ಗಿರಿಜಾ ರಾಜಶೇಖರ ಅವರು ‘ಹೆಣ್ಣು ಭ್ರೂಣ ಹತ್ಯೆ’ಯ ಬಗ್ಗೆ ಕವಿತೆ ವಾಚಿಸಿ, ಸಮಾಜ ಹೆಣ್ಣನ್ನು ಸ್ವೀಕರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅವರ ಕವಿತೆ ಮೆಚ್ಚುಗೆಗೆ ಭಾಜನವಾಯಿತು. ಗುರು ಬಸವರಾಜ ಅವರು ತಮ್ಮ ‘ಪುನೀತ’ ಕವಿತೆಯ ಮೂಲಕ ಧರ್ಮ ರಾಜಕಾರಣದ ಬಗ್ಗೆ ಪ್ರಸ್ತಾಪಿಸಿದರು. ಮೌನೇಶ್ ಬಡಿಗೇರ ಅವರ ‘ದೇವರೇ ನಿನಗೊಂದು ಪತ್ರ ಬರೆಯುತ್ತಿರುವೆ’ ಕವಿತೆ, ದೇವರ ಬಗೆಗಿನ ಕಲ್ಪನೆ, ನಂಬಿಕೆ, ಜಾತಿ–ಧರ್ಮದ ಲೇಪನವನ್ನು ಅನಾವರಣ ಮಾಡಿತು.