<p><strong>ಬಳ್ಳಾರಿ: </strong>ನಟ ಅಂಬರೀಶ್ ನಿಧನರಾಗಿ ಹನ್ನೊಂದನೇ ದಿನದ ಸ್ಮರಣೆಗಾಗಿ ಸಿರುಗುಪ್ಪ ತಾಲ್ಲೂಕಿನ ಬಗ್ಗೂರಿನ ಅಭಿಮಾನಿ ಅಂಬರೀಶ್ ಮತ್ತು ಸಿದ್ದಮ್ಮ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ನಗರದ ಕನಕ ದುರ್ಗಮ್ಮ ಗುಡಿಯಲ್ಲಿ ಮಂಗಳವಾರ ಹನ್ನೊಂದು ತೆಂಗಿನ ಕಾಯಿ ಒಡೆದು ಹರಕೆತೀರಿಸಿದರು.</p>.<p>ಎರಡು ವರ್ಷದ ಹಿಂದೆ ಈ ದಂಪತಿಗೆ ಅವಧಿಗೆ ಮುನ್ನವೇ ಜನಿಸಿದ್ದ ಗಂಡು ಮಗು ಉಳಿಯುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು.</p>.<p>ಅಂಬರೀಶ್ ಅಭಿಮಾನಿಯಾದ ಅಂಬರೀಶ್ ತಮ್ಮ ಪತ್ನಿ, ಮಗುವಿನ ಸಮೇತ ಬೆಂಗಳೂರಿನ ಅಂಬರೀಶ್ ಮನೆಗೆ ತೆರಳಿದ್ದರು. ತನ್ನ ಜನ್ಮ ದಿನದಂದೇ ಬಂದ ಅಭಿಮಾನಿಯ ಮಗುವಿಗೆ ನಟ ಅಂಬರೀಶ್ <strong>ಕರ್ಣ</strong> ಎಂದು ಹೆಸರಿಟ್ಟಿದ್ದರು.</p>.<p>ನಟ ಮತ್ತು ಕರ್ಣನ ದಾನಗುಣ ಎಲ್ಲರಿಗೂ ಬರಲಿ ಎಂದು ಹರಕೆ ಹೊತ್ತ ದಂಪತಿ ದುರ್ಗಮ್ಮ ಗುಡಿಗೆ ಬಂದು ಪೂಜೆ ಸಲ್ಲಿಸಿದರು.</p>.<p>ದಂಪತಿಯ ಮಗಳು ಕಂಕಣ ರಣಾವತ್ ಹಾಗೂಗೆಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ನಟ ಅಂಬರೀಶ್ ನಿಧನರಾಗಿ ಹನ್ನೊಂದನೇ ದಿನದ ಸ್ಮರಣೆಗಾಗಿ ಸಿರುಗುಪ್ಪ ತಾಲ್ಲೂಕಿನ ಬಗ್ಗೂರಿನ ಅಭಿಮಾನಿ ಅಂಬರೀಶ್ ಮತ್ತು ಸಿದ್ದಮ್ಮ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ನಗರದ ಕನಕ ದುರ್ಗಮ್ಮ ಗುಡಿಯಲ್ಲಿ ಮಂಗಳವಾರ ಹನ್ನೊಂದು ತೆಂಗಿನ ಕಾಯಿ ಒಡೆದು ಹರಕೆತೀರಿಸಿದರು.</p>.<p>ಎರಡು ವರ್ಷದ ಹಿಂದೆ ಈ ದಂಪತಿಗೆ ಅವಧಿಗೆ ಮುನ್ನವೇ ಜನಿಸಿದ್ದ ಗಂಡು ಮಗು ಉಳಿಯುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು.</p>.<p>ಅಂಬರೀಶ್ ಅಭಿಮಾನಿಯಾದ ಅಂಬರೀಶ್ ತಮ್ಮ ಪತ್ನಿ, ಮಗುವಿನ ಸಮೇತ ಬೆಂಗಳೂರಿನ ಅಂಬರೀಶ್ ಮನೆಗೆ ತೆರಳಿದ್ದರು. ತನ್ನ ಜನ್ಮ ದಿನದಂದೇ ಬಂದ ಅಭಿಮಾನಿಯ ಮಗುವಿಗೆ ನಟ ಅಂಬರೀಶ್ <strong>ಕರ್ಣ</strong> ಎಂದು ಹೆಸರಿಟ್ಟಿದ್ದರು.</p>.<p>ನಟ ಮತ್ತು ಕರ್ಣನ ದಾನಗುಣ ಎಲ್ಲರಿಗೂ ಬರಲಿ ಎಂದು ಹರಕೆ ಹೊತ್ತ ದಂಪತಿ ದುರ್ಗಮ್ಮ ಗುಡಿಗೆ ಬಂದು ಪೂಜೆ ಸಲ್ಲಿಸಿದರು.</p>.<p>ದಂಪತಿಯ ಮಗಳು ಕಂಕಣ ರಣಾವತ್ ಹಾಗೂಗೆಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>