<p><strong>ಮದ್ದೂರು: </strong>ಉತ್ತರ ಭಾರತದ ಕೇದಾರನಾಥ ತೀರ್ಥ ಕ್ಷೇತ್ರದಲ್ಲಿ ಜಲಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದ ಪಟ್ಟಣದ 13 ನಿವಾಸಿಗಳ ಸುಳಿವು ಶನಿವಾರವೂ ಕೂಡ ಸಿಕ್ಕಿಲ್ಲ.ಪ್ರವಾಸಕ್ಕೆ ತೆರಳಿದ್ದ 18ಮಂದಿಯಲ್ಲಿ ಜಿ.ಎಂ. ಸೀತರಾಮು, ಅನಂತು, ಕೃತಿ, ರವಿಚಂದ್ರ, ನವ್ಯಶ್ರೀ ಅವರು ಕೇದಾರನಾಥದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಸುರಕ್ಷಿತವಾಗಿದ್ದಾರೆ. </p>.<p>ಆದರೆ, ಅವರೊಡನೆ ತೆರಳಿದ್ದ ಎಂ.ಜಿ. ನಾಗರಾಜರಾವ್, ಎಂ.ಜಿ. ಗುರುರಾಜ್, ಎಂ.ಜಿ. ರಮೇಶ್, ಸುಮಾ ನಾಗರಾಜರಾವ್, ನಾಗಶ್ರೀ, ಅತುಲ್ಚಂದ್ರ, ಅಮಿತ್ಚಂದ್ರ, ನಾಗಲಕ್ಷ್ಮೀ, ಅನಿರುದ್ಧ, ವಸಂತಕುಮಾರ್, ಗೀತಾ ಎಲ್ಲಿದ್ದಾರೆ ಎಂಬ ಸುಳಿವು ಪತ್ತೆಯಾಗಿಲ್ಲ.ಆಗ್ರಹ: ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಐದು ಮಂದಿಯನ್ನು ಈ ಕೂಡಲೇ ರಾಜ್ಯಕ್ಕೆ ವಾಪಸ್ ಕರೆತರಲು ಅಗತ್ಯ ನೆರವು ನೀಡಬೇಕು.</p>.<p>ಅಲ್ಲದೇ, ನಾಪತ್ತೆಯಾದ 13 ಯಾತ್ರಿಗಳ ಪತ್ತೆಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ನಾಪತ್ತೆಯಾಗಿರುವವರ ಹತ್ತಿರದ ಸಂಬಂಧಿ ಎಂ.ಕೆ. ಸುಜಯಸಿಂಹ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು: </strong>ಉತ್ತರ ಭಾರತದ ಕೇದಾರನಾಥ ತೀರ್ಥ ಕ್ಷೇತ್ರದಲ್ಲಿ ಜಲಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದ ಪಟ್ಟಣದ 13 ನಿವಾಸಿಗಳ ಸುಳಿವು ಶನಿವಾರವೂ ಕೂಡ ಸಿಕ್ಕಿಲ್ಲ.ಪ್ರವಾಸಕ್ಕೆ ತೆರಳಿದ್ದ 18ಮಂದಿಯಲ್ಲಿ ಜಿ.ಎಂ. ಸೀತರಾಮು, ಅನಂತು, ಕೃತಿ, ರವಿಚಂದ್ರ, ನವ್ಯಶ್ರೀ ಅವರು ಕೇದಾರನಾಥದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಸುರಕ್ಷಿತವಾಗಿದ್ದಾರೆ. </p>.<p>ಆದರೆ, ಅವರೊಡನೆ ತೆರಳಿದ್ದ ಎಂ.ಜಿ. ನಾಗರಾಜರಾವ್, ಎಂ.ಜಿ. ಗುರುರಾಜ್, ಎಂ.ಜಿ. ರಮೇಶ್, ಸುಮಾ ನಾಗರಾಜರಾವ್, ನಾಗಶ್ರೀ, ಅತುಲ್ಚಂದ್ರ, ಅಮಿತ್ಚಂದ್ರ, ನಾಗಲಕ್ಷ್ಮೀ, ಅನಿರುದ್ಧ, ವಸಂತಕುಮಾರ್, ಗೀತಾ ಎಲ್ಲಿದ್ದಾರೆ ಎಂಬ ಸುಳಿವು ಪತ್ತೆಯಾಗಿಲ್ಲ.ಆಗ್ರಹ: ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಐದು ಮಂದಿಯನ್ನು ಈ ಕೂಡಲೇ ರಾಜ್ಯಕ್ಕೆ ವಾಪಸ್ ಕರೆತರಲು ಅಗತ್ಯ ನೆರವು ನೀಡಬೇಕು.</p>.<p>ಅಲ್ಲದೇ, ನಾಪತ್ತೆಯಾದ 13 ಯಾತ್ರಿಗಳ ಪತ್ತೆಗೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ನಾಪತ್ತೆಯಾಗಿರುವವರ ಹತ್ತಿರದ ಸಂಬಂಧಿ ಎಂ.ಕೆ. ಸುಜಯಸಿಂಹ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>