ಬುಧವಾರ ರಾತ್ರಿ ಶ್ರೀ ಕೃಷ್ಣ ನಿಗೆ ಅರ್ಘ್ಯ ಪ್ರಧಾನ ಮಾಡುವ ಮೂಲಕ ವಿಟ್ಲಪಿಂಡಿ ಉತ್ಸವಕ್ಕೆ ಅಧಿಕೃತ ಚಾಲನೆ ಲಭಿಸಿತ್ತು. ಗುರುವಾರ ಬೆಳಗ್ಗೆಯಿಂದಲೇ ಮಠದ ಕಡೆಗೆ ಭಕ್ತರು ಸಾಲುಸಾಲಾಗಿ ಬರುತ್ತಿದ್ದಂತೆ ಮತ್ತೊಂದೆಡೆ ಭೋಜನ ಪ್ರಸಾದ ವಿತರಣೆ ನಡೆಯುತ್ತಿತ್ತು. ಅನ್ನ, ಸಾಂಬಾರ್, ಪಲ್ಯ, ಪಾಯಸ, ಉಂಡೆ ಚಕ್ಕುಲಿ ವಿತರಣೆ ವಿಟ್ಲ ಪಿಂಡಿಯ ವಿಶೇಷತೆ. ಉತ್ಸವಕ್ಕೆ ಬಂದಿದ್ದ ಸಾವಿರಾರು ಜನರು ಅನ್ನ ಪ್ರಸಾದ ಸವಿದರು.