<p>ಧಾರವಾಡದ ಸಮೀಪದ ತೇಗೂರಿನಲ್ಲಿರುವ ಎಮ್ಮೆ ತಳಿ ಸಂವರ್ಧನಾ ಕೇಂದ್ರವು ಸ್ವಾತಂತ್ರ್ಯ ಪೂರ್ವದಿಂದಲೇ ಜಾನುವಾರು ತಳಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಹೆಸರಾಗಿದ್ದು, ಮಿಶ್ರ ಬೇಸಾಯದ ಮಾದರಿಯಾಗಿದೆ. 1910ರಲ್ಲಿ ಸ್ಥಾಪನೆಯಾದ ಈ ಕೇಂದ್ರದಲ್ಲಿ ಮುರ್ರಾ, ಸುರ್ತಿ ತಳಿಯ ಎಮ್ಮೆಗಳು ಮತ್ತು ಕೃಷ್ಣಾ ವ್ಯಾಲಿ ಆಕಳುಗಳ ಸಂರಕ್ಷಣೆ ನಡೆಯುತ್ತಿದೆ. ಇದೇ ಕೇಂದ್ರದಲ್ಲಿ ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಹಂದಿ ತಳಿ ಸಂವರ್ಧನಾ ಘಟಕವಿದ್ದು, ಡ್ಯುರಾಕ್, ಯಾರ್ಕ್ಶೇರ್ ಮತ್ತು ಲ್ಯಾಂಡ್ರೆಸ್ ತಳಿಯ ಹಂದಿಗಳನ್ನು ಸಾಕಲಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>