ರಾಜ್ಯದಲ್ಲಿಈಡಿಗ ಸಮಾಜದ ಜನಸಂಖ್ಯೆ 70 ಲಕ್ಷ ಇದೆ. ಈಡಿಗ ಸಮಾಜದ 7 ಶಾಸಕರು, ಇಬ್ಬರು ಮಂತ್ರಿಗಳು ಇದ್ದರೂ ಅಭಿವೃದ್ಧಿಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ.2004ರಲ್ಲಿ ಈಡಿಗ ಸಮಾಜದ ಕಸುಬು ಕಸಿದುಕೊಂಡು ಪರ್ಯಾಯ ವ್ಯವಸ್ಥೆ ನೀಡದೆ, ಕತ್ತಲಲ್ಲಿ ಕವಿಯುವಂತೆ ಮಾಡಿದೆ ಎಂದು ದೂರಿದರು.ರಾಜ್ಯದಲ್ಲಿ ಪರವಾನಗಿ ಇಲ್ಲದೆ ಈಚಲು ಮರ ಕಡಿಯುವಂತಿಲ್ಲ. ಮಕ್ಕಳ ಶಿಕ್ಷಣಕ್ಕೆ ಸಾಲ ವ್ಯವಸ್ಥೆ ಇದೆ. ಕರ್ನಾಟಕದಲ್ಲಿ ಏಕೆ ಸೇಂದಿ ಇಳಿಕೆ ಸೌಲಭ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.