<p><strong>ಬಾಳೆಹೊನ್ನೂರು: </strong>ಪೊಲೀಸರು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದರೂ ಧಿಕ್ಕರಿಸಿ ಮುನ್ನುಗ್ಗಿದ ವಾಹನವನ್ನು ತಡೆದು ವಿಚಾರಿಸಿದಾಗ ಅದರಲ್ಲಿ ಆಂಧ್ರಪ್ರದೇಶದ ಆರು ಯುವತಿಯರು ಪತ್ತೆಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.<br /> <br /> ಇಲ್ಲಿನ ಭದ್ರಾ ಕಾಫಿ ಶಾಪ್ ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆಗೆ ಚಿಕ್ಕಮಗಳೂರು ಕಡೆಯಿಂದ ಬಾಳೆಹೊನ್ನೂರಿಗೆ ತೆರಳುತ್ತಿದ್ದ ಆಂಧ್ರಪ್ರದೇಶ ನೋಂದಣಿ ಹೊಂದಿದ ವಾಹನವನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದರು.<br /> <br /> ಅದನ್ನು ಲೆಕ್ಕಿಸದೆ ಚಾಲಕ ವಾಹನ ಮುಂದೆ ಚಲಾಯಿಸಿದ. ತಕ್ಷಣ ಹಿಂಬಾಲಿಸಿದ ಪೊಲೀಸರು ಭದ್ರಾ ಸೇತುವೆ ಸಮೀಪ ವಾಹನದ ಆಕ್ಸೆಲ್ ತುಂಡಾಗಿ ನಿಂತಿದ್ದು ಕಂಡರು. ವಾಹನ ಪರಿಶೀಲಿಸಿದಾಗ ಆಂಧ್ರಪ್ರದೇಶದ ಒಬ್ಬ ಯುವಕ ಮತ್ತು ಆರು ಯುವತಿಯರು ಪತ್ತೆಯಾಗಿದ್ದರು.<br /> <br /> ಪೊಲೀಸರು ಅವರನ್ನು ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದರು. ಯುವತಿಯರು ಕಳಸ ಸಮೀಪದ ರೆಸಾರ್ಟ್ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಆಯೋಜಿಸಿದ್ದ ಅರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು ಎನ್ನಲಾಗಿದೆ.<br /> <br /> ಇದಾದ ಕೆಲವೇ ಹೊತ್ತಿನಲ್ಲಿ ಅಡಳಿತ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವರ ಆಪ್ತ ಎಂದು ಪರಿಚಯಿಸಿಕೊಂಡ ಬಳ್ಳಾರಿಯ ಕೆ.ಆರ್. ವಿ.ಪ್ರಸಾದ್ ಎಂಬುವವರು ಠಾಣೆಯಲ್ಲಿ ಕಾಣಿಸಿಕೊಂಡರು.<br /> <br /> ಬಳ್ಳಾರಿಯ ಖಾಸಗಿ ಅಗ್ರೊ ಸಂಸ್ಥೆ ಉತ್ಪನ್ನಗಳ ಮಾರಾಟಗಾರರ ಸಭೆಯನ್ನು ಕಳಸ ಸಮೀಪದ ರೆಸಾರ್ಟ್ನಲ್ಲಿ ಅಯೋಜಿಸಿದ್ದು ಅಲ್ಲಿನ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹೈದರಾಬಾದ್ನಿಂದ ಯುವತಿಯರನ್ನು ಕರೆಸಲಾಗಿದೆ. <br /> <br /> ಬೇರಾವುದೆ ದುರುದ್ದೇಶ ಹೊಂದಿಲ್ಲ ಎಂದು ಅವರು ಸಮಜಾಯಿಷಿ ನೀಡಿದರು. ಕಾರ್ಯಕ್ರಮಕ್ಕಾಗಿ ಅಯೋಜಕರು ರೆಸಾರ್ಟ್ ಕಾದಿರಿಸಿದ ಬಗ್ಗೆ ಇಮೇಲ್ ಪ್ರತಿ ಪಡೆದ ಪೋಲಿಸರು ಯುವತಿಯರನ್ನು ಬಿಡುಗಡೆ ಮಾಡಿದರು. <br /> <br /> ಇದೇ ವೇಳೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಅಯೋಜಕರು ಈ ಬಗ್ಗೆ ಭಾನುವಾರ ಮಧ್ಯಾಹ್ನದವರೆಗೆ ಯಾವುದೆ ಪರವಾನಗಿ ಪಡೆದಿರಲಿಲ್ಲ ಎಂಬ ಅಂಶ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ವಾಹನ ಚಾಲಕನಿಗೆ ದಂಡ ವಿದಿಸುವುದಾಗಿ ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.<br /> <br /> ಮಲೆನಾಡು ಭಾಗದ ರೆಸಾರ್ಟ್, ಹೋಮ್ಸ್ಟೇಗಳಲ್ಲಿ ನಡೆಯುವ ಸಭೆಗಳಿಗೆ ಆಂಧ್ರ ಯುವತಿಯರು ಹಾಡು, ಕುಣಿತ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಳೆಹೊನ್ನೂರು: </strong>ಪೊಲೀಸರು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದರೂ ಧಿಕ್ಕರಿಸಿ ಮುನ್ನುಗ್ಗಿದ ವಾಹನವನ್ನು ತಡೆದು ವಿಚಾರಿಸಿದಾಗ ಅದರಲ್ಲಿ ಆಂಧ್ರಪ್ರದೇಶದ ಆರು ಯುವತಿಯರು ಪತ್ತೆಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.<br /> <br /> ಇಲ್ಲಿನ ಭದ್ರಾ ಕಾಫಿ ಶಾಪ್ ಸಮೀಪ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆಗೆ ಚಿಕ್ಕಮಗಳೂರು ಕಡೆಯಿಂದ ಬಾಳೆಹೊನ್ನೂರಿಗೆ ತೆರಳುತ್ತಿದ್ದ ಆಂಧ್ರಪ್ರದೇಶ ನೋಂದಣಿ ಹೊಂದಿದ ವಾಹನವನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದರು.<br /> <br /> ಅದನ್ನು ಲೆಕ್ಕಿಸದೆ ಚಾಲಕ ವಾಹನ ಮುಂದೆ ಚಲಾಯಿಸಿದ. ತಕ್ಷಣ ಹಿಂಬಾಲಿಸಿದ ಪೊಲೀಸರು ಭದ್ರಾ ಸೇತುವೆ ಸಮೀಪ ವಾಹನದ ಆಕ್ಸೆಲ್ ತುಂಡಾಗಿ ನಿಂತಿದ್ದು ಕಂಡರು. ವಾಹನ ಪರಿಶೀಲಿಸಿದಾಗ ಆಂಧ್ರಪ್ರದೇಶದ ಒಬ್ಬ ಯುವಕ ಮತ್ತು ಆರು ಯುವತಿಯರು ಪತ್ತೆಯಾಗಿದ್ದರು.<br /> <br /> ಪೊಲೀಸರು ಅವರನ್ನು ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದರು. ಯುವತಿಯರು ಕಳಸ ಸಮೀಪದ ರೆಸಾರ್ಟ್ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಆಯೋಜಿಸಿದ್ದ ಅರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು ಎನ್ನಲಾಗಿದೆ.<br /> <br /> ಇದಾದ ಕೆಲವೇ ಹೊತ್ತಿನಲ್ಲಿ ಅಡಳಿತ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವರ ಆಪ್ತ ಎಂದು ಪರಿಚಯಿಸಿಕೊಂಡ ಬಳ್ಳಾರಿಯ ಕೆ.ಆರ್. ವಿ.ಪ್ರಸಾದ್ ಎಂಬುವವರು ಠಾಣೆಯಲ್ಲಿ ಕಾಣಿಸಿಕೊಂಡರು.<br /> <br /> ಬಳ್ಳಾರಿಯ ಖಾಸಗಿ ಅಗ್ರೊ ಸಂಸ್ಥೆ ಉತ್ಪನ್ನಗಳ ಮಾರಾಟಗಾರರ ಸಭೆಯನ್ನು ಕಳಸ ಸಮೀಪದ ರೆಸಾರ್ಟ್ನಲ್ಲಿ ಅಯೋಜಿಸಿದ್ದು ಅಲ್ಲಿನ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹೈದರಾಬಾದ್ನಿಂದ ಯುವತಿಯರನ್ನು ಕರೆಸಲಾಗಿದೆ. <br /> <br /> ಬೇರಾವುದೆ ದುರುದ್ದೇಶ ಹೊಂದಿಲ್ಲ ಎಂದು ಅವರು ಸಮಜಾಯಿಷಿ ನೀಡಿದರು. ಕಾರ್ಯಕ್ರಮಕ್ಕಾಗಿ ಅಯೋಜಕರು ರೆಸಾರ್ಟ್ ಕಾದಿರಿಸಿದ ಬಗ್ಗೆ ಇಮೇಲ್ ಪ್ರತಿ ಪಡೆದ ಪೋಲಿಸರು ಯುವತಿಯರನ್ನು ಬಿಡುಗಡೆ ಮಾಡಿದರು. <br /> <br /> ಇದೇ ವೇಳೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಅಯೋಜಕರು ಈ ಬಗ್ಗೆ ಭಾನುವಾರ ಮಧ್ಯಾಹ್ನದವರೆಗೆ ಯಾವುದೆ ಪರವಾನಗಿ ಪಡೆದಿರಲಿಲ್ಲ ಎಂಬ ಅಂಶ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ವಾಹನ ಚಾಲಕನಿಗೆ ದಂಡ ವಿದಿಸುವುದಾಗಿ ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.<br /> <br /> ಮಲೆನಾಡು ಭಾಗದ ರೆಸಾರ್ಟ್, ಹೋಮ್ಸ್ಟೇಗಳಲ್ಲಿ ನಡೆಯುವ ಸಭೆಗಳಿಗೆ ಆಂಧ್ರ ಯುವತಿಯರು ಹಾಡು, ಕುಣಿತ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>