ಮಂಗಳೂರು: ‘ನಾನು ತುಳಸಿ ಮಾಲೆಯನ್ನು ಧರಿಸುತ್ತೇನೆ. ತುಳಸಿಯು ಹೆಚ್ಚಿನ ಆಮ್ಲಜನಕವನ್ನು ನೀಡುತ್ತದೆ. ತುಳಸಿ ಎಲೆ ಹಾಕಿದ ನೀರನ್ನು ಸೇವಿಸಿದರೆ ಕೊರೋನಾ ಬರುವುದಿಲ್ಲ’ ಎಂದು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ತಿಳಿಸಿದರು.
ಶಿವಮೊಗ್ಗದಲ್ಲಿ ಹಿಂದೂ ಜಾಗರಣ ಮಂಚ್ನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ವಿಮಾನದಲ್ಲಿ ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಶನಿವಾರ ಬಂದಿಳಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ಕೊರೋನಾ ಮತ್ತೆ ಎಚ್ಚರಿಕೆ ನೀಡುತ್ತಿದೆ. ಎಲ್ಲರೂ ಮಾಸ್ಕ್ ಧರಿಸಿ. ಆರೋಗ್ಯದಿಂದ ಇರಿ’ ಎಂದು ಕಿವಿಮಾತು ಹೇಳಿದರು.
‘ಮಂಗಳೂರಿಗೆ ಬಂದಿದ್ದು ಖುಷಿ ಕೊಟ್ಟಿದೆ. ಇಲ್ಲಿನ ಕಾರ್ಯಕರ್ತರು ಒಳ್ಳೆಯವರು. ಎಲ್ಲರಿಗೂ ಶುಭಾಶಯ’ ಎಂದರು.