ಕುಂದಾಪುರ, ಹೆಬ್ರಿ, ಬ್ರಹ್ಮಾವರ ಹಾಗೂ ಬೈಂದೂರು ತಾಲ್ಲೂಕುಗಳ ಹಾಗೂ ಮಲೆನಾಡಿಗೆ ಹೊಂದಿಕೊಂಡಿರುವ ಭಾಗಗಳಲ್ಲಿ ಹೆಚ್ಚು ಮಾವಿನ ಮರಗಳಿದ್ದು ಅಲ್ಲಿಂದಲೇ ಜಿಲ್ಲೆಯಾದ್ಯಂತ ಮಿಡಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತವೆ. ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ನಿಟ್ಟೂರು, ಸಂಪೇಕಟ್ಟೆ, ನಗರ, ಹೊಸನಗರ, ಸಾಗರ ಮುಂತಾದ ಪ್ರದೇಶಗಳಲ್ಲಿನ ಪರಿಮಳ ಭರಿತ ಅಪ್ಪೇ ಮಿಡಿಗಳು ಕರಾವಳಿಗೆ ಪೂರೈಕೆಯಾಗುತ್ತಿದ್ದು ಈ ಭಾಗದಲ್ಲಿ ಭಾರಿ ಬೇಡಿಕೆ ಇದೆ.