<p><strong>ಬೆಂಗಳೂರು:</strong> `ರಾಜ್ಯದಲ್ಲಿ ಅದಿರು ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಕೈಗಾರಿಕಾ ಸ್ನೇಹಿಯಾಗಬೇಕು. ಮೂಲ ಸೌಕರ್ಯ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ತೋರಬೇಕು~ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟರು. <br /> <br /> ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಓರ್ ಟೀಮ್ ಎಕ್ಸಿಮ್ ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ `ಕರ್ನಾಟಕದಲ್ಲಿ ಗಣಿಗಾರಿಕೆ ಹಾಗೂ ಉಕ್ಕು ಉತ್ಪಾದನೆಯ ಸಾಮರ್ಥ್ಯ~ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ಉದ್ಯಮಿಗಳು ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.<br /> <br /> ಜೆಎಸ್ಡಬ್ಲ್ಯೂ ಉಕ್ಕು ಸಂಸ್ಥೆಯ ನಿರ್ದೇಶಕ ಡಾ.ವಿನೋದ್ ನೋವಲ್ ಮಾತನಾಡಿ, `ದೇಶದ ಉಕ್ಕು ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 25ರಷ್ಟು ಇದೆ. ರಾಜ್ಯದಲ್ಲಿ ಉದ್ಯಮ ಅಭಿವೃದ್ಧಿ ವಿಪುಲ ಅವಕಾಶಗಳಿದ್ದು, ಉದ್ಯಮಿಗಳನ್ನು ಉತ್ತೇಜಿಸಿ ಮೂಲ ಸೌಕರ್ಯ ಒದಗಿಸಲು ಸರ್ಕಾರ ಒತ್ತು ನೀಡಬೇಕು~ ಎಂದು ಆಗ್ರಹಿಸಿದರು. <br /> <br /> `ಉಕ್ಕು ಉದ್ಯಮದ ಅಭಿವೃದ್ಧಿಗೆ ಹಣಕಾಸು ಹಾಗೂ ತಂತ್ರಜ್ಞಾನದ ಕೊರತೆ ಇಲ್ಲ. ಕಾರ್ಮಿಕರ ಸಾಮರ್ಥ್ಯವೃದ್ಧಿ ಆಗಬೇಕು. ಉಕ್ಕು ಉದ್ಯಮಕ್ಕೆ ಅಧಿಕ ಪ್ರಮಾಣದ ನೀರಿನ ಅಗತ್ಯ ಇದ್ದು, ಸರ್ಕಾರ ನೀರು ಪೂರೈಕೆಗೆ ಯೋಜನೆಗಳನ್ನು ರೂಪಿಸಬೇಕು. ಈ ಕ್ಷೇತ್ರದಲ್ಲಿ ದುಡಿಯುವ ಯುವಜನರಿಗೆ ಬಹು ಕೌಶಲ ತರಬೇತಿ ನೀಡಬೇಕಿದೆ. ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಿದೆ. ಅದರಿನ ಮೌಲ್ಯವರ್ಧನೆ ಆಗಬೇಕು~ ಎಂದರು. <br /> <br /> ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಕೆ. ಶಿವ ಷಣ್ಮುಗಂ ಮಾತನಾಡಿ, `ರಾಜ್ಯ ಉಕ್ಕಿನ ಲಭ್ಯತೆಯಿಂದ ಪ್ರಸಿದ್ಧವಾದುದು. ಈ ಕಾರಣಕ್ಕಾಗಿಯೇ 2010 ಹಾಗೂ 2012ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉಕ್ಕು ಉದ್ಯಮದ ದಿಗ್ಗಜರು ರಾಜ್ಯದಲ್ಲಿ ಘಟಕಗಳನ್ನು ತೆರೆಯಲು ಸರ್ಕಾರದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದರು.<br /> <br /> ಭೂ ಸ್ವಾಧೀನದ ಸಮಸ್ಯೆಯಿಂದಾಗಿ ಪೊಸ್ಕೊ ಸಂಸ್ಥೆಯ ಘಟಕ ಕಾರ್ಯಾರಂಭ ಮಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉಕ್ಕು ಉದ್ಯಮಕ್ಕೆ ಅಗತ್ಯ ಇರುವ ಭೂಮಿಗಳ ಒದಗಿಸುವಿಕೆ ಹಾಗೂ ಮೂಲಸೌಕರ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು. <br /> <br /> ಓರ್ ಟೀಮ್ ಎಕ್ಸಿಮ್ ಸಂಸ್ಥೆಯ ನಿರ್ದೇಶಕ ಸಚಿನ್ ಸೆಹಗಲ್ ಮಾತನಾಡಿ, `ರಾಜ್ಯದಲ್ಲಿ ದೊರೆಯುವ ಅದಿರಿನಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುತ್ತಿರುವುದರಿಂದ ಅದಿರಿನ ಮೌಲ್ಯವರ್ಧನೆ ಅಗತ್ಯ. 2 ವರ್ಷಗಳ ಕಾಲ ಗಣಿಗಳನ್ನು ಚಾಲನೆಯಲ್ಲಿ ಇಡದ ಕಾರಣ ಅದಿರಿನ ಗುಣಮಟ್ಟ ಕಡಿಮೆಯಾಗಿದೆ. ಗಣಿಗಳನ್ನು ಮುಚ್ಚಿರುವ ಕಾರಣ ಉಕ್ಕು ಉದ್ದಿಮೆಗೆ ಕಚ್ಚಾ ಸಾಮಗ್ರಿಯ ಕೊರತೆ ಉಂಟಾಗಿದೆ.<br /> <br /> ಇಂತಹ ಸಂದರ್ಭದಲ್ಲಿ ಅದಿರಿನ ಮೌಲ್ಯವರ್ಧನೆಗೆ ಅವಕಾಶ ಹೆಚ್ಚಾಗಿದೆ. ಅಲಭ್ಯವಾಗುತ್ತಿರುವ ಉಂಡೆ ಕಬ್ಬಿಣದ ಅದಿರಿನ ಬದಲಾಗಿ ಕಬ್ಬಿಣದ ತುಣುಕು (ಪೆಲೆಟ್)ಗಳನ್ನು ಬಳಸುವುದರ ಮೂಲಕ ಮೆದು ಕಬ್ಬಿಣದ ಅದಿರಿನ ಉತ್ಪಾದನೆಯನ್ನೂ ಹೆಚ್ಚಿಸಬಹುದು~ ಎಂದರು. <br /> <br /> ಕೇಂದ್ರ ಉಕ್ಕು ಇಲಾಖೆಯ ಜಂಟಿ ಮುಖ್ಯ ಆರ್ಥಿಕ ತಜ್ಞೆ ಸುಸ್ಮಿತಾ ದಾಸ್ಗುಪ್ತ, `ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳಲ್ಲಿ ಉಕ್ಕು ನೀತಿ ಜಾರಿಯಲ್ಲಿತ್ತು. ಈಗ ಉಳಿದ ರಾಷ್ಟ್ರಗಳು ಉಕ್ಕು ನೀತಿ ಜಾರಿಗೆ ತರಲು ಆಸಕ್ತಿ ವಹಿಸಿವೆ. ಉಕ್ಕು ಕ್ಷೇತ್ರದ ಅಭಿವೃದ್ಧಿಗೆ ಮೂಲ ಸೌಕರ್ಯ ಒದಗಿಸುವುದು ಅಗತ್ಯ ಹಾಗೂ ಕಾರ್ಮಿಕರಿಗೆ ಕೌಶಲ ತರಬೇತಿ ನೀಡಬೇಕಿದೆ~ ಎಂದರು. <br /> <br /> ಕೈಗಾರಿಕಾ ಅಭಿವೃದ್ಧಿ ಆಯುಕ್ತಎಂ. ಮಹೇಶ್ವರ ರಾವ್, `ಕೈಗಾರಿಕೆಗಳಿಗೆ ಅಗತ್ಯ ಇರುವ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಕೈಗಾರಿಕೆಗಳಿಗೆ ಭೂಮಿ ನೀಡಲು ಒಂದು ಲಕ್ಷ ಎಕರೆ ಗುರುತಿಸಲಾಗಿದ್ದು, 49 ಸಾವಿರ ಎಕರೆ ಭೂಮಿ ನೋಟಿಫೈ ಮಾಡಲಾಗಿದೆ~ ಎಂದರು.<br /> <br /> ಗಣಿ ಇಲಾಖೆ ನಿರ್ದೇಶಕ ಎಚ್.ಆರ್.ಶ್ರೀನಿವಾಸ್, ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ಕರ್ನಾಟಕ - ಗೋವಾದ ಉಸ್ತುವಾರಿ ನಿರ್ದೇಶಕ ಆರ್.ಎನ್. ಪಾತ್ರ ಉಪಸ್ಥಿತರಿದ್ದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ರಾಜ್ಯದಲ್ಲಿ ಅದಿರು ಉತ್ಪಾದನೆಯ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಕೈಗಾರಿಕಾ ಸ್ನೇಹಿಯಾಗಬೇಕು. ಮೂಲ ಸೌಕರ್ಯ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿ ತೋರಬೇಕು~ ಎಂದು ಉದ್ಯಮಿಗಳು ಅಭಿಪ್ರಾಯಪಟ್ಟರು. <br /> <br /> ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಓರ್ ಟೀಮ್ ಎಕ್ಸಿಮ್ ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ `ಕರ್ನಾಟಕದಲ್ಲಿ ಗಣಿಗಾರಿಕೆ ಹಾಗೂ ಉಕ್ಕು ಉತ್ಪಾದನೆಯ ಸಾಮರ್ಥ್ಯ~ ಕುರಿತ ಅಂತರರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ ಉದ್ಯಮಿಗಳು ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.<br /> <br /> ಜೆಎಸ್ಡಬ್ಲ್ಯೂ ಉಕ್ಕು ಸಂಸ್ಥೆಯ ನಿರ್ದೇಶಕ ಡಾ.ವಿನೋದ್ ನೋವಲ್ ಮಾತನಾಡಿ, `ದೇಶದ ಉಕ್ಕು ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 25ರಷ್ಟು ಇದೆ. ರಾಜ್ಯದಲ್ಲಿ ಉದ್ಯಮ ಅಭಿವೃದ್ಧಿ ವಿಪುಲ ಅವಕಾಶಗಳಿದ್ದು, ಉದ್ಯಮಿಗಳನ್ನು ಉತ್ತೇಜಿಸಿ ಮೂಲ ಸೌಕರ್ಯ ಒದಗಿಸಲು ಸರ್ಕಾರ ಒತ್ತು ನೀಡಬೇಕು~ ಎಂದು ಆಗ್ರಹಿಸಿದರು. <br /> <br /> `ಉಕ್ಕು ಉದ್ಯಮದ ಅಭಿವೃದ್ಧಿಗೆ ಹಣಕಾಸು ಹಾಗೂ ತಂತ್ರಜ್ಞಾನದ ಕೊರತೆ ಇಲ್ಲ. ಕಾರ್ಮಿಕರ ಸಾಮರ್ಥ್ಯವೃದ್ಧಿ ಆಗಬೇಕು. ಉಕ್ಕು ಉದ್ಯಮಕ್ಕೆ ಅಧಿಕ ಪ್ರಮಾಣದ ನೀರಿನ ಅಗತ್ಯ ಇದ್ದು, ಸರ್ಕಾರ ನೀರು ಪೂರೈಕೆಗೆ ಯೋಜನೆಗಳನ್ನು ರೂಪಿಸಬೇಕು. ಈ ಕ್ಷೇತ್ರದಲ್ಲಿ ದುಡಿಯುವ ಯುವಜನರಿಗೆ ಬಹು ಕೌಶಲ ತರಬೇತಿ ನೀಡಬೇಕಿದೆ. ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕಿದೆ. ಅದರಿನ ಮೌಲ್ಯವರ್ಧನೆ ಆಗಬೇಕು~ ಎಂದರು. <br /> <br /> ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಕೆ. ಶಿವ ಷಣ್ಮುಗಂ ಮಾತನಾಡಿ, `ರಾಜ್ಯ ಉಕ್ಕಿನ ಲಭ್ಯತೆಯಿಂದ ಪ್ರಸಿದ್ಧವಾದುದು. ಈ ಕಾರಣಕ್ಕಾಗಿಯೇ 2010 ಹಾಗೂ 2012ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಉಕ್ಕು ಉದ್ಯಮದ ದಿಗ್ಗಜರು ರಾಜ್ಯದಲ್ಲಿ ಘಟಕಗಳನ್ನು ತೆರೆಯಲು ಸರ್ಕಾರದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದರು.<br /> <br /> ಭೂ ಸ್ವಾಧೀನದ ಸಮಸ್ಯೆಯಿಂದಾಗಿ ಪೊಸ್ಕೊ ಸಂಸ್ಥೆಯ ಘಟಕ ಕಾರ್ಯಾರಂಭ ಮಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉಕ್ಕು ಉದ್ಯಮಕ್ಕೆ ಅಗತ್ಯ ಇರುವ ಭೂಮಿಗಳ ಒದಗಿಸುವಿಕೆ ಹಾಗೂ ಮೂಲಸೌಕರ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು. <br /> <br /> ಓರ್ ಟೀಮ್ ಎಕ್ಸಿಮ್ ಸಂಸ್ಥೆಯ ನಿರ್ದೇಶಕ ಸಚಿನ್ ಸೆಹಗಲ್ ಮಾತನಾಡಿ, `ರಾಜ್ಯದಲ್ಲಿ ದೊರೆಯುವ ಅದಿರಿನಲ್ಲಿ ಕಬ್ಬಿಣದ ಅಂಶ ಕಡಿಮೆಯಾಗುತ್ತಿರುವುದರಿಂದ ಅದಿರಿನ ಮೌಲ್ಯವರ್ಧನೆ ಅಗತ್ಯ. 2 ವರ್ಷಗಳ ಕಾಲ ಗಣಿಗಳನ್ನು ಚಾಲನೆಯಲ್ಲಿ ಇಡದ ಕಾರಣ ಅದಿರಿನ ಗುಣಮಟ್ಟ ಕಡಿಮೆಯಾಗಿದೆ. ಗಣಿಗಳನ್ನು ಮುಚ್ಚಿರುವ ಕಾರಣ ಉಕ್ಕು ಉದ್ದಿಮೆಗೆ ಕಚ್ಚಾ ಸಾಮಗ್ರಿಯ ಕೊರತೆ ಉಂಟಾಗಿದೆ.<br /> <br /> ಇಂತಹ ಸಂದರ್ಭದಲ್ಲಿ ಅದಿರಿನ ಮೌಲ್ಯವರ್ಧನೆಗೆ ಅವಕಾಶ ಹೆಚ್ಚಾಗಿದೆ. ಅಲಭ್ಯವಾಗುತ್ತಿರುವ ಉಂಡೆ ಕಬ್ಬಿಣದ ಅದಿರಿನ ಬದಲಾಗಿ ಕಬ್ಬಿಣದ ತುಣುಕು (ಪೆಲೆಟ್)ಗಳನ್ನು ಬಳಸುವುದರ ಮೂಲಕ ಮೆದು ಕಬ್ಬಿಣದ ಅದಿರಿನ ಉತ್ಪಾದನೆಯನ್ನೂ ಹೆಚ್ಚಿಸಬಹುದು~ ಎಂದರು. <br /> <br /> ಕೇಂದ್ರ ಉಕ್ಕು ಇಲಾಖೆಯ ಜಂಟಿ ಮುಖ್ಯ ಆರ್ಥಿಕ ತಜ್ಞೆ ಸುಸ್ಮಿತಾ ದಾಸ್ಗುಪ್ತ, `ಭಾರತ ಸೇರಿದಂತೆ ಕೆಲವೇ ರಾಷ್ಟ್ರಗಳಲ್ಲಿ ಉಕ್ಕು ನೀತಿ ಜಾರಿಯಲ್ಲಿತ್ತು. ಈಗ ಉಳಿದ ರಾಷ್ಟ್ರಗಳು ಉಕ್ಕು ನೀತಿ ಜಾರಿಗೆ ತರಲು ಆಸಕ್ತಿ ವಹಿಸಿವೆ. ಉಕ್ಕು ಕ್ಷೇತ್ರದ ಅಭಿವೃದ್ಧಿಗೆ ಮೂಲ ಸೌಕರ್ಯ ಒದಗಿಸುವುದು ಅಗತ್ಯ ಹಾಗೂ ಕಾರ್ಮಿಕರಿಗೆ ಕೌಶಲ ತರಬೇತಿ ನೀಡಬೇಕಿದೆ~ ಎಂದರು. <br /> <br /> ಕೈಗಾರಿಕಾ ಅಭಿವೃದ್ಧಿ ಆಯುಕ್ತಎಂ. ಮಹೇಶ್ವರ ರಾವ್, `ಕೈಗಾರಿಕೆಗಳಿಗೆ ಅಗತ್ಯ ಇರುವ ಮೂಲ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಕೈಗಾರಿಕೆಗಳಿಗೆ ಭೂಮಿ ನೀಡಲು ಒಂದು ಲಕ್ಷ ಎಕರೆ ಗುರುತಿಸಲಾಗಿದ್ದು, 49 ಸಾವಿರ ಎಕರೆ ಭೂಮಿ ನೋಟಿಫೈ ಮಾಡಲಾಗಿದೆ~ ಎಂದರು.<br /> <br /> ಗಣಿ ಇಲಾಖೆ ನಿರ್ದೇಶಕ ಎಚ್.ಆರ್.ಶ್ರೀನಿವಾಸ್, ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದ ಕರ್ನಾಟಕ - ಗೋವಾದ ಉಸ್ತುವಾರಿ ನಿರ್ದೇಶಕ ಆರ್.ಎನ್. ಪಾತ್ರ ಉಪಸ್ಥಿತರಿದ್ದರು. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>