<p><strong>ದಾವಣಗೆರೆ:</strong> ಬಯಲು ಶೌಚಾಲಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಿದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ರಾಗಿಮಸಲವಾಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. <br /> <br /> ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಹರಪನಹಳ್ಳಿಯ ರಾಗಿಮಸಲವಾಡ ಗ್ರಾಮದ ಹೆಣ್ಣುಮಕ್ಕಳಿಗೆ ಶೌಚಾಲಯ ಜಾಗದ್ದೇ ದೊಡ್ಡ ಸಮಸ್ಯೆ. ಗ್ರಾಮ ಪಂಚಾಯ್ತಿಗೆ ಸೇರಿದ ಜಮೀನನ್ನು ಬಹಿರ್ದೆಸೆಗಾಗಿ ಈ ಗ್ರಾಮದ ಮಹಿಳೆಯರು ದಶಕಗಳಿಂದ ಬಯಲು ಶೌಚಾಲಯದಂತೆ ಬಳಸುತ್ತಿದ್ದರು. <br /> <br /> ಆದರೆ, ಈಚೆಗೆ ಆ ಸ್ಥಳವನ್ನು ಗ್ರಾಮದ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.ಗ್ರಾ.ಪಂ. ಜಮೀನಿನ ಪಕ್ಕದಲ್ಲೇ ಇದ್ದ ವಿಮಲಮ್ಮ (ಹೆಸರು ಬದಲಾಯಿಸಲಾಗಿದೆ) ಎಂಬುವರ ಜಮೀನನ್ನೂ ಅಕ್ರಮವಾಗಿ ಒತ್ತುವರಿ ಮಾಡಲು ಯತ್ನಿಸಿದ್ದ ಆ ಮುಖಂಡನನ್ನು ಪ್ರಶ್ನಿಸಿದ್ದಕ್ಕೆ ವಿಮಲಮ್ಮ (38) ಅವರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಲಾಗಿದೆ. ಈ ಸಂಬಂಧ ಹಲುವಾಗಿಲು ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. <br /> <br /> ಪ್ರಕರಣದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ನೊಂದಿರುವ ವಿಮಲಮ್ಮ `ಪ್ರಜಾವಾಣಿ~ ಜತೆ ಹಂಚಿಕೊಂಡ ನೋವಿನ ಕಥೆ ಇಲ್ಲಿದೆ.`ನಾವು ಕತ್ತಲಾದ ಮ್ಯಾಲಾ ಆ ಜಮೀನಿನಲ್ಲಿ (ಕೋಟೆ ಜಾಗ) ಬಹಿರ್ದೆಸೆಗೆ ಹೋಗ್ತಾ ಇದ್ವಿ. ಇದೇ ಜಾಗದ ಪಕ್ಕ ನಮ್ಮ ಹೊಲ ಕೂಡಾ ಐತಿ. ಈಗಾಗಲೇ ಕೋಟೆ ಜಾಗ ಒತ್ತುವರಿ ಮಾಡಿಕೊಂಡಿದ್ದ ಗ್ರಾಮದ ಪ್ರಮುಖ ರಾಜಕೀಯ ಮುಖಂಡ ನಮ್ಮ ಜಮೀನನ್ನೂ ಒತ್ತುವರಿ ಮಾಡಿದ್ದ.<br /> <br /> ಅದನ್ನು ಪ್ರಶ್ನಿಸಿ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ವಿ. ಪೊಲೀಸರು ಇಬ್ಬರನ್ನೂ ಕರೆಸಿ ರಾಜಿ ಮಾಡಿ ಕಳುಹಿಸಿದ್ರು. ಆದರೆ, ರಾಜಿ ಮಾಡಿದ ಅವತ್ತಿನ ರಾತ್ರಿಯೇ ಗುಂಪೊಂದು ನನ್ನ ಸೀರೆ, ಜಾಕೀಟು ಬಿಚ್ಚಿ ಸಾಯೋಹಂಗ ಹೊಡೀತು. ಗ್ರಾಮದ ಅಷ್ಟು ಜನರ ಮುಂದೆ ಆ ಗುಂಪು ನನ್ನನ್ನು ಬೆತ್ತಲೆಗೊಳಿಸಿದ್ದನ್ನು ನೆನಪಿಸಿಕೊಂಡರೆ ಈಗಲೂ ಅಳು ಬರುತ್ತೆ. ಮೊದ್ಲು ಈ ಊರಾಗ ಒಂದು ಸಮುದಾಯ ಶೌಚಾಲಯ ಕಟ್ಟಿಸಿಕೊಟ್ಟು, ಪುಣ್ಯ ಕಟ್ಟಿಕೊಳ್ರಿ~ ಎನ್ನುತ್ತಾ ಕಣ್ಣೀರಾದರು ವಿಮಲಮ್ಮ. <br /> <br /> `ಗಲಾಟೆಯಲ್ಲಿ ಆ ಜನರ ಗುಂಪು ನನ್ನ ಮರ್ಮಾಂಗಕ್ಕೆ ಜಾಡಿಸಿ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಯಿತು. ನನ್ನ ಗಂಡ, ಸುತ್ತಮುತ್ತಲಿನ ಹೆಂಗಸ್ರು ಸೇರಿ ನನ್ನ ಬಿಡಿಸಿಕೊಂಡು ದಾವಣಗೆರೆ ಆಸ್ಪತ್ರೆಗೆ ಸೇರಿಸಿ ಬದುಕಿಸಿಕೊಂಡ್ರು. ಗ್ರಾ.ಪಂ. ಯವರು ಈಗಲಾದರೂ ನಮ್ಮ ಮೇಲೆ ಕರುಣೆ ತೋರ್ಸಿ, ಆ ಪ್ರಭಾವಿ ರಾಜಕೀಯ ಮುಖಂಡನಿಂದ ಕೋಟೆ ಜಾಗ ತೆರವುಗೊಳಿಸಲಿ. ಆ ಮುಖಂಡ ತನಗಾಗಿ ಕಟ್ಟಿಸಿಕೊಂಡಿರುವ ವೈಯಕ್ತಿಕ ಶೌಚಾಲಯ ಕೆಡವಿ, ಗ್ರಾಮದ ಮಹಿಳೆಯರಿಗೆ ಸಮುದಾಯ ಶೌಚಾಲಯ ಕಟ್ಟಿಸಿಕೊಡಲಿ~ ಎಂದು ವಿಮಲಮ್ಮ ಮನವಿ ಮಾಡುತ್ತಾರೆ.<br /> <br /> `ಕೋಟೆ ಜಾಗದ ಅಕ್ರಮ ಒತ್ತುವರಿ ಖಂಡಿಸಿ ಗ್ರಾಮದ ಮಹಿಳೆಯರು ಗ್ರಾ.ಪಂ. ಅಧ್ಯಕ್ಷ ಮತ್ತು ಪಿಡಿಒಗೆ ಮನವಿ ಕೊಟ್ಟಿದ್ದಾರೆ. ಪಂಚಾಯ್ತಿ ಯಾವುದೇ ಕ್ರಮ ಕೈಗೊಂಡಿಲ್ಲ. ಒತ್ತುವರಿ ವಿಷಯದಲ್ಲಿ ಸ್ಥಳೀಯ ರಾಜಕೀಯ ಮುಖಂಡರೊಬ್ಬರ ಜತೆ ಬಿಲ್ ಕಲೆಕ್ಟರ್ ಒಬ್ಬರು ಷಾಮೀಲಾಗಿದ್ದಾರೆ. <br /> <br /> ಇವತ್ತು ವಿಮಲಮ್ಮ ಅವರ ಮೇಲೆ ಹಲ್ಲೆ ಆಗಿದೆ. ನಾಳೆ ಇನ್ನೊಬ್ಬ ಮಹಿಳೆ ಮೇಲೆ ಹಲ್ಲೆ ಆಗಬಹುದು. ಈಗಲಾದರೂ ಈ ಸಮಸ್ಯೆ ನಿವಾರಣೆ ಮಾಡಬೇಕು~ ಎಂದು ಒತ್ತಾಯಿಸುತ್ತಾರೆ ಗ್ರಾಮದ ರೈತ ಮುಖಂಡ ಶಂಭುಲಿಂಗಪ್ಪ ಮತ್ತು `ನೇಚರ್~ ಸಾಮಾಜಿಕ ಸಂಘಟನೆ ಮುಖ್ಯಸ್ಥ ಮಂಜುನಾಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ಬಯಲು ಶೌಚಾಲಯಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಿದ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ರಾಗಿಮಸಲವಾಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. <br /> <br /> ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಹರಪನಹಳ್ಳಿಯ ರಾಗಿಮಸಲವಾಡ ಗ್ರಾಮದ ಹೆಣ್ಣುಮಕ್ಕಳಿಗೆ ಶೌಚಾಲಯ ಜಾಗದ್ದೇ ದೊಡ್ಡ ಸಮಸ್ಯೆ. ಗ್ರಾಮ ಪಂಚಾಯ್ತಿಗೆ ಸೇರಿದ ಜಮೀನನ್ನು ಬಹಿರ್ದೆಸೆಗಾಗಿ ಈ ಗ್ರಾಮದ ಮಹಿಳೆಯರು ದಶಕಗಳಿಂದ ಬಯಲು ಶೌಚಾಲಯದಂತೆ ಬಳಸುತ್ತಿದ್ದರು. <br /> <br /> ಆದರೆ, ಈಚೆಗೆ ಆ ಸ್ಥಳವನ್ನು ಗ್ರಾಮದ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ.ಗ್ರಾ.ಪಂ. ಜಮೀನಿನ ಪಕ್ಕದಲ್ಲೇ ಇದ್ದ ವಿಮಲಮ್ಮ (ಹೆಸರು ಬದಲಾಯಿಸಲಾಗಿದೆ) ಎಂಬುವರ ಜಮೀನನ್ನೂ ಅಕ್ರಮವಾಗಿ ಒತ್ತುವರಿ ಮಾಡಲು ಯತ್ನಿಸಿದ್ದ ಆ ಮುಖಂಡನನ್ನು ಪ್ರಶ್ನಿಸಿದ್ದಕ್ಕೆ ವಿಮಲಮ್ಮ (38) ಅವರನ್ನು ವಿವಸ್ತ್ರಗೊಳಿಸಿ, ಅಮಾನುಷವಾಗಿ ಥಳಿಸಲಾಗಿದೆ. ಈ ಸಂಬಂಧ ಹಲುವಾಗಿಲು ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿದೆ. <br /> <br /> ಪ್ರಕರಣದಲ್ಲಿ ದೈಹಿಕ ಮತ್ತು ಮಾನಸಿಕವಾಗಿ ನೊಂದಿರುವ ವಿಮಲಮ್ಮ `ಪ್ರಜಾವಾಣಿ~ ಜತೆ ಹಂಚಿಕೊಂಡ ನೋವಿನ ಕಥೆ ಇಲ್ಲಿದೆ.`ನಾವು ಕತ್ತಲಾದ ಮ್ಯಾಲಾ ಆ ಜಮೀನಿನಲ್ಲಿ (ಕೋಟೆ ಜಾಗ) ಬಹಿರ್ದೆಸೆಗೆ ಹೋಗ್ತಾ ಇದ್ವಿ. ಇದೇ ಜಾಗದ ಪಕ್ಕ ನಮ್ಮ ಹೊಲ ಕೂಡಾ ಐತಿ. ಈಗಾಗಲೇ ಕೋಟೆ ಜಾಗ ಒತ್ತುವರಿ ಮಾಡಿಕೊಂಡಿದ್ದ ಗ್ರಾಮದ ಪ್ರಮುಖ ರಾಜಕೀಯ ಮುಖಂಡ ನಮ್ಮ ಜಮೀನನ್ನೂ ಒತ್ತುವರಿ ಮಾಡಿದ್ದ.<br /> <br /> ಅದನ್ನು ಪ್ರಶ್ನಿಸಿ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ವಿ. ಪೊಲೀಸರು ಇಬ್ಬರನ್ನೂ ಕರೆಸಿ ರಾಜಿ ಮಾಡಿ ಕಳುಹಿಸಿದ್ರು. ಆದರೆ, ರಾಜಿ ಮಾಡಿದ ಅವತ್ತಿನ ರಾತ್ರಿಯೇ ಗುಂಪೊಂದು ನನ್ನ ಸೀರೆ, ಜಾಕೀಟು ಬಿಚ್ಚಿ ಸಾಯೋಹಂಗ ಹೊಡೀತು. ಗ್ರಾಮದ ಅಷ್ಟು ಜನರ ಮುಂದೆ ಆ ಗುಂಪು ನನ್ನನ್ನು ಬೆತ್ತಲೆಗೊಳಿಸಿದ್ದನ್ನು ನೆನಪಿಸಿಕೊಂಡರೆ ಈಗಲೂ ಅಳು ಬರುತ್ತೆ. ಮೊದ್ಲು ಈ ಊರಾಗ ಒಂದು ಸಮುದಾಯ ಶೌಚಾಲಯ ಕಟ್ಟಿಸಿಕೊಟ್ಟು, ಪುಣ್ಯ ಕಟ್ಟಿಕೊಳ್ರಿ~ ಎನ್ನುತ್ತಾ ಕಣ್ಣೀರಾದರು ವಿಮಲಮ್ಮ. <br /> <br /> `ಗಲಾಟೆಯಲ್ಲಿ ಆ ಜನರ ಗುಂಪು ನನ್ನ ಮರ್ಮಾಂಗಕ್ಕೆ ಜಾಡಿಸಿ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಯಿತು. ನನ್ನ ಗಂಡ, ಸುತ್ತಮುತ್ತಲಿನ ಹೆಂಗಸ್ರು ಸೇರಿ ನನ್ನ ಬಿಡಿಸಿಕೊಂಡು ದಾವಣಗೆರೆ ಆಸ್ಪತ್ರೆಗೆ ಸೇರಿಸಿ ಬದುಕಿಸಿಕೊಂಡ್ರು. ಗ್ರಾ.ಪಂ. ಯವರು ಈಗಲಾದರೂ ನಮ್ಮ ಮೇಲೆ ಕರುಣೆ ತೋರ್ಸಿ, ಆ ಪ್ರಭಾವಿ ರಾಜಕೀಯ ಮುಖಂಡನಿಂದ ಕೋಟೆ ಜಾಗ ತೆರವುಗೊಳಿಸಲಿ. ಆ ಮುಖಂಡ ತನಗಾಗಿ ಕಟ್ಟಿಸಿಕೊಂಡಿರುವ ವೈಯಕ್ತಿಕ ಶೌಚಾಲಯ ಕೆಡವಿ, ಗ್ರಾಮದ ಮಹಿಳೆಯರಿಗೆ ಸಮುದಾಯ ಶೌಚಾಲಯ ಕಟ್ಟಿಸಿಕೊಡಲಿ~ ಎಂದು ವಿಮಲಮ್ಮ ಮನವಿ ಮಾಡುತ್ತಾರೆ.<br /> <br /> `ಕೋಟೆ ಜಾಗದ ಅಕ್ರಮ ಒತ್ತುವರಿ ಖಂಡಿಸಿ ಗ್ರಾಮದ ಮಹಿಳೆಯರು ಗ್ರಾ.ಪಂ. ಅಧ್ಯಕ್ಷ ಮತ್ತು ಪಿಡಿಒಗೆ ಮನವಿ ಕೊಟ್ಟಿದ್ದಾರೆ. ಪಂಚಾಯ್ತಿ ಯಾವುದೇ ಕ್ರಮ ಕೈಗೊಂಡಿಲ್ಲ. ಒತ್ತುವರಿ ವಿಷಯದಲ್ಲಿ ಸ್ಥಳೀಯ ರಾಜಕೀಯ ಮುಖಂಡರೊಬ್ಬರ ಜತೆ ಬಿಲ್ ಕಲೆಕ್ಟರ್ ಒಬ್ಬರು ಷಾಮೀಲಾಗಿದ್ದಾರೆ. <br /> <br /> ಇವತ್ತು ವಿಮಲಮ್ಮ ಅವರ ಮೇಲೆ ಹಲ್ಲೆ ಆಗಿದೆ. ನಾಳೆ ಇನ್ನೊಬ್ಬ ಮಹಿಳೆ ಮೇಲೆ ಹಲ್ಲೆ ಆಗಬಹುದು. ಈಗಲಾದರೂ ಈ ಸಮಸ್ಯೆ ನಿವಾರಣೆ ಮಾಡಬೇಕು~ ಎಂದು ಒತ್ತಾಯಿಸುತ್ತಾರೆ ಗ್ರಾಮದ ರೈತ ಮುಖಂಡ ಶಂಭುಲಿಂಗಪ್ಪ ಮತ್ತು `ನೇಚರ್~ ಸಾಮಾಜಿಕ ಸಂಘಟನೆ ಮುಖ್ಯಸ್ಥ ಮಂಜುನಾಥ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>