‘ನನ್ನ ಸೋಲಿಗೆ ಕಾರಣವಾದವರ ವಿರುದ್ಧ ಕ್ರಮ ಜರುಗಿಸುವುದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕರ್ತವ್ಯ. ಆ ಕೆಲಸ ಮಾಡದಿದ್ದರೆ ಸಿಡಿದೇಳುವೆ’ ಎಂದೂ ಅವರು ಎಚ್ಚರಿಸಿದ್ದರು. ಇದೀಗ ಸೋಮಣ್ಣ ಅಸಮಾಧಾನ ಶಮನ ಮಾಡಲು ರಾಷ್ಟ್ರೀಯ ನಾಯಕರು ಮುಂದಾಗಿದ್ದಾರೆ. ನವದೆಹಲಿಗೆ ಬರುವಂತೆ ರಾಷ್ಟ್ರೀಯ ನಾಯಕರು ಭಾನುವಾರ ಕರೆ ಮಾಡಿದ್ದರು ಎಂದು ಮೂಲಗಳು ಹೇಳಿವೆ.