ಬಿಜೆಪಿಯ ಅರುಣ್ ಶಹಾಪುರ್, ‘ಈ ವಿಚಾರ ಭರವಸೆಗಳ ಸಮಿತಿಯಲ್ಲೂ ಚರ್ಚೆಯಾಗಿದೆ. ಪ್ರಾಧಿಕಾರದಲ್ಲಿ ನಿಯೋಜನೆ ಮೇರೆಗೆ ಇರುವ ಅಧಿಕಾರಿಯೊಬ್ಬರಿಂದಾಗಿ ಈ ರೀತಿ ಆಗುತ್ತಿದೆ. ವೃಂದ ಮತ್ತು ನೇಮಕಾತಿ ನಿಯಮಕ್ಕೆ ಹಣಕಾಸು ಇಲಾಖೆಯಿಂದ ಅನುಮೋದ ಸಿಗಬಾರದು ಎಂಬ ಉದ್ದೇಶದಿಂದಲೇ ಪ್ರಾಧಿಕಾರವು ಅಗತ್ಯಕ್ಕಿಂತ ಹೆಚ್ಚು ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವವನ್ನು ನಿಯಮದ ಕರಡಿನಲ್ಲಿ ಸೇರಿಸಿದೆ’ ಎಂದು ಆರೋಪಿಸಿದರು.