ರಾಯಚೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಪ್ರಯುಕ್ತ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಬುಧವಾರ ವಿಶೇಷ ದೀಪೋತ್ಸವ ಪೂಜೆಮಾಡಿದರು.
ಸುವರ್ಣ ರಾಮದೇವರ ಮೂರ್ತಿಯನ್ನು ರಜತ ಸಿಂಹಾಸನದಲ್ಲಿ ಇರಿಸಿ, ದೀಪೋತ್ಸವ ಪೂಜೆ ನೆರವೇರಿಸಿದರು.
ಶ್ರೀ ಸುಬುಧೇಂದ್ರ ತೀರ್ಥರು, ‘ರಾಯರ ಮಧ್ಯಾರಾಧನೆ ದಿನದಂದು ರಾಮಮಂದಿರ ಶಿಲಾನ್ಯಾಸ ನೆರವೇರಿದ್ದು, ಇದು ಸರ್ವಕಾಲಕ್ಕೂ ನೆನಪಿನಲ್ಲಿ ಉಳಿಯುತ್ತದೆ’ ಎಂದರು.