<p><strong>ಬೆಂಗಳೂರು:</strong>ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾವು ‘ವಿಶ್ವಕರ್ಮ ಯಜ್ಞಮಹೋತ್ಸವ’ ಮಲ್ಲೇಶ್ವರದಲ್ಲಿ ಭಾನುವಾರ ನಡೆಸಿತು.</p>.<p>ಮಹೋತ್ಸವದಲ್ಲಿ ಧ್ವಜಾರೋಹಣ, ಗಣಪತಿ ಪೂಜೆ, ಪುಣ್ಯಹವಾಚನ, ವಿಶ್ವಕರ್ಮ ಪೂಜೆ, ಯಜ್ಞ ಪೂರ್ಣಾಹುತಿ ಆಚರಣೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.</p>.<p>ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ಉತ್ತರ ಕರ್ನಾಟಕದಲ್ಲಿ ಬರಗಾಲ ತಲೆದೋರಿರುವ ಕಾರಣ ವಿಶ್ವಕರ್ಮ ಸಮುದಾಯವು ಪ್ರತಿವರ್ಷ ನಡೆಸುತ್ತಿದ್ದ ‘ರಾಜ್ಯ ಮಟ್ಟದ ಸಮಾವೇಶ’ವನ್ನು ಈ ಬಾರಿ ನಡೆಸಿಲ್ಲ.</p>.<p>ಅದರ ಬದಲಾಗಿ ಸರಳ ಯಜ್ಞಾಚರಣೆ ಮಾಡಿ ‘ಪ್ರವಾಹ ಮತ್ತು ಬರಗಾಲದಿಂದ ಸಂಕಷ್ಟಕ್ಕೆ ಇಡಾದ ಜನರ ಸ್ಥಿತಿ ಸುಧಾರಿಸಲಿ’ ಎಂದು ಸಮುದಾಯದ ಜನರು ಪ್ರಾರ್ಥಿಸಿದರು.</p>.<p>ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ,‘ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರ ಸಂಖ್ಯೆ 40 ಲಕ್ಷದಷ್ಟಿದೆ. ವಾಸ್ತುಶಿಲ್ಪಕ್ಕೆ ಈ ಸಮುದಾಯದವರ ಕೊಡುಗೆ ಹೆಚ್ಚಿದೆ’ ಎಂದರು.</p>.<p>‘ಸಮಾವೇಶಕ್ಕೆ ದುಬಾರಿ ವೆಚ್ಚ ಮಾಡುವ ಬದಲಿ ಲೋಕ ಕಲ್ಯಾಣಾರ್ಥ ಸರಳವಾಗಿ ಯಜ್ಞ ಆಯೋಜಿಸಿರುವುದು ಸಮಯೋಚಿತ’ ಎಂದು ಶ್ಲಾಘಿಸಿದರು.</p>.<p>ನಾವು ಸಮುದಾಯಕ್ಕೆ ಸೀಮಿತವಲ್ಲ. ನಾಡಿನ ಜನರ ಕಷ್ಟದಲ್ಲಿ ನಾವೂ ಭಾಗಿದಾರರು ಎಂಬ ಸಂದೇಶ, ಈ ಯಜ್ಞ ಮಹೋತ್ಸವದಿಂದ ನೀಡಿದ್ದೇವೆ.</p>.<p><em><strong>–ಕೆ.ಪಿ.ನಂಜುಂಡಿ, ವಿಧಾನ ಪರಿಷತ್ ಸದಸ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾವು ‘ವಿಶ್ವಕರ್ಮ ಯಜ್ಞಮಹೋತ್ಸವ’ ಮಲ್ಲೇಶ್ವರದಲ್ಲಿ ಭಾನುವಾರ ನಡೆಸಿತು.</p>.<p>ಮಹೋತ್ಸವದಲ್ಲಿ ಧ್ವಜಾರೋಹಣ, ಗಣಪತಿ ಪೂಜೆ, ಪುಣ್ಯಹವಾಚನ, ವಿಶ್ವಕರ್ಮ ಪೂಜೆ, ಯಜ್ಞ ಪೂರ್ಣಾಹುತಿ ಆಚರಣೆಗಳು ಶ್ರದ್ಧಾಭಕ್ತಿಯಿಂದ ಜರುಗಿದವು.</p>.<p>ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಜಲಪ್ರಳಯ ಹಾಗೂ ಉತ್ತರ ಕರ್ನಾಟಕದಲ್ಲಿ ಬರಗಾಲ ತಲೆದೋರಿರುವ ಕಾರಣ ವಿಶ್ವಕರ್ಮ ಸಮುದಾಯವು ಪ್ರತಿವರ್ಷ ನಡೆಸುತ್ತಿದ್ದ ‘ರಾಜ್ಯ ಮಟ್ಟದ ಸಮಾವೇಶ’ವನ್ನು ಈ ಬಾರಿ ನಡೆಸಿಲ್ಲ.</p>.<p>ಅದರ ಬದಲಾಗಿ ಸರಳ ಯಜ್ಞಾಚರಣೆ ಮಾಡಿ ‘ಪ್ರವಾಹ ಮತ್ತು ಬರಗಾಲದಿಂದ ಸಂಕಷ್ಟಕ್ಕೆ ಇಡಾದ ಜನರ ಸ್ಥಿತಿ ಸುಧಾರಿಸಲಿ’ ಎಂದು ಸಮುದಾಯದ ಜನರು ಪ್ರಾರ್ಥಿಸಿದರು.</p>.<p>ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ,‘ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರ ಸಂಖ್ಯೆ 40 ಲಕ್ಷದಷ್ಟಿದೆ. ವಾಸ್ತುಶಿಲ್ಪಕ್ಕೆ ಈ ಸಮುದಾಯದವರ ಕೊಡುಗೆ ಹೆಚ್ಚಿದೆ’ ಎಂದರು.</p>.<p>‘ಸಮಾವೇಶಕ್ಕೆ ದುಬಾರಿ ವೆಚ್ಚ ಮಾಡುವ ಬದಲಿ ಲೋಕ ಕಲ್ಯಾಣಾರ್ಥ ಸರಳವಾಗಿ ಯಜ್ಞ ಆಯೋಜಿಸಿರುವುದು ಸಮಯೋಚಿತ’ ಎಂದು ಶ್ಲಾಘಿಸಿದರು.</p>.<p>ನಾವು ಸಮುದಾಯಕ್ಕೆ ಸೀಮಿತವಲ್ಲ. ನಾಡಿನ ಜನರ ಕಷ್ಟದಲ್ಲಿ ನಾವೂ ಭಾಗಿದಾರರು ಎಂಬ ಸಂದೇಶ, ಈ ಯಜ್ಞ ಮಹೋತ್ಸವದಿಂದ ನೀಡಿದ್ದೇವೆ.</p>.<p><em><strong>–ಕೆ.ಪಿ.ನಂಜುಂಡಿ, ವಿಧಾನ ಪರಿಷತ್ ಸದಸ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>