ಆಹ್ವಾನ ಪತ್ರಿಕೆ ಹಾಗೂ ಫ್ಲೆಕ್ಸ್ನಲ್ಲಿ ‘ಸಾಧು ವೀರಶೈವ ಸಂಘ’ ಎಂಬ ಪದ ಗಮನಿಸಿದ ಸಾಣೇಹಳ್ಳಿ ಶ್ರೀಗಳು, ‘ನಾವು ಲಿಂಗಾಯತರು. ಬಸವ ಪರಂಪರೆಯಿಂದ ಬಂದವರು. ನಾವು ದೇವರನ್ನು ಪೂಜಿಸಲು ಗುಡಿಗೆ ಹೋಗುವುದಿಲ್ಲ. ನಮ್ಮ ದೇಹವೇ ಒಂದು ದೇಗುಲ ಇದ್ದಂತೆ. ನಮ್ಮ ಸಮಾಜಬಂಧುಗಳೆಲ್ಲರೂ ಲಿಂಗದೀಕ್ಷೆ ಪಡೆದುಕೊಳ್ಳಬೇಕು. ಇನ್ನು ಮುಂದೆ ಸಭೆ, ಸಮಾರಂಭಗಳಲ್ಲಿ ‘ವೀರಶೈವ’ ಎಂಬುದರ ಬದಲಿಗೆ ‘ಲಿಂಗಾಯತ’ ಎಂಬ ಪದ ಬಳಸಿ’ ಎಂದು ಸಲಹೆ ನೀಡಿದರು.