ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಭೂತ ಕಟ್ಟುವವನು ಕೊಡುವುದು ಪ್ರಸಾದ ಅಲ್ಲ. ದೈವ ಕೊಡುವುದು ಪ್ರಸಾದ. ಭೂತ ಕಟ್ಟುವ ವ್ಯಕ್ತಿ ನೆಪಮಾತ್ರ. ಆದರೆ, ಹಿಂದೂ ಧರ್ಮದ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರಭಾಕರ ಭಟ್ ಚುನಾವಣೆಯಲ್ಲಿ ಮತ ಸೆಳೆಯಲು ಭೂತಾರಾಧನೆಯನ್ನು ಅವಮಾನಿಸಿದ್ದಾರೆ' ಎಂದರು.