‘ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಆತಂಕ ಇಲ್ಲ. ಬುಧವಾರ ಬೆಳಿಗ್ಗೆ ಬಾಳೆ ಹಣ್ಣು, ಪಪ್ಪಾಯಿ, ಇಡ್ಲಿ ಸೇವಿಸಿದರು. ಚಿಕಿತ್ಸೆಗಾಗಿ ದಿನದ 24 ತಾಸು ವೈದ್ಯರ ತಂಡ ನಿಯೋಜಿಸಲಾಗಿದೆ’ ಎಂದು ಸ್ವಾಮೀಜಿ ಅವರ ಚಿಕಿತ್ಸೆ ಉಸ್ತುವಾರಿ ವಹಿಸಿರುವ ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ತಿಳಿಸಿದರು.