ಮಡಿಕೇರಿ: ತಾಯಿಯ ನಿಧನದ ದುಃಖದಲ್ಲೂ, ಶಿಕ್ಷಕಿಯೊಬ್ಬರು ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆ ತೋರಿದರು.
ತಾಲ್ಲೂಕಿನ ಬೆಟ್ಟಿಗೇರಿಯ ಶಿಕ್ಷಕಿ ಕವಿತಾ ಅವರ ತಾಯಿ ವಯೋಸಹಜ ಅನಾರೋಗ್ಯದಿಂದ ಸೋಮವಾರ ಮುಂಜಾನೆ ಮೃತಪಟ್ಟಿದ್ದರು. ಆ ದುಃಖದಲ್ಲೂ ಕವಿತಾ ಅವರು, ನಗರದ ಸೇಂಟ್ ಮೈಕಲ್ ಶಾಲೆಯಲ್ಲಿ ನಡೆದ ಮೌಲ್ಯಮಾಪನಕ್ಕೆ ಹಾಜರಾಗಿದ್ದರು. ಬಳಿಕ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.
‘ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಳಂಬವಾಗಿ ನಡೆದಿದೆ. ವಿದ್ಯಾರ್ಥಿಗಳ ಭವಿಷ್ಯವೂ ಮುಖ್ಯ. ಹೀಗಾಗಿ, ಮೌಲ್ಯಮಾಪನಕ್ಕೆ ಬಂದೆ’ ಎಂದು ಶಿಕ್ಷಕಿ ಪ್ರತಿಕ್ರಿಯಿಸಿದರು.