<p><strong>ಬೆಂಗಳೂರು: </strong>ರಾಜ್ಯದ 34.87 ಲಕ್ಷ ರೈತರಿಗೆ ಬರ ಪರಿಹಾರದ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಮಂಗಳವಾರ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.<br /> <br /> ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ₹ 1,540 ಕೋಟಿ ಬಿಡುಗಡೆ ಮಾಡಿದೆ. ಇದನ್ನು ಅರ್ಹ ರೈತರಿಗೆ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.<br /> <br /> <strong>ಸಭೆಯ ಇತರ ತೀರ್ಮಾನಗಳು:</strong><br /> *ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನವನ್ನು ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಂದು ಮಾರ್ಪಡಿಸಲು ಒಪ್ಪಿಗೆ<br /> *ಒಂಬತ್ತು ಸಹಕಾರಿ ನೂಲಿನ ಗಿರಣಿಗಳಿಗೆ ನೀಡಿರುವ ಸರ್ಕಾರಿ ಸಾಲವನ್ನು ಷೇರು ಬಂಡವಾಳವನ್ನಾಗಿ ಪರಿವರ್ತಿಸಲು ಒಪ್ಪಿಗೆ<br /> *ಕುಣಿಗಲ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಬಿ.ಆರ್. ಸುಶೀಲಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಲು ಸಮ್ಮತಿ. ಲಂಚ ಕೇಳಿದ್ದ ಇವರು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.<br /> *ರಾಜ್ಯದಲ್ಲಿ ಪಾರ್ಸಿ ಸಮುದಾಯವನ್ನು ‘ಅಲ್ಪಸಂಖ್ಯಾತ’ ಎಂದು ಗುರುತಿಸಲು ಒಪ್ಪಿಗೆ.<br /> *ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸಮ್ಮತಿ.<br /> *ಕೆಪಿಸಿಸಿ ಮಾಧ್ಯಮ ವಿಭಾಗ ಸಂಚಾಲಕ ದಿನೇಶ್ ಗೂಳಿಗೌಡ ಅವರನ್ನು ಗೃಹ ಸಚಿವರ ವಿಶೇಷಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ<br /> ಇತರ ಪ್ರಮುಖ ತೀರ್ಮಾನಗಳು<br /> *ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ತ್ವರಿತ ನೀರಾವರಿ ಯೋಜನೆ ಸಲುವಾಗಿ ಹೆಚ್ಚುವರಿಯಾಗಿ ₹400 ಕೋಟಿ ಅವಧಿ ಸಾಲವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಒಪ್ಪಿಗೆ.<br /> *ಎಚ್.ಡಿ.ಕೋಟೆಯ ತಾರಕ ಬಲದಂಡೆ ನಾಲೆಯನ್ನು ₹14.5 ಕೋಟಿ ವೆಚ್ಚದಲ್ಲಿ ಆಧುನೀಕರಣ<br /> *ಬಳ್ಳಾರಿ ಜಿಲ್ಲೆ, ಹಡಗಲಿ ತಾಲ್ಲೂಕಿನ ಕಾಲ್ವಿ ತಾಂಡಾ ಸಮೀಪ ನಿರ್ಮಿಸಲು ಉದ್ದೇಶಿಸಿರುವ ₹58 ಕೋಟಿ ವೆಚ್ಚದ ಏತನೀರಾವರಿ ಯೋಜನೆ<br /> <br /> <strong>ಬಹುಮಹಡಿ ಕಟ್ಟಡಕ್ಕಿಲ್ಲ ಧಕ್ಕೆ:</strong> ವಿಕಾಸಸೌಧದ ಪಕ್ಕದಲ್ಲೇ ಇರುವ ಬಹುಮಹಡಿ ಕಟ್ಟಡವನ್ನು ಕೆಡವಿ, ಆ ಜಾಗದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಹೊಸ ಕಟ್ಟಡ ನಿರ್ಮಿಸಬೇಕು ಎಂಬ ಪ್ರಸ್ತಾವನೆಯನ್ನು ಮಂತ್ರಿ ಪರಿಷತ್ ಸಭೆ ತಿರಸ್ಕರಿಸಿದೆ ಎಂದು ಗೊತ್ತಾಗಿದೆ.<br /> <br /> ಲೋಕಾಯುಕ್ತ ಕಚೇರಿ, ಸರ್ಕಾರದ ವಿವಿಧ ಇಲಾಖೆಗಳ ಕಚೇರಿ ಸೇರಿದಂತೆ ಹತ್ತು ಹಲವು ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡವನ್ನು ಕೆಡವಿ, ಅಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ಹಿಂದೆ ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸಿನ ಬಗ್ಗೆ ಪರಿಶೀಲನೆ ನಡೆಸಿದ ತಾಂತ್ರಿಕ ಸಿಬ್ಬಂದಿ ಬಹುಮಹಡಿ ಕಟ್ಟಡ ಇನ್ನೂ 30ರಿಂದ 40 ವರ್ಷ ಬಾಳುತ್ತದೆ ಎಂಬ ವರದಿ ನೀಡಿದ್ದಾರೆ. ಹಾಗಾಗಿ, ಕಟ್ಟಡ ಕೆಡವುವ ಶಿಫಾರಸು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> *<br /> <strong>₹ 593 ಕೋಟಿ ವೆಚ್ಚದ ಪೂರಿಗಾಲಿ ಯೋಜನೆಗೆ ಅಸ್ತು<br /> ಬೆಂಗಳೂರು: </strong>ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ 25,327 ಸಾವಿರ ಎಕರೆ ಕೃಷಿ ಭೂಮಿಗೆ ಹನಿ ಮತ್ತು ತುಂತುರು ನೀರಾವರಿ ಸೌಲಭ್ಯ ಕಲ್ಪಿಸುವ ₹ 593 ಕೋಟಿ ವೆಚ್ಚದ ಪೂರಿಗಾಲಿ ಸಮಗ್ರ ನೀರಾವರಿ ಯೋಜನೆಗೆ ಮಂತ್ರಿ ಪರಿಷತ್ ಸಭೆ ಅನುಮೋದನೆ ನೀಡಿದೆ.</p>.<p>ಮುಡುಕುತೊರೆ ಸಮೀಪದ ಕಾವೇರಿ ನದಿಯಿಂದ ನೀರನ್ನು ಪಂಪ್ ಮಾಡಿ ಎತ್ತರದ ಕೃಷಿ ಭೂಮಿಗೆ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಮೂಲಕ ಹರಿಸಲಾಗುವುದು. ಈ ಯೋಜನೆಯನ್ನು ಒಂದೂವರೆ ವರ್ಷದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.<br /> <br /> ಮಳವಳ್ಳಿ ತಾಲ್ಲೂಕಿನ 51 ಗ್ರಾಮಗಳ (ಬಿ.ಜಿ.ಪುರ ಹೋಬಳಿಯ ಪೂರ್ಣ ಭಾಗ ಮತ್ತು ಕಿರುಗಾವಲು ಹೋಬಳಿ ಕೆಲವು ಭಾಗ) ವ್ಯಾಪ್ತಿಯ ಜಮೀನುಗಳಿಗೆ ಇದರಿಂದ ಅನುಕೂಲ ಆಗಲಿದೆ. ಒಟ್ಟು 16 ಕೆರೆಗಳಿಗೆ ನೀರು ತುಂಬಿಸುವುದು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿದೆ. ಈ ಯೋಜನೆ ಜಾರಿ ನಂತರ ಈ ಭಾಗದಲ್ಲಿ ಕೃಷಿ ಉತ್ಪಾದನೆ 50 ಸಾವಿರ ಟನ್ನಿಂದ 2.5 ಲಕ್ಷ ಟನ್ಗೆ ಹೆಚ್ಚಾಗಲಿದೆ ಎಂದು ಮಂತ್ರಿ ಪರಿಷತ್ ಮೂಲಗಳು ತಿಳಿಸಿವೆ.<br /> <br /> ರಾವಣಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಾರೆಹಳ್ಳಿ ಕೆರೆ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ₹19.9 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಕ್ಕೂ ಮಂತ್ರಿ ಪರಿಷತ್ ಸಭೆ ಒಪ್ಪಿಗೆ ಸೂಚಿಸಿದೆ ಎಂದು ಗೊತ್ತಾಗಿದೆ.<br /> <strong>*<br /> ಕಡ್ಡಾಯ ನಿವೃತ್ತಿಗೆ ತೀರ್ಮಾನ<br /> ಬೆಂಗಳೂರು:</strong> ಸರ್ಕಾರದ ಖಜಾನೆ ಇಲಾಖೆಯಲ್ಲಿ ಸಹಾಯಕ ಖಜಾನಾಧಿಕಾರಿ ಹುದ್ದೆಯಲ್ಲಿದ್ದ ಕೆ. ವೀರಭದ್ರಪ್ಪ ಅವರಿಗೆ ಕಡ್ಡಾಯ ನಿವೃತ್ತಿ ನೀಡಲು ಸಭೆ ತೀರ್ಮಾನಿಸಿದೆ.</p>.<p>ವೀರಭದ್ರಪ್ಪ ಅವರು ಖಜಾನೆಯ ನಕಲಿ ಕೀಲಿ ಕೈ ಸಿದ್ಧಪಡಿಸಿ, ಅದನ್ನು ಅಲ್ಲಿನ ಗುಮಾಸ್ತನೊಬ್ಬನಿಗೆ ನೀಡಿದ್ದರು. ನಂತರ ಅಲ್ಲಿಂದ ಕೆಲವು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಹಾಗಾಗಿ ಇವರಿಗೆ ಕಡ್ಡಾಯ ನಿವೃತ್ತಿ ನೀಡಲು ತೀರ್ಮಾನಿಸಲಾಯಿತು ಎಂದು ಗೊತ್ತಾಗಿದೆ.<br /> <br /> ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದ ಹಾಸನ ಜಿಲ್ಲಾ ಖಜಾನೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎಂ.ಕೆ. ಮಂಜಪ್ಪ ಅವರ ಪಿಂಚಣಿಯ ಪೂರ್ಣ ಮೊತ್ತವನ್ನು ಶಾಶ್ವತವಾಗಿ ತಡೆಹಿಡಿಲು ಸಭೆ ತೀರ್ಮಾನ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದ 34.87 ಲಕ್ಷ ರೈತರಿಗೆ ಬರ ಪರಿಹಾರದ ಮೊತ್ತವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಮಂಗಳವಾರ ನಡೆದ ಮಂತ್ರಿ ಪರಿಷತ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.<br /> <br /> ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ರೂಪದಲ್ಲಿ ನೀಡಲು ಕೇಂದ್ರ ಸರ್ಕಾರ ₹ 1,540 ಕೋಟಿ ಬಿಡುಗಡೆ ಮಾಡಿದೆ. ಇದನ್ನು ಅರ್ಹ ರೈತರಿಗೆ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.<br /> <br /> <strong>ಸಭೆಯ ಇತರ ತೀರ್ಮಾನಗಳು:</strong><br /> *ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನವನ್ನು ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಎಂದು ಮಾರ್ಪಡಿಸಲು ಒಪ್ಪಿಗೆ<br /> *ಒಂಬತ್ತು ಸಹಕಾರಿ ನೂಲಿನ ಗಿರಣಿಗಳಿಗೆ ನೀಡಿರುವ ಸರ್ಕಾರಿ ಸಾಲವನ್ನು ಷೇರು ಬಂಡವಾಳವನ್ನಾಗಿ ಪರಿವರ್ತಿಸಲು ಒಪ್ಪಿಗೆ<br /> *ಕುಣಿಗಲ್ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಬಿ.ಆರ್. ಸುಶೀಲಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಲು ಸಮ್ಮತಿ. ಲಂಚ ಕೇಳಿದ್ದ ಇವರು ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.<br /> *ರಾಜ್ಯದಲ್ಲಿ ಪಾರ್ಸಿ ಸಮುದಾಯವನ್ನು ‘ಅಲ್ಪಸಂಖ್ಯಾತ’ ಎಂದು ಗುರುತಿಸಲು ಒಪ್ಪಿಗೆ.<br /> *ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಸಮ್ಮತಿ.<br /> *ಕೆಪಿಸಿಸಿ ಮಾಧ್ಯಮ ವಿಭಾಗ ಸಂಚಾಲಕ ದಿನೇಶ್ ಗೂಳಿಗೌಡ ಅವರನ್ನು ಗೃಹ ಸಚಿವರ ವಿಶೇಷಾಧಿಕಾರಿಯಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ<br /> ಇತರ ಪ್ರಮುಖ ತೀರ್ಮಾನಗಳು<br /> *ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ತ್ವರಿತ ನೀರಾವರಿ ಯೋಜನೆ ಸಲುವಾಗಿ ಹೆಚ್ಚುವರಿಯಾಗಿ ₹400 ಕೋಟಿ ಅವಧಿ ಸಾಲವನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲು ಒಪ್ಪಿಗೆ.<br /> *ಎಚ್.ಡಿ.ಕೋಟೆಯ ತಾರಕ ಬಲದಂಡೆ ನಾಲೆಯನ್ನು ₹14.5 ಕೋಟಿ ವೆಚ್ಚದಲ್ಲಿ ಆಧುನೀಕರಣ<br /> *ಬಳ್ಳಾರಿ ಜಿಲ್ಲೆ, ಹಡಗಲಿ ತಾಲ್ಲೂಕಿನ ಕಾಲ್ವಿ ತಾಂಡಾ ಸಮೀಪ ನಿರ್ಮಿಸಲು ಉದ್ದೇಶಿಸಿರುವ ₹58 ಕೋಟಿ ವೆಚ್ಚದ ಏತನೀರಾವರಿ ಯೋಜನೆ<br /> <br /> <strong>ಬಹುಮಹಡಿ ಕಟ್ಟಡಕ್ಕಿಲ್ಲ ಧಕ್ಕೆ:</strong> ವಿಕಾಸಸೌಧದ ಪಕ್ಕದಲ್ಲೇ ಇರುವ ಬಹುಮಹಡಿ ಕಟ್ಟಡವನ್ನು ಕೆಡವಿ, ಆ ಜಾಗದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಹೊಸ ಕಟ್ಟಡ ನಿರ್ಮಿಸಬೇಕು ಎಂಬ ಪ್ರಸ್ತಾವನೆಯನ್ನು ಮಂತ್ರಿ ಪರಿಷತ್ ಸಭೆ ತಿರಸ್ಕರಿಸಿದೆ ಎಂದು ಗೊತ್ತಾಗಿದೆ.<br /> <br /> ಲೋಕಾಯುಕ್ತ ಕಚೇರಿ, ಸರ್ಕಾರದ ವಿವಿಧ ಇಲಾಖೆಗಳ ಕಚೇರಿ ಸೇರಿದಂತೆ ಹತ್ತು ಹಲವು ಕಚೇರಿಗಳನ್ನು ಹೊಂದಿರುವ ಬಹುಮಹಡಿ ಕಟ್ಟಡವನ್ನು ಕೆಡವಿ, ಅಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ಹಿಂದೆ ಶಿಫಾರಸು ಮಾಡಿತ್ತು. ಆದರೆ, ಈ ಶಿಫಾರಸಿನ ಬಗ್ಗೆ ಪರಿಶೀಲನೆ ನಡೆಸಿದ ತಾಂತ್ರಿಕ ಸಿಬ್ಬಂದಿ ಬಹುಮಹಡಿ ಕಟ್ಟಡ ಇನ್ನೂ 30ರಿಂದ 40 ವರ್ಷ ಬಾಳುತ್ತದೆ ಎಂಬ ವರದಿ ನೀಡಿದ್ದಾರೆ. ಹಾಗಾಗಿ, ಕಟ್ಟಡ ಕೆಡವುವ ಶಿಫಾರಸು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.<br /> *<br /> <strong>₹ 593 ಕೋಟಿ ವೆಚ್ಚದ ಪೂರಿಗಾಲಿ ಯೋಜನೆಗೆ ಅಸ್ತು<br /> ಬೆಂಗಳೂರು: </strong>ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕಿನ 25,327 ಸಾವಿರ ಎಕರೆ ಕೃಷಿ ಭೂಮಿಗೆ ಹನಿ ಮತ್ತು ತುಂತುರು ನೀರಾವರಿ ಸೌಲಭ್ಯ ಕಲ್ಪಿಸುವ ₹ 593 ಕೋಟಿ ವೆಚ್ಚದ ಪೂರಿಗಾಲಿ ಸಮಗ್ರ ನೀರಾವರಿ ಯೋಜನೆಗೆ ಮಂತ್ರಿ ಪರಿಷತ್ ಸಭೆ ಅನುಮೋದನೆ ನೀಡಿದೆ.</p>.<p>ಮುಡುಕುತೊರೆ ಸಮೀಪದ ಕಾವೇರಿ ನದಿಯಿಂದ ನೀರನ್ನು ಪಂಪ್ ಮಾಡಿ ಎತ್ತರದ ಕೃಷಿ ಭೂಮಿಗೆ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಮೂಲಕ ಹರಿಸಲಾಗುವುದು. ಈ ಯೋಜನೆಯನ್ನು ಒಂದೂವರೆ ವರ್ಷದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.<br /> <br /> ಮಳವಳ್ಳಿ ತಾಲ್ಲೂಕಿನ 51 ಗ್ರಾಮಗಳ (ಬಿ.ಜಿ.ಪುರ ಹೋಬಳಿಯ ಪೂರ್ಣ ಭಾಗ ಮತ್ತು ಕಿರುಗಾವಲು ಹೋಬಳಿ ಕೆಲವು ಭಾಗ) ವ್ಯಾಪ್ತಿಯ ಜಮೀನುಗಳಿಗೆ ಇದರಿಂದ ಅನುಕೂಲ ಆಗಲಿದೆ. ಒಟ್ಟು 16 ಕೆರೆಗಳಿಗೆ ನೀರು ತುಂಬಿಸುವುದು ಈ ಯೋಜನೆ ವ್ಯಾಪ್ತಿಯಲ್ಲಿ ಸೇರಿದೆ. ಈ ಯೋಜನೆ ಜಾರಿ ನಂತರ ಈ ಭಾಗದಲ್ಲಿ ಕೃಷಿ ಉತ್ಪಾದನೆ 50 ಸಾವಿರ ಟನ್ನಿಂದ 2.5 ಲಕ್ಷ ಟನ್ಗೆ ಹೆಚ್ಚಾಗಲಿದೆ ಎಂದು ಮಂತ್ರಿ ಪರಿಷತ್ ಮೂಲಗಳು ತಿಳಿಸಿವೆ.<br /> <br /> ರಾವಣಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಾರೆಹಳ್ಳಿ ಕೆರೆ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ₹19.9 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಕ್ಕೂ ಮಂತ್ರಿ ಪರಿಷತ್ ಸಭೆ ಒಪ್ಪಿಗೆ ಸೂಚಿಸಿದೆ ಎಂದು ಗೊತ್ತಾಗಿದೆ.<br /> <strong>*<br /> ಕಡ್ಡಾಯ ನಿವೃತ್ತಿಗೆ ತೀರ್ಮಾನ<br /> ಬೆಂಗಳೂರು:</strong> ಸರ್ಕಾರದ ಖಜಾನೆ ಇಲಾಖೆಯಲ್ಲಿ ಸಹಾಯಕ ಖಜಾನಾಧಿಕಾರಿ ಹುದ್ದೆಯಲ್ಲಿದ್ದ ಕೆ. ವೀರಭದ್ರಪ್ಪ ಅವರಿಗೆ ಕಡ್ಡಾಯ ನಿವೃತ್ತಿ ನೀಡಲು ಸಭೆ ತೀರ್ಮಾನಿಸಿದೆ.</p>.<p>ವೀರಭದ್ರಪ್ಪ ಅವರು ಖಜಾನೆಯ ನಕಲಿ ಕೀಲಿ ಕೈ ಸಿದ್ಧಪಡಿಸಿ, ಅದನ್ನು ಅಲ್ಲಿನ ಗುಮಾಸ್ತನೊಬ್ಬನಿಗೆ ನೀಡಿದ್ದರು. ನಂತರ ಅಲ್ಲಿಂದ ಕೆಲವು ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು. ಹಾಗಾಗಿ ಇವರಿಗೆ ಕಡ್ಡಾಯ ನಿವೃತ್ತಿ ನೀಡಲು ತೀರ್ಮಾನಿಸಲಾಯಿತು ಎಂದು ಗೊತ್ತಾಗಿದೆ.<br /> <br /> ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದ ಹಾಸನ ಜಿಲ್ಲಾ ಖಜಾನೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಎಂ.ಕೆ. ಮಂಜಪ್ಪ ಅವರ ಪಿಂಚಣಿಯ ಪೂರ್ಣ ಮೊತ್ತವನ್ನು ಶಾಶ್ವತವಾಗಿ ತಡೆಹಿಡಿಲು ಸಭೆ ತೀರ್ಮಾನ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>