ವಿಜಯಪುರ: ಯುವಕರಿಬ್ಬರು ಎಂಟನೇ ತರಗತಿ ಬಾಲಕಿಗೆ ನಿರಂತರವಾಗಿ ಚುಡಾಯಿಸಿ, ಕಿರುಕುಳ ನೀಡುತ್ತಿದ್ದಕ್ಕೆ, ಮನನೊಂದ ಆಕೆ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಭಾನುವಾರ ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ದೂರು ತಿಕೋಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.