ಇದಕ್ಕೆ ಸಹಮತ ವ್ಯಕ್ತಪಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ‘ನೀವು ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಕುಳಿತು, ಮಾತನಾಡಿಕೊಳ್ಳಿ. ಇಲ್ಲಿ ದೂರು ಹೇಳಿಕೊಳ್ಳುವುದು ಬೇಡ’ ಎಂದರು. ಸಭಾನಾಯಕಿ ಜಯಮಾಲ ಹೇಳಿದ್ದು ಇಷ್ಟು, ‘ಪಾಪ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನರಿಗೆ ತುಂಬಾ ಸಮಸ್ಯೆ ಇದೆ. ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಬಾರದು ಎಂದರೆ ಹೇಗೆ. ಇದೆಲ್ಲಾ ಗ್ಲೋಬಲೈಸೇಷನ್ ಪರಿಣಾಮ’ ಎಂದರು.