60 ವರ್ಷಗಳಿಂದ ಪೀಠಾಧ್ಯಕ್ಷರಾಗಿದ್ದ ಅವರು,‘ಅಲ್ಲಮ ಪ್ರಶಸ್ತಿ’ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದ್ದರು. ಆ ಮೂಲಕ ಬಸವಣ್ಣನ ತತ್ವಗಳ ಅನುಷ್ಠಾನಕ್ಕಾಗಿ ದುಡಿದರಲ್ಲದೆ, ಸಂಸ್ಕೃತ, ಹಿಂದಿ ಮತ್ತು ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದರು. ಶಾಂತವೀರ ಸ್ವಾಮೀಜಿ ಮಠದಲ್ಲಿ ಹಿಂದಿ ಭಾಷಾ ಸಮ್ಮೇಳನಗಳನ್ನೂ ನಡೆಸುತ್ತಿದ್ದರು. ವೇದ ಮತ್ತು ಆಗಮ ಶಾಸ್ತ್ರ ಗಳಲ್ಲೂ ಪಾಂಡಿತ್ಯ ಪಡೆದಿದ್ದ ಅವರು ಧಾರ್ಮಿಕ ಚಟುವಟಿಕೆಗಳ ಹೊರತಾಗಿ ಸಾಮಾಜಿಕ, ರಾಜಕೀಯ ಬೆಳವಣಿ ಗೆಗಳಲ್ಲಿ ಆಗಾಗ್ಗೆ ಮುನ್ನೆಲೆಗೂ ಬಂದದ್ದುಂಟು. ಜಾತ್ಯತೀತ ಮಠ ಎಂದೇ ಕೊಳದ ಮಠ ಪ್ರಸಿದ್ಧಿ ಪಡೆದಿದೆ.