<p><strong>ಮೈಸೂರು:</strong> ಮಧ್ಯವರ್ತಿಗಳ ಹಾವಳಿ, ಬೆಲೆ ಕುಸಿತ, ಆತ್ಮಹತ್ಯೆ ಮುಂತಾದವುಗಳಿಂದ ನೊಂದಿರುವ ರೈತರೇ ಈಗ ಖಾಸಗಿ ಕಂಪೆನಿಯೊಂದನ್ನು ಸ್ಥಾಪಿಸಿಕೊಂಡಿದ್ದು ಅದು ಜ.31ರಂದು ಉದ್ಘಾಟನೆಯಾಗಲಿದೆ.</p>.<p>ಇಲ್ಲಿನ ರೈತರು ರೈತರಿಂದ ರೈತರಿಗಾಗಿಯೇ ‘ಬಾನುಲಿ ಕೃಷಿಕರ ಕಂಪೆನಿ’ ಎಂಬ ಖಾಸಗಿ ಲಿಮಿಟೆಡ್ ಕಂಪೆನಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಉಗಮಕ್ಕೆ ಕಾರಣವಾದದ್ದು ಆಕಾಶವಾಣಿ ಮೈಸೂರು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿ ಕೃಷಿ ಬೆಳಗು ಇಂಥ ವಿಶಿಷ್ಟ ಕಂಪೆನಿಯನ್ನು ಹುಟ್ಟುಹಾಕಲು ಸ್ಫೂರ್ತಿ ನೀಡಿತು.</p>.<p>ಕಂಪೆನಿಯ ಅಧ್ಯಕ್ಷರಾಗಿ ಮಂಡ್ಯದ ರಾಮಚಂದ್ರ, ವ್ಯವಸ್ಥಾಪಕ ನಿರ್ದೇಶಕರಾಗಿ ಜಿ.ಬಿ.ಸರಗೂರಿನ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶಕ ಮಂಡಳಿಯಲ್ಲಿ 13 ಮಂದಿ ನಿರ್ದೇಶಕರಿದ್ದಾರೆ. ರೈತರೇ ಷೇರುಗಳನ್ನು ಹೂಡಿ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.</p>.<p><strong>ಯೋಜನೆಗಳು: </strong>ಮಾರುಕಟ್ಟೆ ವ್ಯವಸ್ಥೆ ಸುಧಾರಣೆ, ಜೈವಿಕ ಇಂಧನ ಉತ್ಪನ್ನ ಘಟಕ ಸ್ಥಾಪನೆ (ಹೊಂಗೆ, ಬೇವು, ಹಿಪ್ಪೆ ಇತ್ಯಾದಿ), ರೈತರ ಸ್ವಾವಲಂಬನೆ, ರೈತರ ಆರ್ಥಿಕ ಸುಧಾರಣೆ ಮುಂತಾದ ಯೋಜನೆಗಳನ್ನು ಕಂಪೆನಿ ಹಾಕಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ 9945290334 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮಧ್ಯವರ್ತಿಗಳ ಹಾವಳಿ, ಬೆಲೆ ಕುಸಿತ, ಆತ್ಮಹತ್ಯೆ ಮುಂತಾದವುಗಳಿಂದ ನೊಂದಿರುವ ರೈತರೇ ಈಗ ಖಾಸಗಿ ಕಂಪೆನಿಯೊಂದನ್ನು ಸ್ಥಾಪಿಸಿಕೊಂಡಿದ್ದು ಅದು ಜ.31ರಂದು ಉದ್ಘಾಟನೆಯಾಗಲಿದೆ.</p>.<p>ಇಲ್ಲಿನ ರೈತರು ರೈತರಿಂದ ರೈತರಿಗಾಗಿಯೇ ‘ಬಾನುಲಿ ಕೃಷಿಕರ ಕಂಪೆನಿ’ ಎಂಬ ಖಾಸಗಿ ಲಿಮಿಟೆಡ್ ಕಂಪೆನಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಉಗಮಕ್ಕೆ ಕಾರಣವಾದದ್ದು ಆಕಾಶವಾಣಿ ಮೈಸೂರು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿ ಕೃಷಿ ಬೆಳಗು ಇಂಥ ವಿಶಿಷ್ಟ ಕಂಪೆನಿಯನ್ನು ಹುಟ್ಟುಹಾಕಲು ಸ್ಫೂರ್ತಿ ನೀಡಿತು.</p>.<p>ಕಂಪೆನಿಯ ಅಧ್ಯಕ್ಷರಾಗಿ ಮಂಡ್ಯದ ರಾಮಚಂದ್ರ, ವ್ಯವಸ್ಥಾಪಕ ನಿರ್ದೇಶಕರಾಗಿ ಜಿ.ಬಿ.ಸರಗೂರಿನ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶಕ ಮಂಡಳಿಯಲ್ಲಿ 13 ಮಂದಿ ನಿರ್ದೇಶಕರಿದ್ದಾರೆ. ರೈತರೇ ಷೇರುಗಳನ್ನು ಹೂಡಿ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.</p>.<p><strong>ಯೋಜನೆಗಳು: </strong>ಮಾರುಕಟ್ಟೆ ವ್ಯವಸ್ಥೆ ಸುಧಾರಣೆ, ಜೈವಿಕ ಇಂಧನ ಉತ್ಪನ್ನ ಘಟಕ ಸ್ಥಾಪನೆ (ಹೊಂಗೆ, ಬೇವು, ಹಿಪ್ಪೆ ಇತ್ಯಾದಿ), ರೈತರ ಸ್ವಾವಲಂಬನೆ, ರೈತರ ಆರ್ಥಿಕ ಸುಧಾರಣೆ ಮುಂತಾದ ಯೋಜನೆಗಳನ್ನು ಕಂಪೆನಿ ಹಾಕಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ 9945290334 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>