ನಮ್ಮ ಆಂದೋಲನ ಆರಂಭವಾಗಿದ್ದು, ಬೆಂಬಲಿಸಿ’ ಎಂದು ಆಗ್ರಹಿಸಲಾಗಿದೆ.