<p><strong>ಬೆಂಗಳೂರು</strong>: ‘ಪರಿಷ್ಕರಣೆಯಾಗಿರುವ ಪಠ್ಯದಲ್ಲಿ ಬಸವಣ್ಣ ಅವರ ವಿಚಾರಗಳನ್ನು ಕೈಬಿಟ್ಟಿಲ್ಲ. ಅದು ಪೂರ್ಣ ಪ್ರಮಾಣದಲ್ಲಿಯೇ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.</p>.<p>ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಪರಿಷ್ಕರಣೆಗೊಂಡು ಪಠ್ಯಪುಸ್ತಕಗಳು ಮುದ್ರಣಗೊಂಡ ಬಳಿಕ ಮುಗಿಯಿತು. ಮತ್ತೊಮ್ಮೆ ಪರಿಷ್ಕರಣೆ ಸಮಿತಿಯನ್ನು ನೇಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ<br />ಎಂದರು.</p>.<p>ಮಕ್ಕಳು ಯಾವುದನ್ನು ಓದುತ್ತಾರೋ ಅದು ಪಠ್ಯದಲ್ಲಿ ಇರಬೇಕೇ ಹೊರತು ಸಿದ್ಧಾಂತಗಳನ್ನು ಪಠ್ಯದಲ್ಲಿ ಅಳವಡಿಸುವುದು ತಪ್ಪು. ಹೆಡಗೇವಾರ್ ಭಾಷಣದಲ್ಲಿ ಸಿದ್ಧಾಂತವಿಲ್ಲ. ಒಬ್ಬ ಮಗು ಯಾವುದನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂಬ ಸಂದೇಶವಿದೆ. ದೇಶದ ಅತಿ ದೊಡ್ಡ ಸಂಘಟನೆಯನ್ನು ಕಟ್ಟಿದವರು. ಈ ಪಠ್ಯದಲ್ಲಿರುವ ಅಂಶಗಳು ಕಲಿಕೆಗೆ ಯೋಗ್ಯವಾಗಿದೆ. ಅದರಲ್ಲಿರುವ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ<br />ವಿದ್ದರೆ ಹೇಳಿ, ಚರ್ಚೆ ಮಾಡೋಣ ಎಂದರು.</p>.<p>‘ನಾಡಗೀತೆ ಬಗ್ಗೆ ಅವಹೇಳನಕಾರಿಯಾಗಿ ಬರೆದ ಸಂದೇಶವನ್ನು<br />ರೋಹಿತ್ ಚಕ್ರತೀರ್ಥ ಹಂಚಿಕೊಂಡಿದ್ದಾರೆ. ಅಂದಿನ ಸರ್ಕಾರ ಅವರ ಮೇಲೆ ಪ್ರಕರಣ ದಾಖಲಿಸಿ, ಬಿ ರಿಪೋರ್ಟ್ ಕೂಡಾ ಹಾಕಿತ್ತು. ಅದು ತಾವು ಬರೆದದ್ದು ಅಲ್ಲ ಎಂದು ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕೆಲವರು ಆ ವಿಷಯವನ್ನು ಕೆದಕುತ್ತಿದ್ದಾರೆ. ಆದಿಚುಂಚನಗಿರಿಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಎಲ್ಲ ವಿಷಯವನ್ನು ತಿಳಿಸಿದ್ದೇನೆ’ ಎಂದರು.</p>.<p>‘ಮೈಸೂರು ಮಹಾರಾಜರ<br />ಬಗ್ಗೆ ಇದ್ದ ಪಠ್ಯವನ್ನು ಹಿಂದಿನ ಸಮಿತಿ ಏಕೆ ಕೈಬಿಟ್ಟಿತು. ಮಹಾ<br />ರಾಜರು ಬಲಪಂಥೀಯ ಎಂದು ತೀರ್ಮಾನಿಸಿ ಕೈಬಿಟ್ಟರಾ? ರಾಜ್ಯಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಮಹಾರಾಜರ<br />ಬಗ್ಗೆ ಓದಬಾರದು ತಿಳಿದುಕೊಳ್ಳ<br />ಬಾರದು ಎಂಬುದು<br />ಅವರ ಉದ್ದೇಶವಾ’ ಎಂದೂ<br />ಸಚಿವ ನಾಗೇಶ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಪರಿಷ್ಕರಣೆಯಾಗಿರುವ ಪಠ್ಯದಲ್ಲಿ ಬಸವಣ್ಣ ಅವರ ವಿಚಾರಗಳನ್ನು ಕೈಬಿಟ್ಟಿಲ್ಲ. ಅದು ಪೂರ್ಣ ಪ್ರಮಾಣದಲ್ಲಿಯೇ ಇದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.</p>.<p>ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಪರಿಷ್ಕರಣೆಗೊಂಡು ಪಠ್ಯಪುಸ್ತಕಗಳು ಮುದ್ರಣಗೊಂಡ ಬಳಿಕ ಮುಗಿಯಿತು. ಮತ್ತೊಮ್ಮೆ ಪರಿಷ್ಕರಣೆ ಸಮಿತಿಯನ್ನು ನೇಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ<br />ಎಂದರು.</p>.<p>ಮಕ್ಕಳು ಯಾವುದನ್ನು ಓದುತ್ತಾರೋ ಅದು ಪಠ್ಯದಲ್ಲಿ ಇರಬೇಕೇ ಹೊರತು ಸಿದ್ಧಾಂತಗಳನ್ನು ಪಠ್ಯದಲ್ಲಿ ಅಳವಡಿಸುವುದು ತಪ್ಪು. ಹೆಡಗೇವಾರ್ ಭಾಷಣದಲ್ಲಿ ಸಿದ್ಧಾಂತವಿಲ್ಲ. ಒಬ್ಬ ಮಗು ಯಾವುದನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು ಎಂಬ ಸಂದೇಶವಿದೆ. ದೇಶದ ಅತಿ ದೊಡ್ಡ ಸಂಘಟನೆಯನ್ನು ಕಟ್ಟಿದವರು. ಈ ಪಠ್ಯದಲ್ಲಿರುವ ಅಂಶಗಳು ಕಲಿಕೆಗೆ ಯೋಗ್ಯವಾಗಿದೆ. ಅದರಲ್ಲಿರುವ ಅಂಶಗಳ ಬಗ್ಗೆ ಭಿನ್ನಾಭಿಪ್ರಾಯ<br />ವಿದ್ದರೆ ಹೇಳಿ, ಚರ್ಚೆ ಮಾಡೋಣ ಎಂದರು.</p>.<p>‘ನಾಡಗೀತೆ ಬಗ್ಗೆ ಅವಹೇಳನಕಾರಿಯಾಗಿ ಬರೆದ ಸಂದೇಶವನ್ನು<br />ರೋಹಿತ್ ಚಕ್ರತೀರ್ಥ ಹಂಚಿಕೊಂಡಿದ್ದಾರೆ. ಅಂದಿನ ಸರ್ಕಾರ ಅವರ ಮೇಲೆ ಪ್ರಕರಣ ದಾಖಲಿಸಿ, ಬಿ ರಿಪೋರ್ಟ್ ಕೂಡಾ ಹಾಕಿತ್ತು. ಅದು ತಾವು ಬರೆದದ್ದು ಅಲ್ಲ ಎಂದು ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕೆಲವರು ಆ ವಿಷಯವನ್ನು ಕೆದಕುತ್ತಿದ್ದಾರೆ. ಆದಿಚುಂಚನಗಿರಿಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಎಲ್ಲ ವಿಷಯವನ್ನು ತಿಳಿಸಿದ್ದೇನೆ’ ಎಂದರು.</p>.<p>‘ಮೈಸೂರು ಮಹಾರಾಜರ<br />ಬಗ್ಗೆ ಇದ್ದ ಪಠ್ಯವನ್ನು ಹಿಂದಿನ ಸಮಿತಿ ಏಕೆ ಕೈಬಿಟ್ಟಿತು. ಮಹಾ<br />ರಾಜರು ಬಲಪಂಥೀಯ ಎಂದು ತೀರ್ಮಾನಿಸಿ ಕೈಬಿಟ್ಟರಾ? ರಾಜ್ಯಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಮಹಾರಾಜರ<br />ಬಗ್ಗೆ ಓದಬಾರದು ತಿಳಿದುಕೊಳ್ಳ<br />ಬಾರದು ಎಂಬುದು<br />ಅವರ ಉದ್ದೇಶವಾ’ ಎಂದೂ<br />ಸಚಿವ ನಾಗೇಶ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>