<p><strong>ಬೆಂಗಳೂರು:</strong> ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಸಹಾಯ ಕೇಳಿದ್ದ ಆರು ವರ್ಷದ ಬಾಲಕಿಗೆ ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.</p>.<p>‘ಬಾಲಕಿಯ ಪೋಷಕರು ಸಹಾಯ ಕೇಳಿರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೆ ಮಾಡಿ ತಿಳಿಸಿದರು. ಮುಖ್ಯಮಂತ್ರಿ ಪರಿಹಾರ ನಿಧಿಯ ಅನುದಾನದಡಿ ಉಚಿತ ಚಿಕಿತ್ಸೆ ನೀಡುವಂತೆ ಹೇಳಿದರು. ಸರ್ಜರಿ ಬಳಿಕ ಮಗು ನಡೆಯಲು ಆರಂಭಿಸಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಚ್.ಎಸ್.ಚಂದ್ರಶೇಖರ್ ಮಾಹಿತಿ<br />ನೀಡಿದರು.</p>.<p>‘ಚುನಾವಣೆಯ ದಿನ ಬಾಗಲೂರಿನ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಆರು ವರ್ಷದ ಮಗಳು ಶ್ರೇಯಾಳ ಮೇಲೆ ಕಾರ್ ಹರಿಯಿತು. ಕಾಲು ಜಜ್ಜಿ ಹೋದಂತೆ ಆಗಿತ್ತು. ಬೇರೆ ಕಡೆ ಸರ್ಜರಿ ಮಾಡಲು ₹1 ಲಕ್ಷ ಬೇಕು ಎಂದು ಹೇಳಿದ್ದರು. ತಂದೆ (ನಾಗೇಂದ್ರ) ಹಾಗೂ ಮಗಳು ಎರಡು ತಿಂಗಳ ಹಿಂದೆ ಜನತಾದರ್ಶನಕ್ಕೆ ಹೋಗಿದ್ದರು. ಅದರ ಪರಿಣಾಮ ಇಲ್ಲಿ ಚಿಕಿತ್ಸೆ<br />ದೊರೆತಿದೆ’ ಎಂದು ಮಗುವಿನ ತಾಯಿ ಪರಿಮಳಾ ಹೇಳಿದರು.</p>.<p>ಸರ್ಜರಿ ತಂಡದ ಡಾ. ಜಯಂತ್, ‘ತಿಂಗಳ ಹಿಂದೆ ಈ ಬಾಲಕಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ತೀರ್ಮಾನ ಮಾಡಿದೆವು. ಚರ್ಮಕ್ಕೆ ಬೆರಳುಗಳು ಸಂಪೂರ್ಣವಾಗಿ ಅಂಟಿಕೊಂಡಿದ್ದವು. ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಸವಾಲುಗಳ ನಡುವೆಯೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಸಹಾಯ ಕೇಳಿದ್ದ ಆರು ವರ್ಷದ ಬಾಲಕಿಗೆ ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.</p>.<p>‘ಬಾಲಕಿಯ ಪೋಷಕರು ಸಹಾಯ ಕೇಳಿರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೆ ಮಾಡಿ ತಿಳಿಸಿದರು. ಮುಖ್ಯಮಂತ್ರಿ ಪರಿಹಾರ ನಿಧಿಯ ಅನುದಾನದಡಿ ಉಚಿತ ಚಿಕಿತ್ಸೆ ನೀಡುವಂತೆ ಹೇಳಿದರು. ಸರ್ಜರಿ ಬಳಿಕ ಮಗು ನಡೆಯಲು ಆರಂಭಿಸಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಚ್.ಎಸ್.ಚಂದ್ರಶೇಖರ್ ಮಾಹಿತಿ<br />ನೀಡಿದರು.</p>.<p>‘ಚುನಾವಣೆಯ ದಿನ ಬಾಗಲೂರಿನ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಆರು ವರ್ಷದ ಮಗಳು ಶ್ರೇಯಾಳ ಮೇಲೆ ಕಾರ್ ಹರಿಯಿತು. ಕಾಲು ಜಜ್ಜಿ ಹೋದಂತೆ ಆಗಿತ್ತು. ಬೇರೆ ಕಡೆ ಸರ್ಜರಿ ಮಾಡಲು ₹1 ಲಕ್ಷ ಬೇಕು ಎಂದು ಹೇಳಿದ್ದರು. ತಂದೆ (ನಾಗೇಂದ್ರ) ಹಾಗೂ ಮಗಳು ಎರಡು ತಿಂಗಳ ಹಿಂದೆ ಜನತಾದರ್ಶನಕ್ಕೆ ಹೋಗಿದ್ದರು. ಅದರ ಪರಿಣಾಮ ಇಲ್ಲಿ ಚಿಕಿತ್ಸೆ<br />ದೊರೆತಿದೆ’ ಎಂದು ಮಗುವಿನ ತಾಯಿ ಪರಿಮಳಾ ಹೇಳಿದರು.</p>.<p>ಸರ್ಜರಿ ತಂಡದ ಡಾ. ಜಯಂತ್, ‘ತಿಂಗಳ ಹಿಂದೆ ಈ ಬಾಲಕಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ತೀರ್ಮಾನ ಮಾಡಿದೆವು. ಚರ್ಮಕ್ಕೆ ಬೆರಳುಗಳು ಸಂಪೂರ್ಣವಾಗಿ ಅಂಟಿಕೊಂಡಿದ್ದವು. ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಸವಾಲುಗಳ ನಡುವೆಯೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>