<p><strong>ಬೆಂಗಳೂರು:</strong> ವಿಧಾನಸೌಧದ ಆವರಣದಲ್ಲಿ ಹಾಗೂ ಶಾಸಕರ ಭವನದಲ್ಲಿ ತಿರುಗಾಡುವ ನಾಯಿಗಳನ್ನು ತೆರವುಗೊಳಿಸಬೇಕು ಎಂದು ವಿಧಾನಸಭೆಯ ಸದಸ್ಯರು ಸ್ಪೀಕರ್ ಯು.ಟಿ ಖಾದರ್ ಅವರೊಂದಿಗೆ ಮನವಿ ಮಾಡಿದರು.</p>.ದೆಹಲಿ|ಬೀದಿ ನಾಯಿ ಸಮಸ್ಯೆಯ ಕುರಿತು ಸದ್ಯದಲ್ಲೇ ಆರ್ಡಬ್ಲ್ಯೂಎ ಸಭೆ:ವಿಜಯ್ ಗೋಯಲ್.<p>ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ ಸುರೇಶ್ ಬಾಬು ಅವರ ಈ ವಿಷಯವನ್ನು ಪ್ರಸ್ತಾಪಿಸಿದರು.</p><p>‘ಸುಪ್ರೀಂ ಕೋರ್ಟ್ ತೀರ್ಪು ರಾಜ್ಯದಲ್ಲಿರುವ ಎಲ್ಲಾ ಪುರಸಭೆಗಳಿಗೂ ಅನ್ವಯವಾಗಬೇಕು. ನಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ನಾಯಿಗಳನ್ನು ಸ್ಥಳಾಂತರಿಸಬೇಕು. ನಾಯಿಗಳಿಗೆ ಬಿರಿಯಾನಿ ಹಾಕುವ ಬದಲು ಅವುಗಳನ್ನು ಸೆರೆಹಿಡಿಯಬೇಕು’ ಎಂದು ಹೇಳಿದರು.</p>.ನಾಯಿ ಕಡಿತ, ರೇಬಿಸ್ನಿಂದ ಸಾವು ಪ್ರಕರಣ: ‘ಸುಪ್ರೀಂ’ ಸ್ವಯಂಪ್ರೇರಿತ ವಿಚಾರಣೆ.<p>ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಎಸ್. ಸುರೇಶ್ ಕುಮಾರ್, ‘ಸುಪ್ರೀಂ ಕೋರ್ಟ್ನ ಆದೇಶ ಇಡೀ ದೇಶಕ್ಕೆ ಅನ್ವಯ. ಕೇವಲ 6 ತಿಂಗಳಲ್ಲಿ ಬೆಂಗಳೂರಿನಲ್ಲಿ 18 ಸಾವಿರ ನಾಯಿ ಕಡಿತದ ಪ್ರಕರಣ ದಾಖಲಾಗಿದೆ. 18 ಮಂದಿಗೆ ರೇಬಿಸ್ ತಗುಲಿದೆ. ಕೋರ್ಟ್ ಆದೇಶ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಇತರ ನಗರಗಳಿಗೂ ಅನ್ವಯಿಸಬೇಕು’ ಎಂದರು.</p><p>‘ವಿಧಾನಸೌಧಕ್ಕೂ ಅನ್ವಯಿಸಬೇಕು’ ಎಂದು ವಿಧಾನಸೌಧದ ಆವರಣದಲ್ಲಿ ನಾಯಿಗಳು ಓಡಾಡುತ್ತಿರುವುದನ್ನು ಉಲ್ಲೇಖಿಸಿ ಸ್ಪೀಕರ್ ಖಾದರ್ ಹೇಳಿದರು.</p>.ಹಾರೋಹಳ್ಳಿ: 6 ತಿಂಗಳಲ್ಲಿ 253 ನಾಯಿ ಕಡಿತ ಪ್ರಕರಣ ದಾಖಲು.<p>‘ತುಂಬಾ ಬೀದಿನಾಯಿಗಳಿವೆ. ನಾಯಿ ಕಡಿತದ ಎರಡು ಲಕ್ಷ ಪ್ರಕರಣಗಳು ವರದಿಯಾಗಿವೆ. ಇದು ಗಂಭೀರ ವಿಷಯ. ನಾಯಿಯ ಬಗ್ಗೆ ಕರುಣೆ ತೋರುವ ಟ್ವೀಟ್ ಒಂದನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಾಯಿ ಪ್ರೇಮಿಗಳ ಮನೆಯಲ್ಲಿ ಅವುಗಳನ್ನು ಬಿಡೋಣ’ ಎಂದು ಬಿಜೆಪಿಯ ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.</p><p>ಶಾಸಕರ ಭವನದಲ್ಲೂ ನಾಯಿಗಳ ಉಪಟಳವಿದ್ದು, ಬಾಗಿಲು ತೆರೆದಿಡಲಾಗುತ್ತಿಲ್ಲ. ಮ್ಯಾಟ್ಗಳ ಮೇಲೆ ಮೂತ್ರ ಮಾಡಿ, ಹೊರಗೆ ಬರದಂತಾಗಿದೆ’ ಎಂದು ಬಿಜೆಪಿಯ ಉಮಾನಾಥ ಕೋಟ್ಯಾನ್ ಹೇಳಿದರು.</p>.ಬೀದಿ ನಾಯಿಗಳ ನಿಯಂತ್ರಣ: ನ್ಯಾಯಾಲಯದ ಆವರಣದೊಳಗಿನ ಆಹಾರ ವಿಲೇವಾರಿಗೆ SC ನಿರ್ದೇಶನ.<p>ನಾಯಿಗಳ ಪರ ಹಾಗೂ ವಿರೋಧವಾಗಿ ಶಾಸಕರು ಇದ್ದಾರೆ. ಹೀಗಾಗಿ ನಿರ್ಧರಿಸಲು ಆಗುತ್ತಿಲ್ಲ ಎಂದು ಖಾದರ್ ಈ ವೇಳೆ ಹೇಳಿದರು.</p><p>ದಯವಿಟ್ಟು ವಿಧಾನಸೌಧ ಹಾಗೂ ಶಾಸಕರ ಭವನವನ್ನು ನಾಯಿಗಳಿಂದ ರಕ್ಷಿಸಿ ಎಂದು ಅಶ್ವತ್ಥನಾರಾಯಣ ಮನವಿ ಮಾಡಿದರು.</p><p>ನಾಯಿಗಳು ಶಾಸಕರ ಭವನವನ್ನು ಪ್ರವೇಶಿಸದಂತೆ ವ್ಯವಸ್ಥೆ ಮಾಡಿ. ಅವುಗಳನ್ನು ಓಡಿಸಿ ಎಂದು ಬಿಜೆಪಿಯ ಎಚ್.ಕೆ ಸುರೇಶ್ ಹೇಳಿದರು.</p> .ದೆಹಲಿ: ಬೀದಿ ನಾಯಿಗಳ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಿಧಾನಸೌಧದ ಆವರಣದಲ್ಲಿ ಹಾಗೂ ಶಾಸಕರ ಭವನದಲ್ಲಿ ತಿರುಗಾಡುವ ನಾಯಿಗಳನ್ನು ತೆರವುಗೊಳಿಸಬೇಕು ಎಂದು ವಿಧಾನಸಭೆಯ ಸದಸ್ಯರು ಸ್ಪೀಕರ್ ಯು.ಟಿ ಖಾದರ್ ಅವರೊಂದಿಗೆ ಮನವಿ ಮಾಡಿದರು.</p>.ದೆಹಲಿ|ಬೀದಿ ನಾಯಿ ಸಮಸ್ಯೆಯ ಕುರಿತು ಸದ್ಯದಲ್ಲೇ ಆರ್ಡಬ್ಲ್ಯೂಎ ಸಭೆ:ವಿಜಯ್ ಗೋಯಲ್.<p>ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ ಸುರೇಶ್ ಬಾಬು ಅವರ ಈ ವಿಷಯವನ್ನು ಪ್ರಸ್ತಾಪಿಸಿದರು.</p><p>‘ಸುಪ್ರೀಂ ಕೋರ್ಟ್ ತೀರ್ಪು ರಾಜ್ಯದಲ್ಲಿರುವ ಎಲ್ಲಾ ಪುರಸಭೆಗಳಿಗೂ ಅನ್ವಯವಾಗಬೇಕು. ನಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ನಾಯಿಗಳನ್ನು ಸ್ಥಳಾಂತರಿಸಬೇಕು. ನಾಯಿಗಳಿಗೆ ಬಿರಿಯಾನಿ ಹಾಕುವ ಬದಲು ಅವುಗಳನ್ನು ಸೆರೆಹಿಡಿಯಬೇಕು’ ಎಂದು ಹೇಳಿದರು.</p>.ನಾಯಿ ಕಡಿತ, ರೇಬಿಸ್ನಿಂದ ಸಾವು ಪ್ರಕರಣ: ‘ಸುಪ್ರೀಂ’ ಸ್ವಯಂಪ್ರೇರಿತ ವಿಚಾರಣೆ.<p>ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಎಸ್. ಸುರೇಶ್ ಕುಮಾರ್, ‘ಸುಪ್ರೀಂ ಕೋರ್ಟ್ನ ಆದೇಶ ಇಡೀ ದೇಶಕ್ಕೆ ಅನ್ವಯ. ಕೇವಲ 6 ತಿಂಗಳಲ್ಲಿ ಬೆಂಗಳೂರಿನಲ್ಲಿ 18 ಸಾವಿರ ನಾಯಿ ಕಡಿತದ ಪ್ರಕರಣ ದಾಖಲಾಗಿದೆ. 18 ಮಂದಿಗೆ ರೇಬಿಸ್ ತಗುಲಿದೆ. ಕೋರ್ಟ್ ಆದೇಶ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಇತರ ನಗರಗಳಿಗೂ ಅನ್ವಯಿಸಬೇಕು’ ಎಂದರು.</p><p>‘ವಿಧಾನಸೌಧಕ್ಕೂ ಅನ್ವಯಿಸಬೇಕು’ ಎಂದು ವಿಧಾನಸೌಧದ ಆವರಣದಲ್ಲಿ ನಾಯಿಗಳು ಓಡಾಡುತ್ತಿರುವುದನ್ನು ಉಲ್ಲೇಖಿಸಿ ಸ್ಪೀಕರ್ ಖಾದರ್ ಹೇಳಿದರು.</p>.ಹಾರೋಹಳ್ಳಿ: 6 ತಿಂಗಳಲ್ಲಿ 253 ನಾಯಿ ಕಡಿತ ಪ್ರಕರಣ ದಾಖಲು.<p>‘ತುಂಬಾ ಬೀದಿನಾಯಿಗಳಿವೆ. ನಾಯಿ ಕಡಿತದ ಎರಡು ಲಕ್ಷ ಪ್ರಕರಣಗಳು ವರದಿಯಾಗಿವೆ. ಇದು ಗಂಭೀರ ವಿಷಯ. ನಾಯಿಯ ಬಗ್ಗೆ ಕರುಣೆ ತೋರುವ ಟ್ವೀಟ್ ಒಂದನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಾಯಿ ಪ್ರೇಮಿಗಳ ಮನೆಯಲ್ಲಿ ಅವುಗಳನ್ನು ಬಿಡೋಣ’ ಎಂದು ಬಿಜೆಪಿಯ ಸಿ.ಎನ್ ಅಶ್ವತ್ಥನಾರಾಯಣ ಹೇಳಿದರು.</p><p>ಶಾಸಕರ ಭವನದಲ್ಲೂ ನಾಯಿಗಳ ಉಪಟಳವಿದ್ದು, ಬಾಗಿಲು ತೆರೆದಿಡಲಾಗುತ್ತಿಲ್ಲ. ಮ್ಯಾಟ್ಗಳ ಮೇಲೆ ಮೂತ್ರ ಮಾಡಿ, ಹೊರಗೆ ಬರದಂತಾಗಿದೆ’ ಎಂದು ಬಿಜೆಪಿಯ ಉಮಾನಾಥ ಕೋಟ್ಯಾನ್ ಹೇಳಿದರು.</p>.ಬೀದಿ ನಾಯಿಗಳ ನಿಯಂತ್ರಣ: ನ್ಯಾಯಾಲಯದ ಆವರಣದೊಳಗಿನ ಆಹಾರ ವಿಲೇವಾರಿಗೆ SC ನಿರ್ದೇಶನ.<p>ನಾಯಿಗಳ ಪರ ಹಾಗೂ ವಿರೋಧವಾಗಿ ಶಾಸಕರು ಇದ್ದಾರೆ. ಹೀಗಾಗಿ ನಿರ್ಧರಿಸಲು ಆಗುತ್ತಿಲ್ಲ ಎಂದು ಖಾದರ್ ಈ ವೇಳೆ ಹೇಳಿದರು.</p><p>ದಯವಿಟ್ಟು ವಿಧಾನಸೌಧ ಹಾಗೂ ಶಾಸಕರ ಭವನವನ್ನು ನಾಯಿಗಳಿಂದ ರಕ್ಷಿಸಿ ಎಂದು ಅಶ್ವತ್ಥನಾರಾಯಣ ಮನವಿ ಮಾಡಿದರು.</p><p>ನಾಯಿಗಳು ಶಾಸಕರ ಭವನವನ್ನು ಪ್ರವೇಶಿಸದಂತೆ ವ್ಯವಸ್ಥೆ ಮಾಡಿ. ಅವುಗಳನ್ನು ಓಡಿಸಿ ಎಂದು ಬಿಜೆಪಿಯ ಎಚ್.ಕೆ ಸುರೇಶ್ ಹೇಳಿದರು.</p> .ದೆಹಲಿ: ಬೀದಿ ನಾಯಿಗಳ ಸ್ಥಳಾಂತರಕ್ಕೆ ಸುಪ್ರೀಂ ಕೋರ್ಟ್ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>